"ಪರಮಶಿವ ಮುಸ್ಲಿಮರ ಮೊದಲ ಪ್ರವಾದಿ"
ಲಕ್ನೋ, ಫೆ.19: ಶಿವರಾತ್ರಿ ಕಳೆಯುತ್ತಿದ್ದಂತೆ ಹಿಂದೂ ಭಕ್ತಾದಿಗಳು ಶಿವ ಭಜನೆ ಮರೆತಿರಬಹುದು ಅದರೆ, ಜಮಾತೆ ಉಲೆಮಾ ಮುಖ್ಯಸ್ಥರೊಬ್ಬರು ಪರಮಶಿವನನ್ನು ಕೊಂಡಾಡಿದ್ದಾರೆ. ಜಗತ ಪಿತರಂ ವಂದೇ ಪಾರ್ವತಿ ಪರಮೇಶ್ವರಂ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಜಮಾತೆ ಉಲೆಮಾ ಮುಖ್ಯಸ್ಥ ಮುಫ್ತಿ ಮಹಮ್ಮದ್ ಇಲಿಯಾಸ್ ನೀಡಿರುವ ಹೇಳಿಕೆ ಮುಸ್ಲಿಮರಿಗೆ ಆರಗಿಸಿಕೊಳ್ಳಲು ಕಷ್ಟವಾಗುತ್ತಿದೆ.
ಹಿಂದೂಗಳ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮಹಾಶಿವ ಮುಸ್ಲಿಮರ ಪ್ರಥಮ ಪ್ರವಾದಿ ಎಂದು ಮುಫ್ತಿ ಮಹಮ್ಮದ್ ಇಲಿಯಾಸ್ ಹೇಳಿದ್ದಾರೆ. ಅಲ್ಲದೆ, ಪರಮಶಿವ ಹಾಗೂ ಮಾತೆ ಪಾರ್ವತಿ ಜಗತ್ತಿನ ಆದಿ ಪೋಷಕರು ಎಂದಿದ್ದಾರೆ.

ಜಮಾತೆ ಉಲೆಮಾ ಮುಖ್ಯಸ್ಥ ಮುಫ್ತಿ ಅವರು ತಮಾಷೆಗೆ ಈ ರೀತಿ ಹೇಳಿಕೆ ನೀಡಿಲ್ಲ. ಮುಸ್ಲಿಮರಿಗೆ ಇಸ್ಲಾಂ ಧರ್ಮ ಬೋಧಿಸಲು ಬಂದ ಮೊದಲ ಪ್ರವಾದಿ ಪರಮ ಶಿವ. ಚೀನಾ ದೇಶದವರನ್ನು ಚೀನಿಯರು, ಜಪಾನ್ ದೇಶದವರನ್ನು ಜಪಾನೀಯರು ಎನ್ನುವಂತೆ ನಾವೆಲ್ಲರೂ ಭಾರತೀಯರು ಒಂದೇ ತಂದೆ (ಶಿವ) ಮಕ್ಕಳು ಎಂದು ಇಲಿಯಾಸ್ ಅವರು ಅಯೋಧ್ಯೆಯಲ್ಲಿ ಇತ್ತೀಚೆಗೆ ಹೇಳಿದ್ದಾರೆ.
ಆರೆಸ್ಸೆಸ್ ಸೇರಿದಂತೆ ಹಲವಾರು ಹಿಂದೂ ಪರ ಸಂಘಟನೆಗಳು ಇತ್ತೀಚೆಗೆ 'ಭಾರತ ಹಿಂದೂರಾಷ್ಟ್ರ' ಎಂದು ನೀಡುತ್ತಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಇಲಿಯಾಸ್, ಭಾರತ ಹಿಂದೂ ರಾಷ್ಟ್ರ ಎಂಬುದರ ಬಗ್ಗೆ ನಮ್ಮ ಆಕ್ಷೇಪವೇನೂ ಇಲ್ಲ ಎಂದಿದ್ದಾರೆ.
ಫೆ.27 ರಂದು ಜಮಾತೆ ಉಲೆಮಾ ವತಿಯಿಂದ ರಾಷ್ಟ್ರೀಯ ಕೋಮಿ ಏಕತಾ ಸಮ್ಮೇಳನವನ್ನು ಬಲರಾಮ್ ಪುರದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನಕ್ಕೆ ಆಗಮಿಸುವಂತೆ ಹಿಂದೂ ಮುಖಂಡರನ್ನು ಆಹ್ವಾನಿಸಲು ಆಯೋಧ್ಯೆಗೆ ಬಂದಿದ್ದಾಗಿ ಹೇಳಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications