Get Updates
Get notified of breaking news, exclusive insights, and must-see stories!

G20 ಗಣ್ಯರಿಂದ ಬಡವರನ್ನು ಸರ್ಕಾರ ಮರೆಮಾಡಿದೆ: ರಾಹುಲ್ ಗಾಂಧಿ

ನವದೆಹಲಿ, ಸೆಪ್ಟೆಂಬರ್‌ 9: ಜಿ 20 ಶೃಂಗಸಭೆ ನಾಯಕರ ದೃಷ್ಟಿಯಿಂದ ಕೇಂದ್ರ ಸರ್ಕಾರವು ಕೊಳೆಗೇರಿಗಳನ್ನು ಮುಚ್ಚಿ, ಬೀದಿ ಪ್ರಾಣಿಗಳನ್ನು ಮರೆಮಾಡಿದೆ. ಅತಿಥಿಗಳಿಂದ ಭಾರತದ ವಾಸ್ತವತೆಯನ್ನು ಮರೆಮಾಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಶನಿವಾರ ನವದೆಹಲಿಯಲ್ಲಿ ಆರಂಭವಾದ ಎರಡು ದಿನಗಳ ಜಿ 20 ಶೃಂಗಸಭೆಯ ಮೊದಲು ಕೆಲವು ಕೊಳೆಗೇರಿ ಪ್ರದೇಶಗಳನ್ನು ಹಸಿರು ಸ್ಕ್ರೀನ್‌ಗಳಿಂದ ಮುಚ್ಚಿರುವುದನ್ನು ತೋರಿಸುವ ವೀಡಿಯೊವನ್ನು ಕಾಂಗ್ರೆಸ್ X ನಲ್ಲಿ ಹಂಚಿಕೊಂಡಿದೆ.

Modi Government hiding poor from G20 elite: Rahul Gandhi

"ಭಾರತ ಸರ್ಕಾರವು ನಮ್ಮ ಬಡ ಜನರು ಮತ್ತು ಬೀದಿ ಪ್ರಾಣಿಗಳನ್ನು ಮರೆಮಾಚುತ್ತಿದೆ. ನಮ್ಮ ಅತಿಥಿಗಳಿಂದ ಭಾರತದ ವಾಸ್ತವತೆಯನ್ನು ಮರೆಮಾಡುವ ಅಗತ್ಯವಿಲ್ಲ" ಎಂದು ಪ್ರಸ್ತುತ ವಿದೇಶದಲ್ಲಿರುವ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"G20 ಜಾಗತಿಕ ಸಮಸ್ಯೆಗಳನ್ನು ಸಹಕಾರಿ ರೀತಿಯಲ್ಲಿ ನಿಭಾಯಿಸುವ ಗುರಿಯನ್ನು ಹೊಂದಿರುವ ಪ್ರಮುಖ ವಿಶ್ವ ಆರ್ಥಿಕತೆಗಳ ಉತ್ಪಾದಕ ಸಭೆಯಾಗಿದೆ. ಅಧ್ಯಕ್ಷ ಪುಟಿನ್ ದೂರ ಉಳಿದಿರಬಹುದು, ಆದರೆ ಪ್ರಿನ್ಸ್ ಪೊಟೆಮ್ಕಿನ್ ಪೋಟೋಗಳು ಕೊಳೆಗೇರಿಗಳನ್ನು ಮುಚ್ಚಿದೆ. ಈ ಕಾರ್ಯಕ್ರಮಕ್ಕಾಗಿ ಸಾವಿರಾರು ನಿರಾಶ್ರಿತ ಜನರ ಮನೆಗಳನ್ನು ಮುಚ್ಚಲಾಗಿದೆ. ಕೇವಲ ಪ್ರಧಾನಿಯವರ ಪ್ರತಿಮೆಯನ್ನು ಕಾಣುವಂತೆ ಮಾಡಲು ಪ್ರಾಣಿಗಳನ್ನು ಬಲವಂತವಾಗಿ ಕೂಡಿಹಾಕಲಾಗಿದೆ. ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಲಮ್‌ಗಳನ್ನು ಮುಚ್ಚಿಡುವ ವೀಡಿಯೊದ ಜೊತೆಗೆ, ವಿರೋಧ ಪಕ್ಷವು G20 ಶೃಂಗಸಭೆಯ ಮೊದಲು ಬೀದಿ ನಾಯಿಗಳು ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯದ ವೀಡಿಯೊಗಳನ್ನು ಹಂಚಿಕೊಂಡಿದೆ. "ಸರ್ಕಾರವು ನಮ್ಮನ್ನು ಕೀಟಗಳಂತೆ ಪರಿಗಣಿಸುತ್ತದೆ. ನಾವು ಮನುಷ್ಯರಲ್ಲವೇ?" ಎಂದು ಕೊಳೆಗೇರಿ ನಿವಾಸಿಯೊಬ್ಬರು ಹೇಳುವ ವೀಡಿಯೊವನ್ನು ಕಾಂಗ್ರೆಸ್ ಹಂಚಿಕೊಂಡಿದೆ.

"ಜಿ 20 ಯ ಮೊದಲು, ಮೋದಿ ಸರ್ಕಾರವು ತನ್ನ ವೈಫಲ್ಯವನ್ನು ಮರೆಮಾಡಲು ಅವರ ಮನೆಗಳನ್ನು ಪರದೆಗಳಿಂದ ಮುಚ್ಚಿತ್ತು. ಏಕೆಂದರೆ ರಾಜನು ಬಡವರನ್ನು ದ್ವೇಷಿಸುತ್ತಾನೆ" ಎಂದು ವಿರೋಧ ಪಕ್ಷವು ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಹೇಳಿದೆ. "ಜಿ 20 ಶೃಂಗಸಭೆಯ ತಯಾರಿಯಲ್ಲಿ ಮೋದಿ ಸರ್ಕಾರವು ಮುಗ್ಧ ಬೀದಿ ನಾಯಿಗಳ ಮೇಲೆ ಆಘಾತಕಾರಿ ಕ್ರೌರ್ಯವನ್ನು ಪ್ರದರ್ಶಿಸಲು ಈ ವೀಡಿಯೊವನ್ನು ವೀಕ್ಷಿಸಿ ಎಂದು ಹಂಚಿಕೊಳ್ಳಲಾಗಿದೆ.

"ನಾಯಿಗಳನ್ನು ಕುತ್ತಿಗೆಯಿಂದ ಎಳೆದು, ಕೋಲುಗಳಿಂದ ಹೊಡೆದು ಪಂಜರದಲ್ಲಿ ಎಸೆಯಲಾಗುತ್ತಿದೆ. ಅವುಗಳಿಗೆ ಆಹಾರ ಮತ್ತು ನೀರನ್ನು ನಿರಾಕರಿಸಲಾಗುತ್ತಿದೆ ಮತ್ತು ಅವುಗಳನ್ನು ತೀವ್ರ ಒತ್ತಡ ಮತ್ತು ಭಯಕ್ಕೆ ಒಳಪಡಿಸಲಾಗುತ್ತಿದೆ. ಇಂತಹ ಭಯಾನಕ ಕೃತ್ಯಗಳ ವಿರುದ್ಧ ನಾವು ಧ್ವನಿ ಎತ್ತುವುದು ಮತ್ತು ಈ ಧ್ವನಿಯಿಲ್ಲದ ಬಲಿಪಶುಗಳಿಗೆ ನ್ಯಾಯಕ್ಕಾಗಿ ಒತ್ತಾಯಿಸುವುದು ಅತ್ಯಗತ್ಯ" ಎಂದು ವಿರೋಧ ಪಕ್ಷವು ಹೇಳಿದೆ.

ಜಿ20 ಸಮಾವೇಶಕ್ಕೆ ಬರುತ್ತಿರುವ ವಿದೇಶಿ ಗಣ್ಯರಿಗೆ ಮೋದಿ'ಜಿ' ಅವರ ಅಭಿವೃದ್ಧಿಯ ಅಚ್ಚೆ ದಿನಗಳನ್ನು ಮುಚ್ಚಿಡಲು ಪರದೆ ಹಾಕಲಾಗಿದೆ. ಬಡವರನ್ನು, ಬಡತನವನ್ನು ನೋಡದಿದ್ದರೆ ಆಯ್ತು ಬಡತನ ನಿರ್ಮೂಲನೆ ಮಾಡಿದಂತಾಗುತ್ತದೆ ಎಂಬುದು 'ಬಡ ತಾಯಿಯ ಮಗನ' ನಂಬಿಕೆಯಾಗಿದೆ. ದೆಹಲಿಯ ಸ್ಲಮ್ ಗಳಿಗೆ ಪರದೆ ಹಾಕಿರುವ ಕೇಂದ್ರ ಸರ್ಕಾರ ಜಿ20 ಸಮಾವೇಶಕ್ಕಾಗಿ ದೆಹಲಿಯ ಸುಂದರೀಕರಣಕ್ಕೆ ಮಾಡಿದ ಖರ್ಚು ಬರೋಬ್ಬರಿ ₹4,200 ಕೋಟಿ ಎಂದು ಕರ್ನಾಟಕ ಕಾಂಗ್ರೆಸ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಜಿ20 ಸಮಾವೇಶಕ್ಕಾಗಿ ಬಜೆಟ್ಟಿನಲ್ಲಿ ಮೀಸಲಿಟ್ಟ ಮೊತ್ತ ₹990 ಕೋಟಿ, ಅತಿಥಿ ಸತ್ಕಾರಕ್ಕಾಗಿ ಮಾಡಿದ ಖರ್ಚು ₹2,700 ಕೋಟಿ, ದೆಹಲಿಯ ಸುಂದರೀಕರಣಕ್ಕೆ ₹4,200 ಕೋಟಿ, ಈ ಎಲ್ಲಾ ಖರ್ಚಿನಲ್ಲಿ ಬಡವರನ್ನು ಮುಚ್ಚಿಡುವ ಬದಲು ಬಡತನವನ್ನೇ ನಿರ್ಮೂಲನೆ ಮಾಡಬಹುದಿತ್ತಲ್ಲವೇ? ಎಂದು ಅದು ಪ್ರಶ್ನಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+