ಇಂದು'ತೋಳ ಚಂದ್ರ ಗ್ರಹಣ': ಏನು ಮಾಡಬೇಕು, ಏನು ಮಾಡಬಾರದು?
ಬೆಂಗಳೂರು, ಜನವರಿ 9: ಸೂರ್ಯಗ್ರಹಣದ ಬೆನ್ನಲ್ಲೇ ವರ್ಷದ ಮೊದಲ ಚಂದ್ರಗ್ರಹಣವೂ ಇಂದು ಗೋಚರವಾಗಲಿದೆ.
Recommended Video
ಗ್ರಹಣ ಸಮಯದಲ್ಲಿ ಯಾವ ನಿಯಮ ಪಾಲಿಸಬೇಕು. ಗ್ರಹಣದ ಅಪಾಯದಿಂದ ಪಾರಾಗೋದು ಹೇಗೆ?.. ಹೀಗೆ ನಾನಾ ಪ್ರಶ್ನೆಗಳು ಉದ್ಭವಿಸುವುದು ಸಹಜ ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಗ್ರಹಣಗಳು ಸಂಭವಿಸಿದಾಗ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ. ಆದರೆ ಈ ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ನೋಡಬಹುದೆನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಚಂದ್ರ ಗ್ರಹಣದಲ್ಲಿ ಎರಡು ಹಂತಗಳಿವೆ. ಒಂದನೇ ಹಂತದಲ್ಲಿ ಚಂದ್ರನ ಒಂದು ಭಾಗದ ಮೇಲೆ ಭೂಮಿಯ ನೆರಳು ಹಾದುಹೋಗುತ್ತದೆ, ಅಂದರೆ ಪಾರ್ಶ್ವ ಚಂದ್ರಗ್ರಹಣ. ಇನ್ನೊಂದು ಹಂತವೆಂದರೆ ಸಂಪೂರ್ಣ ಚಂದ್ರಗ್ರಹಣ ಅಂದರೆ ಭೂಮಿಯ ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸುತ್ತದೆ.
ಸೂರ್ಯಗ್ರಹಣದಂತೆ ಚಂದ್ರಗ್ರಹಣ ವೀಕ್ಷಿಸಲು ವಿಶೇಷ ಕನ್ನಡಕ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತೋಳ ಚಂದ್ರಗ್ರಹಣ ಎಂದರೇನು?
ಗ್ರಹಣದ ಸಮಯದಲ್ಲಿ ಚಂದ್ರನ ಮೇಲ್ಮೈಯ ಶೇಕಡಾ 90ರಷ್ಟು ಭಾಗವು ಭೂಮಿಯಿಂದ ಆವರಿಸಲ್ಪಡುತ್ತದೆ. ನೆರಳಿನ ಹೊರಭಾಗ ಮಾತ್ರ ಕಾಣಿಸಿಕೊಳ್ಳುತ್ತದೆ. ಪೆನಂಬ್ರಲ್ ಚಂದ್ರ ಗ್ರಹಣವು ಸಾಮಾನ್ಯವಾಗಿ ಸ್ವಲ್ಪ ಗಾಢವಾಗಿದ್ದರೂ, ಹುಣ್ಣಿಮೆಯ ದಿನ ವೀಕ್ಷಿಸಲು ಸಾಧ್ಯವಿಲ್ಲ, ಆದರೆ ಆಕಾಶವು ಸ್ಪಷ್ಟವಾಗಿದ್ದರೆ ಮಾತ್ರ ಕಾಣಿಸಿಕೊಳ್ಳುತ್ತದೆ. ಇದನ್ನು ನೋಡಲು ಸಾಧ್ಯವಾದರೆ ಖಂಡಿತವಾಗಿಯೂ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು. ಇದು ಭಾರತದಲ್ಲೂ ಗೋಚರವಾಗಲಿದೆ.

ಗ್ರಹಣ ಎಷ್ಟು ಹೊತ್ತಿಗೆ ಗೋಚರವಾಗುತ್ತೆ?
ಗ್ರಹಣದ ದಿನ : ಶುಕ್ರವಾರ
ಗೃಹಣದ ಸಮಯ: ರಾತ್ರಿ 10.30 ರಿಂದ 2.35 ರ ತನಕ
ಗ್ರಹಣ ಗೋಚರಿಸುವ ಒಟ್ಟು ಸಮಯ: 4 ಗಂಟೆ 5 ನನಗರಗಳು
ಗೋಚರಿಸುವ ಸ್ಥಳಗಳು: ಏಷ್ಯಾ, ಆಫ್ರೀಕಾ, ಯುರೂಪ್, ಆಸ್ಟ್ರೇಲಿಯಾ ಮತ್ತು ಭಾರತದ ಎಲ್ಲಾ ನಗರಗಳು

ಗ್ರಹಣಕ್ಕೂ ಮುನ್ನ ನೀವು ಏನು ಮಾಡಬಾರದು?
-ದೇವಸ್ಥಾನಕ್ಕೆ ಭೇಟಿ ನೀಡಬೇಡಿ
-ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು
-ಸ್ನಾನ ಮಾಡಬಾರದು
-ಊಟ ಮಾಡಬಾರದು

ಗ್ರಹಣಕ್ಕೂ ಮುನ್ನ ಏನು ಮಾಡಬೇಕು?
-ಮನೆಯ ವಾಸ್ತುವಿಗೆ ದರ್ಬೆ ಹಾಕಬೇಕು
-ಗರ್ಭಿಣಿಯರು ಊಟ ಮಾಡಬೇಕು
-ಮನೆಯ ಸುತ್ತ ಹಾಲು ಅಥವಾ ಮೊಸರನ್ನ ಚೆಲ್ಲಬೇಕು
-ಶಿವನ ಪ್ರಾರ್ಥನೆ ಮಾಡಬೇಕು
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications