Lok Sabha Election 2024: ಏಪ್ರಿಲ್ 19 ರಂದು ಲೋಕಸಭಾ ಚುನಾವಣೆ; ಎಲ್ಲೆಲ್ಲಿ ಮತದಾನ? ಇಲ್ಲಿದೆ ಸಂಪೂರ್ಣ ವಿವರ
ನವದೆಹಲಿ, ಏಪ್ರಿಲ್ 17: ದೇಶಾದ್ಯಂತ 2024 ರ ಲೋಕಸಭಾ ಚುನಾವಣೆ ಏಳು ಹಂತದಲ್ಲಿ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದ್ದು, ಮೊದಲ ಹಂತದ ಚುನಾವಣೆ ಏಪ್ರಿಲ್ 19 ರಂದು ನಡೆಯಲಿದೆ.
ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, ಎರಡನೇ ಹಂತವು ಏಪ್ರಿಲ್ 26 ರಂದು, ಮೂರನೇ ಹಂತವು ಮೇ 7 ರಂದು ನಡೆಯಲಿದೆ. ಮೇ 13 ರಂದು ನಾಲ್ಕನೇ ಹಂತ, ಮೇ 20 ರಂದು ಐದನೇ ಹಂತ, ಮೇ 25 ರಂದು ಆರನೇ ಹಂತ ಮತ್ತು ಜೂನ್ 1 ರಂದು ಕೊನೆಯ ಹಂತದಲ್ಲಿ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. 2024 ರ ಲೋಕಸಭೆ ಚುನಾವಣೆಯ ಜೊತೆಗೆ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆ ಚುನಾವಣೆಗಳು ಸಹ ಏಕಕಾಲದಲ್ಲಿ ನಡೆಯಲಿದೆ.

ಹಂತ 1 ರಲ್ಲಿ ಯಾವ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ?
ಮೊದಲ ಹಂತದ ಚುನಾವಣೆಗಳು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳನ್ನು ಒಳಗೊಂಡಿರುತ್ತವೆ, ಇದರಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣವಾಗಿ ವ್ಯಾಪ್ತಿಗೆ ಒಳಪಡುತ್ತವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
1. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1): ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
2. ಅರುಣಾಚಲ ಪ್ರದೇಶ (2): ಅರುಣಾಚಲ ಪ್ರದೇಶ ಪೂರ್ವ, ಅರುಣಾಚಲ ಪ್ರದೇಶ ಪಶ್ಚಿಮ
3. ಅಸ್ಸಾಂ (5): ದಿಬ್ರುಗಢ್, ಜೋರ್ಹತ್, ಕಾಜಿರಂಗ, ಲಖಿಂಪುರ, ಸೋನಿತ್ಪುರ್
4. ಬಿಹಾರ (4): ಔರಂಗಾಬಾದ್, ಗಯಾ, ಜಮುಯಿ, ನಾವಡಾ
5. ಛತ್ತೀಸ್ಗಢ (1): ಬಸ್ತಾರ್
6. ಜಮ್ಮು ಮತ್ತು ಕಾಶ್ಮೀರ (1): ಉಧಂಪುರ
7. ಲಕ್ಷದ್ವೀಪ (1): ಲಕ್ಷದ್ವೀಪ
8. ಮಧ್ಯಪ್ರದೇಶ (6): ಛಿಂದ್ವಾರಾ, ಬಾಲಾಘಾಟ್, ಜಬಲ್ಪುರ್, ಮಂಡ್ಲಾ, ಸಿಧಿ, ಶಹದೋಲ್
9. ಮಹಾರಾಷ್ಟ್ರ (5): ನಾಗ್ಪುರ, ಚಂದ್ರಾಪುರ, ಭಂಡಾರಾ-ಗೊಂಡಿಯಾ, ಗಡ್ಚಿರೋಲಿ-ಚಿಮೂರ್, ರಾಮ್ಟೆಕ್
10. ಮಣಿಪುರ (2): ಒಳ ಮಣಿಪುರ, ಹೊರ ಮಣಿಪುರ
11. ಮೇಘಾಲಯ (2): ಶಿಲ್ಲಾಂಗ್, ತುರಾ
12. ಮಿಜೋರಾಂ (1): ಮಿಜೋರಾಂ
13. ನಾಗಾಲ್ಯಾಂಡ್ (1): ನಾಗಾಲ್ಯಾಂಡ್
14. ಪುದುಚೇರಿ (1): ಪುದುಚೇರಿ
15. ರಾಜಸ್ಥಾನ(12): ಗಂಗಾನಗರ, ಬಿಕಾನೇರ್, ಚುರು, ಜುಂಜುನು, ಸಿಕರ್, ಜೈಪುರ ಗ್ರಾಮಾಂತರ, ಜೈಪುರ, ಅಲ್ವಾರ್, ಭರತ್ಪುರ, ಕರೌಲಿ-ಧೋಲ್ಪುರ್, ದೌಸಾ, ನಾಗೌರ್
16. ಸಿಕ್ಕಿಂ (1): ಸಿಕ್ಕಿಂ
17. ತಮಿಳುನಾಡು (39): ತಿರುವಳ್ಳೂರು, ಚೆನ್ನೈ ಉತ್ತರ, ಚೆನ್ನೈ ದಕ್ಷಿಣ, ಚೆನ್ನೈ ಸೆಂಟ್ರಲ್, ಪೆರಂಬದೂರ್, ಕಾಂಚೀಪುರಂ, ಅರಕ್ಕೋಣಂ, ವೆಲ್ಲೂರ್, ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ, ಅರಣಿ, ವಿಲುಪ್ಪುರಂ, ಕಲ್ಲಕುರಿಚಿ, ಸೇಲಂ, ನಾಮಕ್ಕಲ್, ಈರೋಡ್, ತಿರುಪ್ಪೂರ್, ನೀಲಗಿರಿ, ಕೊಯಮತ್ತೂರು , ಪೊಲ್ಲಾಚಿ, ದಿಂಡಿಗಲ್, ಕರೂರ್, ತಿರುಚಿರಾಪಳ್ಳಿ, ಪೆರಂಬಲೂರ್, ಕಡಲೂರು, ಚಿದಂಬರಂ, ಮೈಲಾಡುತುರೈ, ನಾಗಪಟ್ಟಿಣಂ, ತಂಜಾವೂರು, ಶಿವಗಂಗಾ, ಮಧುರೈ, ತೇಣಿ, ವಿರುಧುನಗರ, ರಾಮನಾಥಪುರಂ, ತೂತುಕುಡಿ, ತೆಂಕಶಿ, ತಿರುನೆಲ್ವೇಲಿ, ಕನ್ಯಾಕುಮಾರಿ
18. ತ್ರಿಪುರ (1): ತ್ರಿಪುರ ಪಶ್ಚಿಮ
19. ಉತ್ತರಾಖಂಡ (5): ತೆಹ್ರಿ ಗರ್ವಾಲ್, ಗರ್ವಾಲ್, ಅಲ್ಮೋರಾ, ನೈನಿತಾಲ್-ಉಧಮ್ಸಿಂಗ್ ನಗರ, ಹರಿದ್ವಾರ
20. ಉತ್ತರ ಪ್ರದೇಶ (8): ಪಿಲಿಭಿತ್, ಸಹರಾನ್ಪುರ್, ಕೈರಾನಾ, ಮುಜಾಫರ್ನಗರ, ಬಿಜ್ನೋರ್, ನಗೀನಾ, ಮೊರಾದಾಬಾದ್, ರಾಂಪುರ
21. ಪಶ್ಚಿಮ ಬಂಗಾಳ (3): ಕೂಚ್ಬೆಹಾರ್, ಅಲಿಪುರ್ದುವಾರ್ಸ್, ಜಲ್ಪೈಗುರಿ
ಪ್ರಮುಖ ಅಭ್ಯರ್ಥಿಗಳು ಯಾರು?
ಮೊದಲ ಹಂತ ಚುನಾವಣೆ ಏಪ್ರಿಲ್ 19 ರಂದು ನಡೆಯಲಿದ್ದು, ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳ ಚುನಾವಣೆ ನಡೆಯಲಿದೆ. ಇನ್ನೂ ತೆಲಂಗಾಣ ಮಾಜಿ ಗವರ್ನರ್ ತಮಿಳಿಸೈ ಸೌಂದರರಾಜನ್ (ಚೆನ್ನೈ ದಕ್ಷಿಣ), ಡಿಎಂಕೆ ನಾಯಕ ದಯಾನಿಧಿ ಮಾರನ್ (ಚೆನ್ನೈ ಸೆಂಟ್ರಲ್), ಮಾಜಿ ಕೇಂದ್ರ ಸಚಿವ ಎ ರಾಜಾ (ನೀಲಗಿರಿ) ಮತ್ತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ (ಕೊಯಮತ್ತೂರು) ಕಣದಲ್ಲಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಉಧಂಪುರದಿಂದ ಚುನಾವಣಾ ಕಣದಲ್ಲಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ನಾಗ್ಪುರದಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications