ಮೋದಿ ಹೊಗಳಿ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ಶಶಿ
ನವದೆಹಲಿ, ಜೂ.6 : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಕೇಂದ್ರ ಮಾಜಿ ಸಚಿವ ತಿರುವನಂತಪುರ ಸಂಸದ ಡಾ.ಶಶಿ ತರೂರ್ ಅವರು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೋದಿ ಅವರನ್ನು ಶ್ಲಾಘಿಸಿದ ಶಶಿಗೆ ಮಣಿ ಶಂಕರ್ ಅಯ್ಯರ್ ಹೊಸ ಬಿರುದು ಕೊಟ್ಟಿದ್ದಾರೆ.
ಶಶಿ ತರೂರ್ ತಮ್ಮ ಹೇಳಿಕೆಯಲ್ಲಿ ಪ್ರೌಢಿಮೆ ಮೆರೆದಿಲ್ಲ, ಊಸರವಳ್ಳಿ ರೀತಿಯಲ್ಲಿ ಬಣ್ಣ ಬದಲಾಯಿಸುತ್ತಾ ಈ ರೀತಿ ಹೇಳಿಕೆ ನೀಡುವುದು ಶಶಿಗೆ ಮಾಮೂಲಿಯಾಗಿದೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕ ತರೂರ್ ಅವರು ಮೋದಿ ಮತ್ತು ಅವರ ಸರ್ಕಾರ ಕೈಗೊಂಡ ಕೆಲ ಕ್ರಮಗಳ ಬಗ್ಗೆ ಬುಧವಾರ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಮೋದಿಯವರು ವಿಶಾಲ ಹೃದಯಿಯಾಗಿ ಮತ್ತು ಅವರಿಗೆ ಮತ ಹಾಕದ ವ್ಯಕ್ತಿಗಳು ಸೇರಿಸಿ ಎಲ್ಲರನ್ನೂ ಸೇರಿಸಿಕೊಂಡು ಹೋಗುವ ಅವರ ನಿಲುವು ಸ್ವಾಗತಾರ್ಹ ಎಂದಿದ್ದರು.
ಸುದ್ದಿವಾಹಿನಿ ಜತೆ ಮಾತನಾಡಿದ ತರೂರ್ ಮೋದಿ ಶ್ಲಾಘಿಸಿದ್ದಕ್ಕೆ ತಮ್ಮನ್ನು ಮೋದಿ ಫ್ಯಾನ್ ಎಂದು ಕರೆಯಬೇಕಾಗಿಲ್ಲ. ನೀವು ಟಿಆರ್ಪಿ ಗಳಿಸಲು ನಾನು ಮೋದಿ ಫ್ಯಾನ್ ಎನ್ನಲೂ ಹಿಂಜರಿಯುವುದಿಲ್ಲ ಎಂದಿದ್ದಾರೆ.[ಮೋದಿಯನ್ನ ಹಾಡಿಹೊಗಳಿದ ಶಶಿ ತರೂರ್]
ಆದರೆ, ಶಶಿ ಸ್ಪಷ್ಟನೆಯಿಂದ ಕಾಂಗ್ರೆಸ್ ಹೈಕಮಾಂಡ್ ತೃಪ್ತಿಯಾಗಿಲ್ಲ ಎಂದು ತಿಳಿದು ಬಂದಿಲ್ಲ. ಅಯ್ಯರ್ ಅವರು ತಮ್ಮ ಆಕ್ರೋಶದ ಮಾತುಗಳನ್ನು ಮುಂದುವರೆಸುತ್ತಾ ಶಶಿ ಅವರಂಧ ಪ್ರಾಜ್ಞರು ಈ ರೀತಿ ಹೇಳಿಕೆ ನೀಡಿರುವುದು ತೀವ್ರ ಬೇಸರ ತರಿಸಿದೆ ಎಂದಿದ್ದಾರೆ. ಮೋದಿ ಅವರನ್ನು ಚಹಾವಾಲ ಎಂದು ಕರೆದು ದೇಶವಿಡೀ ಸಂಚಲನ ಮೂಡಿಸಿದ್ದು ಇದೇ ಅಯ್ಯರ್ ಎಂಬುದನ್ನು ಮರೆಯುವಂತಿಲ್ಲ. [ಶಶಿ ಕೊಚ್ಚಿಯಲ್ಲಿ]

ಶಶಿ ಹೇಳಿಕೆಯಿಂದ ಹಿಂದೆ ಸರಿದ ಕಾಂಗ್ರೆಸ್
ಮೋದಿಯವರನ್ನು ಹೊಗಳಿದ್ದು ತರೂರ್ ವೈಯಕ್ತಿಕ ಅಭಿಪ್ರಾಯ. ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್ ವತಿಯಿಂದ ಮೋದಿಯವರ ಸರ್ಕಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಈಗ ಸೂಕ್ತ ಸಮಯವಲ್ಲ ಎಂದು ವಕ್ತಾರೆ ಶೋಭಾ ಓಝಾ ಹೇಳಿದ್ದಾರೆ.
|
ಟೀಕೆಗಳಿಗೆ ನಾನು ಬಗ್ಗುವುದಿಲ್ಲ : ಶಶಿ
ಟೀಕೆಗಳಿಗೆ ನಾನು ಬಗ್ಗುವುದಿಲ್ಲ ಎಂದ ಶಶಿ ತರೂರು
|
ಮೋದಿ ಶ್ಲಾಘಿಸಿ ಶಶಿ ಬರೆದ ಲೇಖನ
ನರೇಂದ್ರ ಮೋದಿ ಆಡಳಿತ ಶೈಲಿ ಶ್ಲಾಘಿಸಿ ಶಶಿ ಬರೆದ ಲೇಖನದ ಲಿಂಕ್ ಇಲ್ಲಿದೆ
|
ಶಶಿಗೆ ಬುದ್ಧಿವಾದ ಹೇಳಲು ಅಯ್ಯರ್ ಯಾರು
ಶಶಿಗೆ ಬುದ್ಧಿವಾದ ಹೇಳಲು ಅಯ್ಯರ್ ಯಾರು, ಇದು ರಾಜಕೀಯದಾಟವಷ್ಟೇ?
|
ಅಪ್ರಬುದ್ಧ ಎಂದು ಕರೆಯುವುದೇಕೆ?
ಶಶಿ ತರೂರು ಹೇಳಿಕೆ ಅಪ್ರಬುದ್ಧ ಎಂದು ಕರೆಯುವುದೇಕೆ?
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications