ಆರೆಸ್ಸೆಸ್ ಶಾಖೆಗಳಿಗೆ ಸರ್ಕಾರಿ ಸಿಬ್ಬಂದಿ ಪ್ರವೇಶ ನಿಷಿದ್ಧ: ಕೈ ಪ್ರಣಾಳಿಕೆ
ಭೋಪಾಲ್, ನವೆಂಬರ್ 11: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಮುರಿದು ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಪ್ರಕಟಿಸಿದೆ.
ಸರ್ಕಾರಿ ಕಟ್ಟಡ, ಕಚೇರಿ ಆವರಣಗಳಲ್ಲಿ ಆರೆಸ್ಸೆಸ್ ಶಾಖೆಗಳಿಗೆ ನಿಷೇಧ. ಸರ್ಕಾರಿ ಸಿಬ್ಬಂದಿಗಳು ಆರೆಸ್ಸೆಸ್ ಶಾಖೆಗಳಿಗೆ ಭೇಟಿ ನೀಡುವುದಕ್ಕೆ ಇರುವ ಅನುಮತಿಯನ್ನು ಹಿಂಪಡೆಯುವುದು ಸೇರಿದಂತೆ ಅನೇಕ ಅಂಶಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿವೆ.
ಚಿತ್ರಕೂಟದಿಂದ ಮಧ್ಯಪ್ರದೇಶ ಗಡಿಯವರೆಗೆ ಶ್ರೀರಾಮ ಕ್ರಮಿಸಿದ ಪಥದ ಮರುನಿರ್ಮಾಣ, ಸಂಸ್ಕೃತ ಭಾಷೆ ಉತ್ತೇಜನಕ್ಕೆ ಹೊಸ ವಿಶ್ವವಿದ್ಯಾಲಯ, ನರ್ಮದಾ-ತಪತೀ-ಕ್ಷಿಪ್ರಾ-ಮಂದಾಕಿನಿ ನದಿಗಳಿಗೆ ಟ್ರಸ್ಟ್ ಸ್ಥಾಪನೆ, ಪೂಜಾರಿಗಳ ವೇತನ ಹೆಚ್ಚಳ, ಔದ್ಯಮಿಕ ಪ್ರಮಾಣದಲ್ಲಿ ಗೋಮೂತ್ರ ಮತ್ತು ಸಗಣಿ ಉತ್ಪಾದನೆ, ಪ್ರತಿ ಗ್ರಾಮಪಂಚಾಯತಿಯಲ್ಲಿ ಗೋಶಾಲೆ, ಶಾಸ್ತ್ರಗಳಲ್ಲಿ ಉಲ್ಲೇಖಿಸಿದ ಎಲ್ಲ ನದಿಗಳ ಪುನರುಜ್ಜೀವನ, - ಇವೆಲ್ಲ ಆಗಬೇಕೆ? ಹಾಗಾದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸಿಗೆ ಮತ ನೀಡಿ. ಅದರ ಪ್ರಣಾಳಿಕೆಯಲ್ಲಿ ಇತರೆ ಭರವಸೆಗಳೊಂದಿಗೆ ಈ ಭರವಸೆಗಳೂ ಇವೆ