ಈತ 7,000ಕೋಟಿ ಲಾಟರಿ ಹಗರಣದ ಕಿಂಗ್ ಪಿನ್ !
ಬೆಂಗಳೂರು, ಮೇ.27: ಒಂದಂಕಿ ಲಾಟರಿ ದಂಧೆಯ ತನಿಖೆಯನ್ನು ಸಿಬಿಐಗೆ ಕರ್ನಾಟಕ ಸರ್ಕಾರ ವಹಿಸುತ್ತಿದ್ದಂತೆ ಅತ್ತ ತಮಿಳುನಾಡಿನಲ್ಲಿ ಲಾಟರಿ ಕಿಂಗ್ ಪಿನ್ ಗಳಾದ ಮೈಕಲ್ ಹಾಗೂ ಸ್ಯಾಂಟಿಯಾಗೋ ಮಾರ್ಟಿನ್ ಎದೆಯಲ್ಲಿ ಡವ ಡವ ಶುರುವಾಗಿದೆ. ಸರಿ ಸುಮಾರು 7,000 ಕೋಟಿ ರು ಮೌಲ್ಯದ ಕತ್ತಲ ಸಾಮ್ರಾಜ್ಯವನ್ನು ಸಿಬಿಐ ಯಾವಾಗ ನಾಶಪಡಿಸುತ್ತದೋ ಕಾದು ನೋಡಬೇಕಿದೆ.
ದಕ್ಷಿಣ ಭಾರತದ ಲಾಟರಿ ದಂಧೆ ಏಜೆಂಟ್ ಗಳ ಪೈಕಿ ಒಬ್ಬನಾದ ಬಂಗಾರಪೇಟೆ ಮೂಲದ ಪಾರಿ ರಾಜನ್ ನಿಂದಾಗಿ ಸದ್ಯಕ್ಕೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ಅಮಾನತಾಗಿದೆ. ಸಿಐಡಿ ತನಿಖೆಯಿಂದ ಸಿಬಿಐ ತನಿಖೆಗೆ ಪ್ರಕರಣ ಹಸ್ತಾಂತರವಾಗುತ್ತಿದೆ.

ದಕ್ಷಿಣ ಭಾರತವೇ ಅಲುಗಾಡಲಿದೆ: ಸಿಬಿಐ ಈ ಪ್ರಕರಣ ಕೈಗೆತ್ತಿಕೊಂಡಿರುವುದರಿಂದ ಹಳೆ ಕಡತಗಳೆಲ್ಲ ಹೊರಕ್ಕೆ ಬರುವ ಸಾಧ್ಯತೆಯಿದೆ. ಕರ್ನಾಟಕದ ಐಪಿಎಸ್, ಐಎಎಸ್ ಅಧಿಕಾರಿಗಳು ರಾಜಕಾರಣಿಗಳಲ್ಲದೆ ತಮಿಳುನಾಡು, ಕೇರಳ, ಈಶಾನ್ಯ ಭಾರತದ ರಾಜ್ಯಗಳ ಮುಖಂಡರಿಗೂ ತಲೆಬಿಸಿಯಾಗಲಿದೆ.
ಮಾರ್ಟಿನ್ ಗೆ ಶುರುವಾಗಿದೆ ನಡುಕ: ಕೊಯಮತ್ತೂರು ಮೂಲದ ಲಾಟರಿ ಮಾರ್ಟಿನ್ ಎಂದೇ ಕುಖ್ಯಾತಿಗೊಳಗಾಗಿರುವ ಕೊಯಮತ್ತೂರು ಮೂಲದ ಸ್ಯಾಂಟಿಯಾಗೊ ಮಾರ್ಟಿನ್ ಕೂಡಾ ಪಾರಿ ರಾಜನ್ ನಂತೆ ಲಾಟರಿ ದಂಧೆ ಜೊತೆಗೆ ರಾಜಕಾರಣಿಗಳ ನಂಟು, ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸಿಕೊಂಡು 7,000 ಕೋಟಿ ರುಗೂ ಮೀರಿದ ಸಾಮ್ರಾಜ್ಯ ಕಟ್ಟಿ ಬೆಳೆಸಿದವರು.
ಕೊಯಮತ್ತೂರಿನ ಗಾಂಧಿನಗರಂನ 6ನೇ ಅಡ್ಡರಸ್ತೆ ಮನೆ ತೊರೆದ ಲಾಟರಿ ಮಾರ್ಟಿನ್ ನಂತರ ತುಡಿಯಲೂರ್ ಕಡೆಗೆ ಸಾಗಿದ್ದ. 2011ರಲ್ಲಿ ಬಂಧನಕ್ಕೊಳಪಟ್ಟ ಮಾರ್ಟಿನ್ ಸುಮಾರು 2000 ಕೋಟಿ ರು ಸ್ವಂತ ಆಸ್ತಿ ಮಾಡಿಕೊಂಡಿದ್ದ ಎನ್ನಲಾಗಿದೆ. ಕೊನೆಗೆ ಮಾರ್ಟಿನ್ ಪತ್ನಿ ಹೋಗಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿಯಾ ಕಾಲು ಹಿಡಿದುಕೊಂಡು ಬೇಡಿಕೊಂಡ ಮೇಲೆ ಮಾರ್ಟಿನ್ ಮೇಲೆ ಕೇಸು ಹಾಕುವುದು ನಿಲ್ಲಿಸಲಾಯಿತು.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications