ಸಂತಾನಾಭಿವೃದ್ಧಿಗೆ ಹಾರಿ ಬಂದ ಪ್ರಣಯ ಪಕ್ಷಿಗಳು

ಹೇಳಿಕೇಳಿ ವಲಸೆ ಪ್ರಾಣಿ ಪಕ್ಷಿಗಳಿಗೆ ಇದು ಸಂತಾನಾಭಿವೃದ್ಧಿ ಸಮಯ. ಹಾಗಾಗಿ ಪ್ರಶಸ್ತ ಸ್ಥಳವನ್ನರಸಿ ಕೇಂದ್ರಪಾಡಾ ಜಿಲ್ಲೆಯಲ್ಲಿರುವ ಬಿಠಾರಕಣಿಕಾ ರಾಷ್ಟ್ರೀಯ ಉದ್ಯಾನದಲ್ಲಿ ಈಗ ವಿದೇಶಿ ಹಕ್ಕಿಗಳು ಬೀಡುಬಿಟ್ಟಿವೆ.
ಸೈಬೀರಿಯಾ, ಇರಾನ್, ಇರಾಕ್, ಅಫಘಾನಿಸ್ತಾನ ಮತ್ತು ನಮ್ಮದೇ ಹಿಮಾಲಯ ಪ್ರಾಂತ್ಯದಿಂದ ಸುದೀರ್ಘ ಪಯಣದಲ್ಲಿ ಪ್ರಣಯಕ್ಕಾಗಿ ಹಕ್ಕಿಗಳು ಹಾರಿಬಂದಿವೆ. ಈ ಪ್ರಣಯ ಪಕ್ಷಿಗಳ ವಿಗಂಹಮನೋಟ/ ಕಲರವವನ್ನು ಕಣ್ತುಂಬಿಸಿಕೊಳ್ಳಲು ಪ್ರವಾಸಿಗರೂ ಸಹ ಪಾರ್ಕಿಗೆ ಎಡತಾಕುತ್ತಿದ್ದಾರೆ.
ಪಕ್ಷಿಗಳ ಜಲವಿಹಾರಕ್ಕೆ ಹೇಳಿ ಮಾಡಿಸಿದ ಜಾಗ: Bhitarkanika National Park ಹಿರಿಯ ಅಧಿಕಾರಿ ಕೇದಾರ್ ಕುಮಾರ್ ಸ್ವೇನ್ ಅವರು ಹೇಳುವಂತೆ ನಾನಾ ಜಾತಿಯ ಮನಮೋಹಕ ಬಾತುಕೋಳಿಗಳು, ಕ್ರೌಂಚ (ಉದ್ದ ಕಾಲಿನ ನೀರು ಹಕ್ಕಿಗಳು) ಇಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಿವೆ.
'ವಲಸೆ ಋತು ಆರಂಭವಾಗಿದ್ದು, ಈಗಾಗಲೇ 25 ಸಾವಿರ ಹಕ್ಕಿಗಳು ನ್ಯಾಷನಲ್ ಪಾರ್ಕಿನಲ್ಲಿ ಕಾಲಿಟ್ಟಿವೆ. ಡಿಸೆಂಬರ್ ಮಧ್ಯ ಭಾಗಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ ಪಕ್ಷಿಗಳು ಆಗಮಿಸಲಿವೆ. ಪಾರ್ಕಿನ ಸತ್ಯಭಯ ಭಾಗದಲ್ಲಿ ಪಕ್ಷಿಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಫೆಬ್ರವರಿ-ಮಾರ್ಚ್ ವೇಳೆಗೆ ಚಕ್ಕಂದ ಮುಗಿಸುವ ಪಕ್ಷಿಗಳು ಪುಟ್ಟ ಮರಿಗಳ ಜತೆ ತಮ್ಮ ದೂರದೂರುಗಳಿಗೆ ವಾಪಸಾಗುತ್ತವೆ' ಎಂದು ಅವರು ತಿಳಿಸಿದ್ದಾರೆ.
'ಪಕ್ಷಿಗಳು ಆಹ್ಲಾದಕರ ವಾತಾವರಣ ಕಲ್ಪಿಸಲು ಮತ್ತು ಅವುಗಳ ಸಂರಕ್ಷಣೆಗಾಗಿ ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ 15 ವಿಶೇಷ ತಂಡಗಳನ್ನು ರಚಿಸಲಾಗಿದೆ. ಹಕ್ಕಿಗಳ ವಾಸಕ್ಕೆ ಯಾವುದೇ ಧಕ್ಕೆಯೊದಗದಂತೆ ಕಣ್ಗಾವಲು ಹಾಕಲಾಗಿದೆ' ಎಂದು ಕೇದಾರ್ ಕುಮಾರ್ ವಿವರಿಸಿದ್ದಾರೆ. ಭವನೇಶ್ವರದಿಂದ 170 ಕಿಮೀ ದೂರದಲ್ಲಿರುವ Bhitarkanika National Park ವನ್ಯಜೀವಿ ಧಾಮವೂ ಆಗಿದೆ. ಇಲ್ಲಿನ ಸಮುದ್ರ ಆಮೆ (Olive Ridley) ಧಾಮವು ಇಡೀ ವಿಶ್ವದ ಗಮನ ಸೆಳೆದಿದೆ. ( ಚಿತ್ರ ಕೃಪೆ )
-
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral












Click it and Unblock the Notifications