ಜು.5ರ ಚಂದ್ರ ಗ್ರಹಣದ ವಿಶೇಷತೆಗಳೇನು ಮತ್ತು ಪ್ರಭಾವ ಹೇಗಿರುತ್ತೆ?
ನವದೆಹಲಿ, ಜೂನ್.26: ಸೌರವ್ಯೂಹ ಅಪರೂಪದ ಮತ್ತೊಂದು ಘಟನೆಗೆ ಬಾನಂಗಳ ಸಾಕ್ಷಿಯಾಗಲಿದೆ. ಜುಲೈ.5ರ ಭಾನುವಾರ ರಾತ್ರಿ ಉಪಚಾಯ ಚಂದ್ರಗ್ರಹಣ ಗೋಚರಿಸಲಿದೆ.
Recommended Video
2020ರಲ್ಲಿ ಎರಡು ಬಾರಿ ಚಂದ್ರ ಗ್ರಹಣ ಹಾಗೂ ಒಂದು ಬಾರಿ ಸೂರ್ಯ ಗ್ರಹಣ ಕಾಣಿಸಿಕೊಂಡಿದ್ದು, ನಾಲ್ಕನೇ ಗ್ರಹಣವು ಜುಲೈ.5ರ ರಾತ್ರಿ ಗೋಚರಿಸಲಿದೆ. ಕಳೆದ ವಾರ ಅಂದರೆ ಜೂನ್.21ರಂದು ಸೂರ್ಯ ಗ್ರಹಣವು ಕಾಣಿಸಿಕೊಂಡಿತ್ತು.
ಈ ಬಾರಿಯ ಚಂದ್ರಗ್ರಹಣವು ವಿಶ್ವದ ಎಲ್ಲಾ ದೇಶಗಳಲ್ಲಿ ಗೋಚರಿಸುವುದಿಲ್ಲ. ಬದಲಿಗೆ ಗ್ರಹಣವು ಉತ್ತರ ಮತ್ತು ದಕ್ಷಿಣ ಅಮೆರಿಕಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಜೊತೆಗೆ ಆಫ್ರಿಕಾದ ಪಶ್ಚಿಮ ಭಾಗಗಳಲ್ಲಿಯೂ ಚಂದ್ರಗ್ರಹಣವು ಗೋಚರವಾಗಲಿದೆ.

ಚಂದ್ರ ಗ್ರಹಣ ಗೋಚರಿಸುವ ಸಮಯ
ಭಾರತೀಯರು ಕೂಡಾ ಜುಲೈ.5ರಂದು ಗೋಚರಿಸುವ ಚಂದ್ರ ಗ್ರಹಣವನ್ನು ಕಣ್ತುಂಬಿಕೊಳ್ಳಬಹುದು. ಏಕೆಂದರೆ ಭಾರತದಲ್ಲಿ ಬೆಳಗ್ಗಿನ ಸಂದರ್ಭದಲ್ಲಿ ಚಂದ್ರ ಗ್ರಹಣವು ಕಾಣಿಸಿಕೊಳ್ಳಲಿದೆ. ಬೆಳಗ್ಗೆ 8.30 ರಿಂದ 11.21 ನಿಮಿಷದವರೆಗೂ ಚಂದ್ರ ಗ್ರಹಣ ಕಾಣಿಸಿಕೊಳ್ಳಲಿದೆ. ಬೆಳಗ್ಗೆ 9.59 ಗಂಟೆಗೆ ಪೂರ್ಣ ಪ್ರಮಾಣದ ಚಂದ್ರ ಗ್ರಹಣವು ಗೋಚರಿಸಲಿದೆ.

ಉಪಾಚಾಯ ಚಂದ್ರ ಗ್ರಹಣದ ವಿಶೇಷತೆ?
ಜುಲೈ. 5ರಂದು, ಚಂದ್ರನು ಭೂಮಿಯ ನೆರಳಿನ ಹೊರ ಭಾಗ ಅಥವಾ ಸಾಮಾನ್ಯ ಪೂರ್ಣಛಾಯೆಯ ಮೂಲಕ ಚಲಿಸುತ್ತಾನೆ. ಸೂರ್ಯ, ಭೂಮಿ ಮತ್ತು ಚಂದ್ರರನ್ನು ಅಪೂರ್ಣವಾಗಿ ಜೋಡಿಸಿದಾಗ ಉಪಾಚಾಯ ಚಂದ್ರ ಗ್ರಹಣವು ಗೋಚರಿಸುತ್ತದೆ. ಈ ಸಮಯದಲ್ಲಿ ಭೂಮಿಯು ಸೂರ್ಯನ ಕಿರಣಗಳನ್ನು ಚಂದ್ರನ ಮೇಲೆ ಬೀಳದಂತೆ ತಡೆಯುತ್ತದೆ.

ಯಾವುದೇ ರೀತಿ ಕೆಟ್ಟ ಪರಿಣಾಮ ಬೀರುವುದಿಲ್ಲ
ಉಪಾಚಾಯ ಚಂದ್ರ ಗ್ರಹಣದಿಂದ ಯಾವುದೇ ಅಪಾಯ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಅಸಲಿಗೆ ಹಿಂದೂ ನಂಬಿಕೆಗಳ ಪ್ರಕಾರ, ಬರಿಗಣ್ಣಿನಿಂದ ನೋಡಲಾಗದ ಗ್ರಹಣವು ಜನರ ಮೇಲೆ ಹಾಗೂ ಅವರ ಜನ್ಮ ಪಟ್ಟಿಯಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮವನ್ನು ಬೀರುವುದಿಲ್ಲ ಎನ್ನಲಾಗಿದೆ.

ಉಪಚಾಯ ಚಂದ್ರ ಗ್ರಹಣ ಮಹತ್ವವೇನು?
ಚಂದ್ರ ಗ್ರಹಣದ ಮಹತ್ವವು ವಿಷ್ಣುವಿನ ಕುರ್ಮಾ ಅವತಾರಕ್ಕೆ ಸಂಬಂಧಿಸಿದ ಸಮುದ್ರ ಮಂಥನ್ ಪ್ರಸಂಗದೊಂದಿಗೆ ಸಂಬಂಧಿಸಿದೆ. ಅಮೃತವನ್ನು ಪಡೆಯಲು ದೇವತೆಗಳು ಮತ್ತು ಅಸುರರು ಕಾಸ್ಮಿಕ್ ಸಾಗರವನ್ನು ಮಥಿಸುವಲ್ಲಿ ಭಾಗವಹಿಸಿದರು. ಈ ವೇಳೆ ಭಗವಾನ್ ಧನವಂತ್ರಿ ಅಮೃತ ಮಡಕೆಯೊಂದಿಗೆ ಕಾಣಿಸಿಕೊಂಡು ನಂತರ ಸ್ವಭಾವನು ಅದನ್ನು ಕಸಿದುಕೊಂಡು ಓಡಿಹೋದನು. ಇದನ್ನು ಅನುಸರಿಸಿ ವಿಷ್ಣು ಧಾರಕವನ್ನು ಮರಳಿ ಪಡೆಯಲು ಮೋಹಿನಿಯಾಗಿ ಕಾಣಿಸಿಕೊಂಡನು. ಭಗವಾನ್ ವಿಷ್ಣು ತನ್ನ ಸುದರ್ಶನ್ ಚಕ್ರದಿಂದ ಅಸುರನ ತಲೆಯನ್ನು ಕತ್ತರಿಸಿದನು, ಅದು ಅವನನ್ನು ಎರಡು ಭಾಗಗಳಾಗಿ ವಿಂಗಡಿಸಿತು. ತಲೆಯನ್ನು ರಾಹು ಎಂದು ಕರೆಯಲಾಗಿದ್ದರೆ, ಬಾಲವು ಕೇತು ಎಂದು ಕರೆಯಲ್ಪಟ್ಟಿತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಸೂರ್ಯ ಮತ್ತು ಚಂದ್ರ, ರಾಹು ಅವರನ್ನು ತಾತ್ಕಾಲಿಕವಾಗಿ ನುಂಗಿ ಕೇತು ಅವರನ್ನು ಬಿಡುಗಡೆ ಮಾಡುತ್ತಾನೆ ಎಂದು ಹೇಳಲಾಗುತ್ತದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications