Get Updates
Get notified of breaking news, exclusive insights, and must-see stories!

Delhi Elections 2025: ಆಮ್ ಆದ್ಮಿ ಪಕ್ಷವನ್ನು ದೆಹಲಿಯಿಂದ ಓಡಿಸಿ: ಪ್ರಧಾನಿ ಮೋದಿ

ನವದೆಹಲಿ, ಜನವರಿ 31: ದೆಹಲಿ ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದ್ದು, ಬಿಜೆಪಿ, ಕಾಂಗ್ರೆಸ್‌ ಹಾಗೂ ಆಡಳಿತರೂಢ ಎಎಪಿ ಅಬ್ಬರ ಪ್ರಚಾರವನ್ನ ನಡೆಸುತ್ತಿವೆ. ಈ ಬಾರಿ ಬಿಜೆಪಿ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಚುನಾವಣಾ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ.

ಇಂದು ದ್ವಾರಕಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ಪ್ರಚಾರ ನಡೆಸಿದ್ದು, ದೆಹಲಿಯ ಅಭಿವೃದ್ಧಿಯಲ್ಲಿ ಬಿಜೆಪಿ ಸರ್ಕಾರ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂದು ನಾನು ಖಾತರಿಪಡಿಸುತ್ತೇನೆ ಎಂದು ಹೇಳಿದ್ದಾರೆ. ದ್ವಾರಕಾದಲ್ಲಿ ನಡೆದ ವಿಕಾಸ್ ದೆಹಲಿ ಸಂಕಲ್ಪ ರ್ಯಾಲಿಯಲ್ಲಿ ಪ್ರಧಾನಿ ಮೋದಿ ನಾವು ಎಎಪಿ-ಡಿಎ ಅನ್ನು ದೆಹಲಿಯಿಂದ ಓಡಿಸಬೇಕು ಎಂದು ಕರೆ ನೀಡಿದ್ದಾರೆ.

Modi at Vikas Delhi Sankalp Rally in Dwarka We have to drive AAP-da away from Delhi

ದೆಹಲಿಯ ಅಭಿವೃದ್ಧಿಯಲ್ಲಿ ಬಿಜೆಪಿ ಸರ್ಕಾರ ಎಲ್ಲ ಪ್ರಯತ್ನವನ್ನೂ ಮಾಡುತ್ತದೆ. ದೆಹಲಿಯಲ್ಲಿ ಅಭಿವೃದ್ಧಿ ಉಂಟುಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಆಮ್ ಆದ್ಮಿ ಪಕ್ಷ ಸರ್ಕಾರವನ್ನು ಟೀಕಿಸುತ್ತಾ 'ಆಪ್ಡಾ' ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ ಅವರು ಜಗಳ ಮತ್ತು ವಾದಗಳಲ್ಲಿ ಮಾತ್ರ ತೊಡಗುತ್ತಾರೆಯೇ ವಿನಃ ಅಭಿವೃದ್ಧಿಯತ್ತ ಮುಖ ಮಾಡುತ್ತಿಲ್ಲ. ದೆಹಲಿಗೆ ಸಮತೋಲನ ಕಾಯ್ದುಕೊಳ್ಳಬಲ್ಲ ಸರ್ಕಾರ ಬೇಕು ಎಂದು ಮೋದಿ ಹೇಳಿದ್ದಾರೆ.

ಎಎಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ, ದೆಹಲಿಯಿಂದ ಲೂಟಿ ಮಾಡಿದ ಹಣದಿಂದ ಎಎಪಿ-ಡಿಎ ಇತರ ರಾಜ್ಯಗಳಲ್ಲಿ ತನ್ನ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸುತ್ತಿದೆ ಎಂದು ಹೇಳಿದರು. ದೆಹಲಿಯ ಜನರು ಎಎಪಿ ಸರ್ಕಾರವನ್ನು ಓಡಿಸಲು ನಿರ್ಧರಿಸಿದ್ದಾರೆ. ಈ ಬಾರಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಸರ್ಕಾರ ರಚಿಸಬೇಕಾಗಿದೆ. ನಾನು ದ್ವಾರಕೆಗೆ ಬಂದಾಗಲೆಲ್ಲಾ. ಶ್ರೀ ಕೃಷ್ಣನ ನಗರವಾದ ದ್ವಾರಕೆಯನ್ನು ನೆನಪಿಸಿಕೊಳ್ಳುವುದು ಸಹಜ. ದೆಹಲಿಯನ್ನು ಆಧುನೀಕರಿಸಲು ಬಿಜೆಪಿ ಎಷ್ಟು ಬಯಸುತ್ತದೆ.

ಕೇಂದ್ರ ಸರ್ಕಾರ ಇಲ್ಲಿ ಯಶೋಭೂಮಿಯನ್ನು ನಿರ್ಮಿಸಿದೆ. ಇದು ಸಾವಿರಾರು ಯುವಕರಿಗೆ ಉದ್ಯೋಗವನ್ನು ಒದಗಿಸಿದೆ. ಅಲ್ಲದೇ ಜನರ ವ್ಯವಹಾರ ಹೆಚ್ಚಾಗಿದೆ. ಮುಂಬರುವ ನಗರದಲ್ಲಿ ಈ ಇಡೀ ಪ್ರದೇಶವು ಸ್ಮಾರ್ಟ್ ಸಿಟಿಯಾಗಲಿದೆ. ಇಲ್ಲಿ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಭಾರತ್ ವಂದನಾ ಪಾರ್ಕ್ ಅನ್ನು ನಿರ್ಮಿಸುತ್ತಿದೆ. ಇದು ಇಡೀ ದೇಶಕ್ಕೆ ಮಾದರಿಯಾಗಲಿದೆ. ಅಭಿವೃದ್ಧಿ ಹೊಂದಿದ ಭಾರತದ ರಾಜಧಾನಿ ಹೀಗಿರಬೇಕು. ಇಡೀ ದೆಹಲಿ ನಗರದಲ್ಲಿ ಇದೇ ರೀತಿಯ ಅಭಿವೃದ್ಧಿ ಆಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ದೆಹಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಡಬಲ್ ಎಂಜಿನ್ ಸರ್ಕಾರ ಬೇಕು. ನೀವು ಕಾಂಗ್ರೆಸ್ ಅನ್ನು ಹಲವು ವರ್ಷಗಳ ಕಾಲ ಅಧಿಕಾರದಲ್ಲಿ ನೋಡಿದ್ದೀರಿ, ಮತ್ತು ನಂತರ ಎಎಪಿ ದೆಹಲಿಯನ್ನು ವಶಪಡಿಸಿಕೊಂಡಿತು. ನೀವು ನನಗೆ ಮತ್ತೆ ಮತ್ತೆ ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದೀರಿ, ಮತ್ತು ಈಗ ಡಬಲ್ ಎಂಜಿನ್ ಸರ್ಕಾರವನ್ನು ರಚಿಸುವ ಮೂಲಕ ದೆಹಲಿಗೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿ ಎಂದು ಮೋದಿ ತಿಳಿಸಿದರು.

ಬಿಜೆಪಿ ದೆಹಲಿಯನ್ನು ಆಧುನಿಕಗೊಳಿಸಲು ಎಷ್ಟರ ಮಟ್ಟಿಗೆ ಬಯಸುತ್ತದೆ ಎಂಬುದರ ಒಂದು ನೋಟವನ್ನು ಇಲ್ಲಿ ದ್ವಾರಕಾದಲ್ಲಿ ಕಾಣಬಹುದು. ಕೇಂದ್ರ ಸರ್ಕಾರ ಇಲ್ಲಿ ಭವ್ಯವಾದ ಯಶೋಭೂಮಿಯನ್ನು ನಿರ್ಮಿಸಿದೆ. ಯಶೋಭೂಮಿಯಿಂದಾಗಿ, ದ್ವಾರಕಾ ಮತ್ತು ದೆಹಲಿಯ ಸಾವಿರಾರು ಯುವಕರು ಉದ್ಯೋಗ ಪಡೆದಿದ್ದಾರೆ ಮತ್ತು ಜನರ ವ್ಯವಹಾರ ಇಲ್ಲಿ ಬೆಳೆದಿದೆ. ಮುಂಬರುವ ದಿನಗಳಲ್ಲಿ, ಈ ಇಡೀ ಪ್ರದೇಶವು ಒಂದು ರೀತಿಯ ಸ್ಮಾರ್ಟ್ ಸಿಟಿಯಾಗಲಿದೆ ಎಂದು ಮೋದಿ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+