Get Updates
Get notified of breaking news, exclusive insights, and must-see stories!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಠುಸ್‌ ಪಟಾಕಿ: ಮುದುಡಿದ ಕಮಲ

ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಸಮೀಕ್ಷೆಗಳೆಲ್ಲಾ ಉಲ್ಟಾ ಹೊಡೆದಿದೆ. ಉತ್ತರ ಪ್ರದೇಶದಲ್ಲಿ ಕಮಲ ಮುದುಡಿದೆ. ಫೈರ್‌ ಬ್ರ್ಯಾಂಡ್‌ ಖ್ಯಾತಿಯ ಯೋಗಿ ಆದಿತ್ಯನಾಥ್‌ ಕ್ಷೇತ್ರದಲ್ಲಿ ಕಮಲ ಅತಿ ದೊಡ್ಡ ಗೆಲುವು ಸಾಧಿಸಲು ವಿಫಲವಾಗಿದೆ. ಈ ಚುನಾವಣೆಯಲ್ಲಿ ಯೋಗಿ ಹಲವು ಪ್ರಮುಖ ವಿಷಯಗಳಡಿಯಲ್ಲಿ ಮತ ಯಾಚಿಸಿದರು ಆದರೆ, ಎಲ್ಲವೂ ಠುಸ್‌ ಪಟಾಕಿ.

ಚುನಾವಣಾ ಪ್ರಚಾರದ ವೇಳೆ ಯೋಗಿ ಎತ್ತಿರುವ ವಿಷಯಗಳು ವರ್ಕ್‌ಔಟ್‌ ಆಗಲೇ ಇಲ್ಲ. ಆದಿತ್ಯನಾಥ್ ಮೈಕ್‌ ಮುಂದೆ ಬಂದರೆ ಹಿಂದುತ್ವ, ಕಾನೂನು ತಿದ್ಧು ಪಡಿ ಬಗ್ಗೆಯೇ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದರು. ಅಲ್ಲದೆ ಅಲ್ಲದೆ ಮುಸ್ಲಿಂ ಮತದಾರರನ್ನು ತನ್ನದೇ ಯುನಿಕ್ ಧಾಟಿಯಿಂದ ಪದೇ ಪದೇ ತಿವಿಯುತ್ತಲೇ ಬರುತ್ತಿದ್ದರು. ಉತ್ತರ ಪ್ರದೇಶದ ಯೋಗಿ ಸುಮಾರು 170 ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಉತ್ತರ ಪ್ರದೇಶ ಹಾಗೂ ಬೇರೆ ರಾಜ್ಯಗಳು ಸೇರಿವೆ.

Lok Sabha Elections 2024 Brand Yogi Faces Setback Amid BJP s Poor Performance in Maharashtra

ಯೋಗಿ ಕೇಂದ್ರಿಕೃತ ಪ್ರಚಾರ

ಪ್ರಧಾನಿ ನರೇಂದ್ರ ಮೋದಿ ಸಹ ತಮ್ಮ ಚುನಾವಣಾ ಪ್ರಚಾರದಲ್ಲಿ ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಸಾಧನೆಗಳ ಗುಣಗಾನ ಮಾಡುತ್ತಲೇ ಇದ್ದರು. ಕ್ರಿಮಿನಲ್‌ಗಳನ್ನು ಮಟ್ಟ ಹಾಕಿದ್ದಕ್ಕೆ ಅಭಿನಂದನೆ ತಿಳಿಸುತ್ತಲೇ ಬೇರೆಯವರಿಗೆ ತಿವಿಯುತ್ತಲೇ ಇದ್ದರು. ಆದರೆ ಈ ವಾಗ್ಬಾಣಗಳು ಮತಗಾಳಿಗೆ ಕನ್ವರ್ಟ್‌ ಆಗಲೇ ಇಲ್ಲ. ದೇಶದ ಅತಿ ದೊಡ್ಡ ರಾಜ್ಯ, ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ದೊಡ್ಡ ಗೆಲುವು ಸಾಧಿಸುವ ಕನಸು ಕೈ ಕೊಟ್ಟಿದೆ.

ಫಂಡವೀಸ್‌ ರಾಜೀನಾಮೆ?

ಮಹಾರಾಷ್ಟ್ರದಲ್ಲಿ ಬಿಜೆಪಿ ಸೋಲಿಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಒಂದು ವೇಳೆ ಇದೇ ನಿಜ ಆದಲ್ಲಿ ನೆಕ್ಷಟ್‌ ಯೋಗಿ ಅವರ ಪಾಳಿ ಅನ್ನೋದರಲ್ಲಿ ಎರಡು ಮಾತು ಇಲ್ಲವೇ ಇಲ್ಲ. 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್‌ ಗೆಲುವಿನ ಕ್ರೆಡಿಟ್‌ ತೆಗೆದುಕೊಂಡಿದ್ದರು. ಈ ಬಾರಿ ಸೋಲಿಗೂ ಅವರೇ ಹೊಣೆಗಾರರು ಎಂದು ಅವರು ಅರಿತು ಕೊಳ್ಳಬೇಕಿದೆ ಎಂದು ರಾಜಕೀಯ ತಜ್ಞರು ತಿಳಿಸಿದ್ದಾರೆ.

Lok Sabha Elections 2024 Brand Yogi Faces Setback Amid BJP s Poor Performance in Maharashtra

ಹೈಕಮಾಂಡ್‌ಗೆ ರಿಪೋರ್ಟ್‌

ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರ ಬಿದ್ದಾದ ಮೇಲೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಅಲ್ಲದೆ ಸೋಲಿಗೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿಕೊಂಡು ಹೈಕಮಾಂಡ್‌ಗೆ ನೀಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಡಿದ ಸಾಧನೆಯನ್ನು ಮಾಡುವಲ್ಲಿ ಎಡವಿದೆ. ಎನ್ನುವುದರಲ್ಲಿ ಎರಡು ಮಾತು ಇಲ್ಲವೇ ಇಲ್ಲ. ಆದರೆ ಬರೀ ಸ್ಥಾನಗಳು ಕಡಿಮೆ ಆಗಿದ್ದು, ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲಿ ಬಿಜೆಪಿ ಸ್ಥಾನಗಳಿಗೆ ಕತ್ತರಿ ಬಿದ್ದಿದೆ. ಇದನ್ನೇಲ್ಲಾ ಅವಲೋಕಿಸಿದಾಗ ಬಿಜೆಪಿ ಎಡವಿದ್ದು ಎಲ್ಲಿ ಎಂಬುದು ನಿಶ್ಚಿತವಾಗಿ ಅರ್ಥವಾಗುತ್ತದೆ. ಬಿಜೆಪಿ ಅಂದುಕೊಂಡಿದ್ದೆ ಒಂದು ಈಗ ಆಗುತ್ತಿರುವುದೇ ಇನ್ನೊಂದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅತಿ ದೊಡ್ಡ ಪಕ್ಷವಾದರೂ ಬಿಜೆಪಿ ಸರ್ಕಾರ ರಚಿಸಲು ಬೇಕಿದ್ದಷ್ಟು ಬಹುಮತವನ್ನು ಪಡೆಯುವಲ್ಲಿ ವಿಫವಲಾಗಿದ್ದು, ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಅಖಾಡಕ್ಕೆ ಇಳಿಯಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+