ಮಹಾರಾಷ್ಟ್ರ ಮಳೆ: ಕೊಲ್ಹಾಪುರದಲ್ಲಿ 12 ಗಂಟೆ ಮರದ ಮೇಲೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ
ಮುಂಬೈ, ಜುಲೈ. 28: ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳ ಗಡಿಯಲ್ಲಿ ತುಂಬು ಹರಿಯುತ್ತಿರುವ ವಾರ್ನಾ ನದಿಯಲ್ಲಿ 50 ವರ್ಷದ ಬಜರಂಗ್ ಖಮ್ಕರ್ ಎಂಬ ವ್ಯಕ್ತಿ 12 ಗಂಟೆಗಳು ಮರದ ಮೇಲೆ ಸಿಲುಕಿದ್ದ ಘಟನೆ ವರದಿಯಾಗಿದೆ. ರಕ್ಷಣೆಗಾಗಿ ಕಾಯುತ್ತಿದ್ದ ಅವರನ್ನು ಶುಕ್ರವಾರ ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೊಲ್ಹಾಪುರ ವಿಪತ್ತು ನಿರ್ವಹಣಾ ಪಡೆ (ಕೆಡಿಆರ್ಎಫ್) ಸಿಬ್ಬಂದಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಕೊಲ್ಹಾಪುರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪಂಚಗಂಗಾ, ವಾರ್ನಾ ಸೇರಿದಂತೆ ಹಲವು ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಕೊಲ್ಲಾಪುರ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಪ್ರಸಾದ್ ಸಂಕ್ಪಾಲ್ ಪ್ರಕಾರ, ಸಾಂಗ್ಲಿಯ ಶಿರಾಳದ ಲಖೆವಾಡಿ ಗ್ರಾಮದ ನಿವಾಸಿ ಬಜರಂಗ್ ಖಮಕರ್ ಎಂದು ಗುರುತಿಸಲಾದ ವ್ಯಕ್ತಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಸೇತುವೆಯಿಂದ ವಾರ್ನಾ ನದಿಯ ನೀರಿನ ಮಟ್ಟವನ್ನು ನೋಡಲು ಹೋಗಿದ್ದರು. ಆದರೆ ಆಯತಪ್ಪಿ ನೀರಿಗೆ ಬಿದ್ದ ಅವರು ಬಲವಾದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದರು.
ಶುಕ್ರವಾರ ಬೆಳಗ್ಗೆ ನದಿಯ ಮಧ್ಯದಲ್ಲಿ ಮರವೊಂದರ ಮೇಲೆ ಸಿಕ್ಕಿಹಾಕಿಕೊಂಡಿದ್ದನ್ನು ಕಂಡ ಕೆಲವರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಕೆಡಿಆರ್ಎಫ್ ತಕ್ಷಣವೇ ವ್ಯಕ್ತಿಯನ್ನು ರಕ್ಷಿಸಲು ತಂಡವನ್ನು ಕಳುಹಿಸಿದೆ ಎಂದು ಪ್ರಸಾದ್ ಸಂಕ್ಪಾಲ್ ತಿಳಿಸಿದ್ದಾರೆ.
"ಬೆಳಗ್ಗೆ 10.30 ರ ಸುಮಾರಿಗೆ, ತಂಡದ ಕಮಾಂಡರ್ಗಳಾದ ಕೃಷ್ಣ ಸೊರ್ಟೆ, ಸುನೀಲ್ ಕಾಂಬ್ಳೆ, ಶುಭಂ ಕಾಟ್ಕರ್, ಜೀವನ್ ಕುಬ್ಡೆ, ಶ್ರವಣ್ ಮತ್ತು ಸೋಮನಾಥ್ ಸುತಾರ್ ಅವರನ್ನು ಒಳಗೊಂಡ ತಂಡವು ರಕ್ಷಣಾ ದೋಣಿಯನ್ನು ಬಳಸಿ ಮರದಿಂದ ಬಜರಂಗ್ ಖಮಕರ್ ಅವರನ್ನು ರಕ್ಷಿಸಿತು. ಅವರಿಗೆ ವೈದ್ಯಕೀಯ ಸಹಾಯವನ್ನೂ ನೀಡಲಾಗಿದೆ" ಎಂದು ಪ್ರಸಾದ್ ಸಂಕ್ಪಾಲ್ ಹೇಳಿದ್ದಾರೆ.

ಇನ್ನು, ಈಗಾಗಲೇ ಎಚ್ಚರಿಕೆಯ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿರುವ ಕೊಲ್ಲಾಪುರದ ಪಂಚಗಂಗಾ ನದಿಯ ನೀರಿನ ಮಟ್ಟ 41. 2 ಅಡಿ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಾರಾಂ ವರೆಯಲ್ಲಿ ನದಿಯ ಎಚ್ಚರಿಕೆಯ ಗುರುತು 39 ಅಡಿಗಳಿದ್ದರೆ, ಅಪಾಯದ ಗುರುತು 43 ಅಡಿಗಳಾಗಿದೆ. ಕೊಲ್ಹಾಪುರ ಜಿಲ್ಲಾ ಉಸ್ತುವಾರಿ ಸಚಿವ ದೀಪಕ್ ಕೇಸರಕರ್ ಗುರುವಾರ ನಗರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ರಾಧಾನಗರಿ ಅಣೆಕಟ್ಟಿನ ಐದು ಸ್ವಯಂಚಾಲಿತ ಗೇಟ್ಗಳನ್ನು ತೆರೆದ ನಂತರ ಪಂಚಗಂಗಾ ನದಿಯ ನೀರಿನ ಮಟ್ಟ 5 ರಿಂದ 6 ಅಡಿಗಳಷ್ಟು ಏರಿಕೆಯಾಗುವ ಅಂದಾಜಿತ್ತು, ಆದರೆ ಮಳೆಯ ತೀವ್ರತೆ ಕಡಿಮೆಯಾದ ಕಾರಣ ನೀರಿನ ಮಟ್ಟ ಏರಿಕೆಯಾಗಲಿಲ್ಲ. ಇದರ ಜೊತೆಗೆ ಮಳೆ ಹಾನಿಯಿಂದ ತಮ್ಮ ಮನೆ ಮಠ ಕಳೆದುಕೊಂಡು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿರುವ ಜನರನ್ನು ಪರಿಶೀಲನೆ ನಡೆಸಿ ಅವರ ಸ್ಥಳಗಳಿಗೆ ವಾಪಸ್ ಕಳುಹಿಸುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದೇನೆ ಎಂದು ದೀಪಕ್ ಕೇಸರಕರ್ ತಿಳಿಸಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications