ಸಿಬಿಐ ಜರಡಿಯಲ್ಲಿ ವಿಜಯ್ ಮಲ್ಯನ 1.5 ಲಕ್ಷ ಈಮೇಲ್
ವಿಜಯ್ ಮಲ್ಯ ವಿರುದ್ಧ ಚಾರ್ಚ್ ಶೀಟ್ ಸಲ್ಲಿಸಿರುವ ಸಿಬಿಐ ಈಗ ಮಲ್ಯಗೆ ಸೇರಿದ 1.5 ಲಕ್ಷ ಈ ಮೇಲ್ಗಳನ್ನು ಜಾಲಾಡಿಕೊಂಡು ಕುಳಿತಿದೆ. ಮಲ್ಯಗೆ ಸಹಾಯ ಮಾಡಿರಬಹುದಾದ ಭ್ರಷ್ಟ ಅಧಿಕಾರಿಗಳನ್ನು ಪತ್ತೆ ಹಚ್ಚುವಲ್ಲಿ ನಿರತವಾಗಿದೆ.
ಬೆಂಗಳೂರು, ಜನವರಿ 30: ಮದ್ಯದ ದೊರೆ ವಿಜಯ್ ಮಲ್ಯ ಮೇಲೆ ಚಾರ್ಚ್ ಸಲ್ಲಿಕೆ ಮಾಡಿರುವ ಸಿಬಿಐ ಈಗ ಮಲ್ಯರಿಗೆ ಸೇರಿದ 1.5 ಲಕ್ಷ ಈಮೇಲ್ ಗಳನ್ನು ಜಾಲಾಡುತ್ತಿದೆ. ಮೂಲಗಳ ಪ್ರಕಾರ ತನಿಖೆಗೆಯಲ್ಲಿ ಈ ಈಮೇಲ್ ಗಳನ್ನು ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ.
ತನಿಖಾ ಸಂಸ್ಥೆ ದುರ್ಬೀನು ಹಾಕಿಕೊಂಡು ಈ ಮೇಲ್ ಗಳನ್ನು ಜಾಲಾಡುತ್ತಿದ್ದು 6900 ಕೋಟಿ ಸಾಲ ಕೊಡಲು ಯಾರಾದರೂ ಸಹಾಯ ಮಾಡಿದ್ದರಾ ಎಂದು ಹುಡುಕಾಡುತ್ತಿದೆ. ರಾಜಕಾರಣಿಗಳು, ಕಂಪೆನಿಯ ಸಿಬ್ಬಂದಿಗಳು ಮತ್ತು ಬ್ಯಾಂಕು ಅಧಿಕಾರಿಗಳಿಗೆ ಕಳುಹಿಸಲಾದ ಮೇಲ್ಗಳು ಇದರಲ್ಲಿವೆ. ಹೀಗಾಗಿ ಪ್ರಮುಖ ಸಾಕ್ಷಿಗಳು ಸಿಗಬಹುದು ಎಂದುಕೊಳ್ಳಲಾಗಿದೆ.[ಕರ್ನಾಟಕ ಹೈಕೋರ್ಟಿನಿಂದ ವಿಜಯ್ ಮಲ್ಯಗೆ ವಾರಂಟ್]

ಸಿಬಿಐ ಮೂಲಗಳ ಪ್ರಕಾರ, ಒಂದೊಮ್ಮೆ ಮಲ್ಯರಿಗೆ ಯಾರಾದರೂ ಸಹಾಯ ಮಾಡಿದ್ದು ಮೇಲ್ ಗಳಿಂದ ತಿಲಿದು ಬಂದರೆ ಸಿಬಿಐ ಹೆಚ್ಚುವರಿ ಚಾರ್ಜ್ ಶೀಟನ್ನು ಸಲ್ಲಿಸಲಿದೆ.[ಸಿಬಿಐನಿಂದ ಮಲ್ಯ ಸಂಸ್ಥೆಯ ನಾಲ್ವರು ಅಧಿಕಾರಿಗಳ ಬಂಧನ]
ಕಳೆದ ವಾರ ಸಿಬಿಐ ಮೊದಲ ಜಾರ್ಜ್ ಶೀಟ್ ಸಲ್ಲಿಸಿತ್ತು. ಇದರಲ್ಲಿ ಐಡಿಬಿಐ ಬ್ಯಾಂಕಿನಿಂದ ಮಲ್ಯರಿಗೆ ಸಾಲ ಮಂಜೂರು ಮಾಡಲು ಬ್ಯಾಂಕ್ ಅಧಿಕಾರಿಗಳೇ ಕೈಜೋಡಿಸಿದ್ದಾರೆ ಎಂದು ಹೇಳಲಾಗಿದೆ. ಏರ್ ಲೈನಿಗೆ ನೆಗೆಟಿವ್ ರೇಟಿಂಗ್ ಇದ್ದಾಗಲೂ ಸುಮಾರು 900 ಕೋಟಿ ಸಾಲವನ್ನು ಮಲ್ಯ ಐಡಿಬಿಐ ಬ್ಯಾಂಕಿನಿಂದ ಪಡೆದಿದ್ದು. ಇದಕ್ಕೆ ಬ್ಯಾಂಕ್ ಅಧಿಕಾರಿಗಳೇ ಕಾರಣ ಎನ್ನುವ ತೀರ್ಮಾನಕ್ಕೆ ಬಂದಿರುವ ಸಿಬಿಐ ಕೆಲವು ಬ್ಯಾಂಕ್ ಅಧಿಕಾರಿಗಳನ್ನೇ ಆರೋಪಿಗಳಾಗಿ ಹೆಸರಿಸಿದೆ. ಮಲ್ಯ 2006 ರಿಂದ 2009ರ ಮಧ್ಯದಲ್ಲಿ ಹೆಚ್ಚಿನ ಸಾಲಗಳನ್ನು ಪಡೆದುಕೊಂಡಿದ್ದರು.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications