ಚುನಾವಣಾ ಪ್ರಚಾರಕ್ಕೆ ಬಹುತೇಕ ಹೆಲಿಕಾಪ್ಟರ್ಗಳು ಬುಕ್
ಮುಂಬೈ, ಮಾರ್ಚ್ 19: ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ರಾಜಕೀಯ ಪಕ್ಷಗಳು, ಮುಖಂಡರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಬಿರುಸಿನ ಪ್ರಚಾರಕ್ಕಾಗಿ ರಾಜಕೀಯ ಮುಖಂಡರು ಹೆಲಿಕಾಪ್ಟರ್ಗಳ ಮೊರೆ ಹೋಗಿದ್ದಾರೆ.
ಹೌದು, ಚುನಾವಣೆ ಬಂತೆಂದರೆ ಬಾನಿನಲ್ಲಿ ಹೆಲಿಕಾಪ್ಟರ್ಗಳ ಹಾರಾಟ ಹೆಚ್ಚಾಗುತ್ತದೆ. ಈ ಬಾರಿ ಹಾರಲಿರುವ ಹೆಲಿಕಾಪ್ಟರ್ಗಳ ಸಂಖ್ಯೆ ಹಿಂದಿಗಿಂತಲೂ ಹೆಚ್ಚಾಗಲಿವೆ.
ಚುನಾವಣೆ ಘೋಷಣೆ ಆಗುತ್ತಿದ್ದಂತೆ, ಬಹುತೇಕ ಹೆಲಿಕಾಪ್ಟರ್ ಸೇವೆ ಒದಗಿಸುವ ಸಂಸ್ಥೆಗಳ ಬಾಗಿಲ ಮುಂದೆ 'ಬುಕಿಂಗ್ ಕ್ಲೋಸ್ಡ್' ಬೋರ್ಡ್ಗಳನ್ನು ನೇತು ಹಾಕಲಾಗಿದೆ. ಬಹುತೇಕ ರಾಜಕೀಯ ಪಕ್ಷಗಳು ಹೆಲಿಕಾಪ್ಟರ್ಗಳನ್ನು ಪ್ರಚಾರ ಮುಗಿಯುವವರೆಗೂ ಬುಕ್ ಮಾಡಿಯಾಗಿದೆ.

ಬಹುತೇಕ ರಾಜ್ಯಗಳ ಪ್ರಮುಖ ಮುಖಂಡರು ಹೆಲಿಕಾಪ್ಟರ್ಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಸಣ್ಣ ವಿಮಾನಗಳನ್ನು ಸಹ ಬುಕ್ ಮಾಡಿಕೊಂಡಿದ್ದಾರೆ. ಸಣ್ಣ ಏರ್ಸ್ಟ್ರಿಪ್ ಮೇಲೆ ಇಳಿಯುವ ಈ ವಿಮಾನಗಳಿಗೆ ಈ ಬಾರಿ ದೇಶದಾದ್ಯಂತ ಬೇಡಿಕೆ ಹೆಚ್ಚಿದೆಯಂತೆ.
ದೇಶದಾದ್ಯಂತ 275 ನೊಂದಣಿ ಆಗಿರುವ ಹೆಲಿಕಾಪ್ಟರ್ಗಳು ಇವೆ. ಸರ್ಕಾರಿ ಹೆಲಿಕಾಪ್ಟರ್ಗಳು, ಸಂಘ-ಸಂಸ್ಥೆಯವು, ಖಾಸಗಿ ಮತ್ತು ಸೇವೆ ಒದಗಿಸುವ ಹೆಲಿಕಾಪ್ಟರ್ಗಳು ಇನ್ನೂ ಹಲವು ಇವೆ.
ರಾಜ್ಯದಲ್ಲಿ ಸಹ ಈಗಾಗಲೇ ರಾಜಕೀಯ ಮುಖಂಡರುಗಳು ಹೆಲಿಕಾಪ್ಟರ್ಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಜೊತೆಗೆ ಇಲ್ಲಿನ ಕೆಲವು ನಾಯಕರ ಬಳಿ ಸ್ವಂತದ ಹೆಲಿಕಾಪ್ಟರ್ಗಳು ಸಹ ಇವೆ.
ಹೆಲಿಕಾಪ್ಟರ್ಗಳಲ್ಲಿ ಅವುಗಳ ಸಾಮರ್ಥ್ಯಕ್ಕೆ ತಕ್ಕಂತೆ ಹಲವು ವಿಧಗಳು ಇರುತ್ತವೆ. ಡಬಲ್ ಎಂಜಿನ್ ಹೆಲಿಕಾಪ್ಟರ್, ಹೆಚ್ಚು ಪ್ರಯಾಣಿಕರ ಹೊತ್ತೊಯ್ಯುವ ಸಾಮರ್ಥ್ಯ ಇರುವ ಹೆಲಿಕಾಪ್ಟರ್ಗಳು ಹೀಗೆ ಹಲವು ವಿಧಧ ಹೆಲಿಕಾಪ್ಟರ್ಗಳು ಇವೆ.
ಹೆಲಿಕಾಪ್ಟರ್ಗಳ ಸಾಮರ್ಥ್ಯಗಳ ಆಧಾರದಲ್ಲಿ ಅವುಗಳ ಬಾಡಿಗೆ ನಿರ್ಧರಿತವಾಗಿರುತ್ತದೆ. ಗಂಟೆ ಒಂದಕ್ಕೆ 75,000 ದಿಂದ 3,50,000 ಲಕ್ಷ ಬಾಡಿಗೆಗೆ ದೊರಕುವ ಹೆಲಿಕಾಫ್ಟರ್ಗಳು ಮಾರುಕಟ್ಟೆಯಲ್ಲಿ ಇವೆ. ಅವು ಹಾರಾಟ ನಡೆಸುವ ಅವಧಿ ಮಾತ್ರವೇ ಬಾಡಿಗೆಗೆ ಪರಿಗಣಿಸಲಾಗುತ್ತದೆ. ಕೆಲವು ಸಂಸ್ಥೆಗಳು ದಿನದ ಲೆಕ್ಕದಲ್ಲೂ ಬಾಡಿಗೆಗೆ ನೀಡುತ್ತವೆ.
ಹೆಲಿಕಾಫ್ಟರ್ಗಳಲ್ಲಿ ಸಾಮಾನ್ಯವಾಗಿ 15 ರಿಂದ 30 ನಿಮಿಷಗಳಷ್ಟೆ ಹಾರಾಟ ಮಾಡುತ್ತಾರೆ. ಅವು ಒಂದು ರಾಜ್ಯದ ಒಳಗಷ್ಟೆ ಸಂಚರಿಸಲು ಬಳಸುವ ಕಾರಣ ದೀರ್ಘವಾದ ಸಂಚಾರ ಸಾಮಾನ್ಯವಾಗಿ ಹೆಲಿಕಾಪ್ಟರ್ಗಳಲ್ಲಿ ಮಾಡುವುದಿಲ್ಲ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications