ಅದ್ಭುತ ಚಿತ್ರದ ಹಿಂದಿನ ಅಸಲಿ ಕತೆ ಏನು?
ತಾಯಿಯೊಬ್ಬಾಕೆ ಸರಳಿನ ಆಚೆ ಇರುವ ತನ್ನ ಮಗುವಿಗೆ ಹಾಲುಣಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅದ್ಭುತವಾಗಿರುವ ಈ ಚಿತ್ರ ಅಸ್ಸಾಂ ನ 'ಡಿಟೆನ್ಶನ್ ಕ್ಯಾಂಪ್' ನದ್ದು ಎಂಬ ಒಕ್ಕಣೆಯೊಂದಿಗೆ ಫೇಸ್ಬುಕ್ ಟ್ವಿಟ್ಟರ್ಗಳಲ್ಲಿ ಹರಿದಾಡುತ್ತಿದೆ.
'ಎನ್ಆರ್ಸಿ ನಿಂದಾಗಿ ಪೌರತ್ವ ಕಳೆದುಕೊಂಡ ಮುಸ್ಲಿಂ ತಾಯಿ ತನ್ನ ಮಗುವಿಗೆ ಡಿಟೆನ್ಶನ್ ಕ್ಯಾಂಪ್ ಒಳಗಡೆಯಿಂದಲೇ ಹಾಲುಣಿಸುತ್ತಿದ್ದಾಳೆ, ಅಸ್ಸಾಂ ಒಂದು ರಾಜ್ಯದಲ್ಲಿಯೇ ಈ ಸ್ಥಿತಿಯಾದರೆ ಇಡೀಯ ದೇಶದ ಸ್ಥಿತಿ ಏನಾಗಬಹದು ಊಹಿಸಿ' ಎಂಬ ಒಕ್ಕಣೆ ಈ ಚಿತ್ರಕ್ಕೆ ನೀಡಲಾಗಿದೆ.

ದೇಶದಲ್ಲಿ ಡಿಟೆನ್ಶನ್ ಕ್ಯಾಂಪ್ ಮಾಡಲಾಗುವುದಿಲ್ಲ ಎಂದು ಪ್ರಧಾನಿ ಮೊದಿ ಹೇಳಿದ ಬೆನ್ನಲ್ಲೇ ಈ ಚಿತ್ರ ವೈರಲ್ ಆಗಿದ್ದು, ಬಂಗಾಳಿಗರೊಬ್ಬರು ಹಾಕಿದ್ದ ಈ ಪೋಸ್ಟ್ಗೆ ಸಾವಿರಾರು ಶೇರ್, ಲೈಕ್, ಕಮೆಂಟ್ಗಳು ಈ ಚಿತ್ರಕ್ಕೆ ಸಿಕ್ಕಿವೆ. ಈ ಚಿತ್ರ ನಿಜವೂ ಅದ್ಭುತವಾಗಿದೆ ಆದರೆ ಇದಕ್ಕೆ ನೀಡಿರುವ ಒಕ್ಕಣೆ ನಿಜವಲ್ಲ.
ಚಿತ್ರದಲ್ಲಿ ತ್ರಾಸುಪಟ್ಟು ಮಗುವಿಗೆ ಹಾಲುಣಿಸುತ್ತಿರುವ ಮಹಿಳೆ ಅಸ್ಸಾಂನವರಲ್ಲ. ಆ ಚಿತ್ರ ತೆಗೆದಿರುವುದು ಭಾರತದಲ್ಲಿ ಅಲ್ಲ, ಅರ್ಜೆಂಟೀನಾದಲ್ಲಿ.
ಈ ಚಿತ್ರದ ಸಂದರ್ಭವೇನು ಎಂಬುದು ಸರಿಯಾಗಿ ಗೊತ್ತಾಗಿಲ್ಲ. ಯಾವುದೋ ಗಲಭೆ ಆದಾಗ ನೆರೆ-ಹೊರೆ ಪ್ರದೇಶವನ್ನು ಬೇರೆ-ಬೇರೆ ಮಾಡಲು ಮಧ್ಯೆ ಗ್ರಿಲ್ಗಳನ್ನು ಹಾಕಲಾಗಿತ್ತು. ಆಗ ಈ ಚಿತ್ರವನ್ನು ತೆಗೆಯಲಾಗಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಇಂಡಿಯಾ ಟುಡೆ ಫ್ಯಾಕ್ಸ್ ಚೆಕ್ ನಡೆಸಿದ್ದು, ಬ್ಲಾಗ್ ಒಂದರಲ್ಲಿ ಈ ಚಿತ್ರವನ್ನು ಮೊದಲಿಗೆ ಪ್ರಕಟಿಸಲಾಗಿದೆ. ಅರ್ಜೆಂಟೀನಾದ ಸ್ಥಳೀಯ ಭಾಷೆಯಲ್ಲಿ ಚಿತ್ರದ ಬಗ್ಗೆ ವರದಿ ಬರೆಯಲಾಗಿದೆ. ಗೂಗಲ್ ಟ್ರಾನ್ಸ್ಲೇಟರ್ ಮೂಲಕ ತರ್ಜುಮೆ ಮಾಡಿದಾಗ ಮೇಲಿನ ಮಾಹಿತಿ ಗೊತ್ತಾಗಿದೆ.
-
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ












Click it and Unblock the Notifications