ಮಣಿಪುರ ಹಿಂಸಾಚಾರ: ಗುಂಪು ದಾಳಿಯಲ್ಲಿ ಅಂಗವಿಕಲರಾದ ಮಣಿಪುರದ ಕುಕಿ ಬಿಜೆಪಿ ಶಾಸಕ
ಗುಂಪು ದಾಳಿಯಲ್ಲಿ ಅಂಗವಿಕಲರಾದ ಮಣಿಪುರದ ಕುಕಿ ಬಿಜೆಪಿ ಶಾಸಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಣಿಪುರದ ಥಾನ್ಲೋನ್ ಕ್ಷೇತ್ರದ ಬಿಜೆಪಿ ಶಾಸಕರಾದ ವಾಲ್ಟೆ (Vungzagin Valte) ಅವರು ಕಳೆದ ಒಂದು ತಿಂಗಳಿನಿಂದ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ತಲೆಬುರುಡೆಯ ಗಾಯದಿಂದ ಚೇತರಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಈ ಬಗ್ಗೆ ಅವರ ಮಗ ಜೋಸೆಫ್ ವಾಲ್ಟೆ ಮಾತನಾಡಿ, ಇದುವರೆಗೆ ಪಕ್ಷದಿಂದ ಯಾರೂ ಅವರನ್ನು ಭೇಟಿ ಮಾಡಿಲ್ಲ. ಅವರು ಸಹಾಯವಿಲ್ಲದೆ ಚಲಿಸಲಾಗುವುದಿಲ್ಲ. ಅವನ ಧ್ವನಿ ಹೋಗಿದೆ ಎಂದು ಹೇಳಿದ್ದಾರೆ.

ವಾಲ್ಟೆ (61) ಅವರು ಕುಕಿ ಸಮುದಾಯಕ್ಕೆ ಸೇರಿದ ಮೂರನೇ ಬಾರಿ ಶಾಸಕರಾದವರು. ಬುಡಕಟ್ಟು ವ್ಯವಹಾರಗಳ ಕುರಿತು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಸಲಹೆಗಾರರೂ ಆಗಿದ್ದಾರೆ. ಈಶಾನ್ಯ ರಾಜ್ಯದಲ್ಲಿ 100 ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡ ಮೇ 3 ರಿಂದ ನಡೆದ ಕುಕಿ-ಮೇಟೈ ಜನಾಂಗೀಯ ಹಿಂಸಾಚಾರದಲ್ಲಿ ಇವರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಉದ್ದೇಶಪೂರ್ವಕ ಹಲ್ಲೆ ಎಂದು ಶಾಸಕರ ಪುತ್ರೆ ಹೇಳಿಕೊಂಡಿದ್ದಾರೆ.
ಮೇ 4 ರಂದು ಜನಸಮೂಹವೊಂದು ವಾಲ್ಟೆ ಮೇಲೆ ಹಲ್ಲೆ ನಡೆಸಿದೆ. ನಂತರ ಅವರು ತೀವ್ರವಾಗಿ ಗಾಯಗೊಂಡಿದ್ದು ಮತ್ತೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಅವರ ಮುಖಕ್ಕೆ ಹಾನಿಯಾಗಿದೆ ಮತ್ತು ವೈದ್ಯರು ಅವರ ದವಡೆಯನ್ನು ಸರಿಪಡಿಸಲು ಪ್ಲಾಟಿನಂ ಪ್ಲೇಟ್ ಅನ್ನು ಹಾಕಿದ್ದಾರೆ ಎಂದು ಜೋಸೆಫ್ (29) ಹೇಳಿದರು.
ಘಟನೆಯನ್ನು ನೆನಪಿಸಿಕೊಳ್ಳುತ್ತಾ, ಜೋಸೆಫ್ ಅವರು ಮೇ 4 ರಂದು ಬೆಳಿಗ್ಗೆ ಸಭೆಯೊಂದರಲ್ಲಿ ಭಾಗವಹಿಸಿದ ನಂತರ ಮುಖ್ಯಮಂತ್ರಿ ಕಚೇರಿಯಿಂದ ಹೊರಡುವಾಗ ಕೊನೆಯದಾಗಿ ತಮ್ಮ ತಂದೆಯೊಂದಿಗೆ ಮಾತನಾಡಿದೆ ಎಂದು ಹೇಳಿದರು. ಮೇ 4 ರಂದು ವಾಲ್ಟೆ ಅವರು ಸೆಕ್ರೆಟರಿಯೇಟ್ನಿಂದ ಲ್ಯಾಂಪೆಲ್ಪಟ್ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ತೆರಳುವಾಗ ಕಪ್ಪು ಬಟ್ಟೆ ಧರಿಸಿದ್ದ ಜನರ ಗುಂಪು ವಾಲ್ಟೆ ಅವರ ಕಾರನ್ನು ತಡೆದರು. ಈ ವೇಳೆ ಅವರ ಮೇಲೆ ದಾಳಿ ಮಾಡಿದ್ದಾರೆ.

ಇದಕ್ಕೂ ಒಂದು ದಿನದ ಹಿಂದೆ, ಚುರಚಂದಪುರ ಮತ್ತು ಇತರ ಗುಡ್ಡಗಾಡು ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗದವರ ಒಗ್ಗಟ್ಟಿನ ಮೆರವಣಿಗೆ ನಡೆಯಿತು. ಈ ವೇಳೆ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಹರಡಲು ಪ್ರಾರಂಭವಾಗಿದೆ. ಅಂದಿನಿಂದ ಮುಂದುವರಿದ ಹಿಂಸಾಚಾರ ಹಲವಾರು ಜನರನ್ನು ಬಲಿ ತೆಗೆದುಕೊಂಡಿದೆ. ಇದರಿಂದಾಗಿ ಈಗಾಗಲೇ 35,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಶಾಸಕರ ಚಾಲಕನಿಗೆ ಚಿತ್ರಹಿಂಸೆ
ಘಟನೆಯ ಬಗ್ಗೆ ಇನ್ನಷ್ಟು ವಿವರಿಸಿದ ಜೋಸೆಫ್, ನನ್ನ ತಂದೆಯ ತಲೆಬುರುಡೆಯ ಮೇಲೆ ಚೂಪಾದ ವಸ್ತುವಿನಿಂದ ಪದೇ ಪದೇ ಹೊಡೆದರು. ಅದು ಜನಸಮೂಹವಾಗಿದ್ದರೆ, ಅವನ ದೇಹದ ಇತರ ಭಾಗಗಳಲ್ಲಿ ಗಾಯಗಳಾಗುತ್ತಿತ್ತು. ಇದು ಉದ್ದೇಶಿತ ದಾಳಿಯಾಗಿದೆ. ಇದಕ್ಕೂ ಮೊದಲು ಚಾಲಕನಿಗೆ ಗಂಟೆಗಳ ಕಾಲ ಚಿತ್ರಹಿಂಸೆ ನೀಡಲಾಯಿತು ಎಂದು ಜೋಸೆಫ್ ಹೇಳಿದರು.
ಸಂಜೆ ತನ್ನ ತಂದೆ ಮತ್ತು ಚಾಲಕ ಹೇಗೆ ಆಸ್ಪತ್ರೆಗೆ ಬಂದರು ಎಂದು ತನಗೆ ತಿಳಿದಿಲ್ಲ. ಅದೇ ರಾತ್ರಿ ಅವರನ್ನು ವಿಮಾನದಲ್ಲಿ ದೆಹಲಿಗೆ ಕರೆದೊಯ್ಯಲಾಯಿತು. "ಮುಖ್ಯಮಂತ್ರಿ ಅವರೇ ದೆಹಲಿಯ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲು ವ್ಯವಸ್ಥೆ ಮಾಡಿದರು. ಚಾಲಕನ ಕುತ್ತಿಗೆಗೆ ತೀವ್ರ ಗಾಯಗಳಾಗಿದ್ದರಿಂದ ಚಾಲಕನನ್ನು ಕರೆದುಕೊಂಡು ಹೋಗಲಾಗಲಿಲ್ಲ ಮತ್ತು ವೈದ್ಯರು ಅದರ ವಿರುದ್ಧ ಸಲಹೆ ನೀಡಿದರು. ಎರಡು ದಿನಗಳ ನಂತರ ಚಾಲಕ ಆಸ್ಪತ್ರೆಯಲ್ಲಿ ನಿಧನರಾದರು" ಎಂದು ಜೋಸೆಫ್ ಹೇಳಿದರು.
ಪಿಎಸ್ಒ ನೀಡಿದ ದೂರಿನ ಆಧಾರದ ಮೇಲೆ ಇಂಫಾಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು "ಅಪರಿಚಿತ ವ್ಯಕ್ತಿಗಳ" ವಿರುದ್ಧ ಘೋರವಾದ ಗಾಯದ ಬಗ್ಗೆ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ.
"ಕ್ವಾರ್ಟರ್ಸ್ಗೆ ಹೋಗುತ್ತಿದ್ದಾಗ, ನಿತ್ಯಾನಂದ ದೇವಸ್ಥಾನದ ಬಳಿಯ ರಿಮ್ಸ್ ರಸ್ತೆಯಲ್ಲಿ ಶಾಸಕ ಮತ್ತು ಅವರ ಬೆಂಗಾವಲು ತಂಡದ ಮೇಲೆ ಸಿಟ್ಟಿಗೆದ್ದ ಗುಂಪು ಹಲ್ಲೆ ನಡೆಸಿತು. ಬೆಂಗಾವಲು ತಂಡವು ಹಿಂಸಾತ್ಮಕ ಗುಂಪನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಮತ್ತು ಅವರು ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ದಾಳಿಯ ಪರಿಣಾಮವಾಗಿ ಶಾಸಕ ಮತ್ತು ಅವರ ಚಾಲಕ ಗಾಯಗೊಂಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಎಫ್ಐಆರ್ ಹೇಳುತ್ತದೆ.
ಅಧಿಕೃತ ವಸತಿ ಕ್ವಾರ್ಟರ್ಸ್ನಲ್ಲಿದ್ದ ಅವರ ಪತ್ನಿ ಮತ್ತು ಮಕ್ಕಳನ್ನು ಸೇನೆಯ ರಕ್ಷಣೆಯಲ್ಲಿ ಇಂಫಾಲ್ ವಿಮಾನ ನಿಲ್ದಾಣಕ್ಕೆ ಧಾವಿಸಬೇಕಾಯಿತು ಎಂದು ಜೋಸೆಫ್ ಹೇಳಿದರು. ದಾಳಿಕೋರರ ಗುರುತಿನ ಬಗ್ಗೆ ಖಚಿತವಾಗಿಲ್ಲ ಎಂದು ಜೋಸೆಫ್ ಹೇಳಿದ್ದಾರೆ. ದಾಳಿಯ ಹಿಂದೆ ಆರಂಬೈ ತೆಂಗೋಲ್ ಇರಬಹುದೆಂದು ನಮಗೆ ತಿಳಿದು ಬಂದಿದೆ. ಒಂದು ವರ್ಷದ ಹಿಂದೆ ನಾನು ಈ ಗುಂಪಿನ ಬಗ್ಗೆ ಮೊದಲು ಕೇಳಿದಾಗ, ಅವರು ಬೈಕರ್ಗಳ ಗ್ಯಾಂಗ್ ಎಂದು ನನಗೆ ತಿಳಿದಿತ್ತು "ಎಂದು ಅವರು ಹೇಳಿದರು.












Click it and Unblock the Notifications