Varanasi constituency: ಲೋಕಸಭಾ ಚುನಾವಣೆಯ ಫೈನಲ್ನಲ್ಲಿ ಪ್ರತಿಷ್ಠೆಯ ಕಣ ವಾರಣಾಸಿ!
ನವದೆಹಲಿ, ಮೇ. 26: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಮೇ 25 ರಂದು ಮುಗಿದಿದೆ. ಇನ್ನು ಕೊನೆಯ ಹಂತ ಮಾತ್ರ ಬಾಕಿಯಿದ್ದು, ಈ ಬಾರಿ ಬಿಜೆಪಿ ಫೈನಲ್ನಲ್ಲಿ ವಾರಣಾಸಿಯನ್ನು ಪ್ರಮುಖ ಕ್ಷೇತ್ರ ಮಾಡಿಕೊಂಡಿದೆ. ಇದೆ ಕಾರಣಕ್ಕೆ ಲೋಕಸಭೆ ಚುನಾವಣೆಯ ಏಳನೇ ಹಂತದ ಮತದಾನಕ್ಕೂ ಮುಂಚೆ ಬಿಜೆಪಿ ನಾಯಕರು ವಾರಣಾಸಿಯಲ್ಲಿ ಒಟ್ಟುಗೂಡಲಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಿಂದ ಪಕ್ಷದ ಅಭ್ಯರ್ಥಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಮಪತ್ರ ಸಲ್ಲಿಕೆಗೆಯೇ ಪ್ರಮುಖ ಬಿಜೆಪಿ ನಾಯಕರು ಭಾಗಿಯಾಗಿದ್ದರು. ದೊಡ್ಡ ಮೆರವಣಿಗೆ, ಸಮಾವೇಶ, ಎನ್ಡಿಎಯ ಪ್ರಮುಖ ನಾಯಕರು ಸೇರಿ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ದರು. ಈಗ ತಮ್ಮ ಕ್ಷೇತ್ರಕ್ಕೆ ಮೋದಿ ಹೆಚ್ಚು ಒತ್ತು ನೀಡಲಿದ್ದಾರೆ. ಮೇ 26 ರಿಂದ ಜೂನ್ 1 ರವರೆಗೆ ವಾರಣಾಸಿ ಕ್ಷೇತ್ರದಲ್ಲಿ ನೆಲೆಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಏಳನೇ ಹಂತದ ಮತದಾನಕ್ಕೂ ಮುನ್ನ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ರ್ಯಾಲಿಗಳು ಮತ್ತು ಪ್ರಚಾರಗಳನ್ನು ನಡೆಸಲಿದ್ದಾರೆ. ತಮ್ಮ ವಾರಣಾಸಿ ಕ್ಷೇತ್ರಕ್ಕೂ ಮಹತ್ವ ನೀಡಲಿದ್ದು, ಇತರ ನಾಯಕರೊಂದಿಗೆ ಪ್ರಚಾರ ನಡೆಸಲಿದ್ದಾರೆ.
ಪಿಎಂ ಮೋದಿ 2014 ಮತ್ತು 2019ರಲ್ಲೂ ವಾರಣಾಸಿಯನ್ನು ಪ್ರತಿನಿಧಿಸಿದ್ದಾರೆ. ಆ ಸಮಯದಲ್ಲಿಯೂ ಕೂಡ ಪ್ರಧಾನಿಯವರು ಇದನ್ನೇ ಮಾಡಿದ್ದರು. ಜೂನ್ 1 ರಂದು ಅಂತಿಮ ಹಂತದಲ್ಲಿ ಮತದಾನ ನಡೆಯಲಿರುವ 57 ಸ್ಥಾನಗಳಲ್ಲಿ ವಾರಣಾಸಿ ಸೇರಿ ಉತ್ತರ ಪ್ರದೇಶದ 12 ಕ್ಷೇತ್ರಗಳು ಚುನಾವಣೆ ಎದುರಿಸಲಿವೆ.
ವಾರಣಾಸಿಯಲ್ಲಿ ಪ್ರಧಾನಿಯ ಬೈಠಕ್ಗಳು
ಈ ಅವಧಿಯಲ್ಲಿ ವಾರಣಾಸಿಯಲ್ಲಿ ಪ್ರಧಾನಿ ಸಾಂಸ್ಥಿಕ 'ಬೈಠಕ್' ನಡೆಸಲಿದ್ದಾರೆ. ಕಳೆದ ಬಾರಿಯೂ ನರೇಂದ್ರ ಮೋದಿ ಅವರು ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದರು. ಮಂಗಳವಾರಗಳಲ್ಲಿ ಮಹಿಳಾ ಮತದಾರರೊಂದಿಗೆ ಸಭೆ ನಡೆಸಿದ್ದರು. 1,909 ಬೂತ್ಗಳಿಂದ ತಲಾ 10 ಮಹಿಳೆಯರನ್ನು ಸಂವಾದಕ್ಕೆ ಕರೆಯಲಾಗಿತ್ತು. ಈ ಬಾರಿ ಕೂಡ ಇವುಗಳನ್ನು ಮಾಡುವ ಸಾಧ್ಯತೆಯಿದೆ.

ಪ್ರಧಾನಿ ಮೋದಿ ಅವರು ಕಳೆದ ಹದಿನೈದು ದಿನಗಳಲ್ಲಿ ವಾರಣಾಸಿಗೆ ಎರಡು ಬಾರಿ ಭೇಟಿ ನೀಡಿದ್ದಾರೆ. ಮೇ 14 ರಂದು ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು ಅವರು ವಾರಣಾಸಿಯಲ್ಲಿಯೇ ರಾತ್ರಿ ಕಳೆದರು. ಪ್ರಧಾನಿ ಮೋದಿ ತಮ್ಮ ಕ್ಷೇತ್ರದ ಮತಯಾಚನೆಗಾಗಿ ಪ್ರತ್ಯೇಕ ಸಮಯ ಮೀಸಲಿಡುತ್ತಾರೆ. ಜನರ ಬಳಿ ಮತ ಯಾಚಿಸುತ್ತಾರೆ. ಕಳೆದ ದಶಕದಲ್ಲಿ, ಪ್ರಧಾನ ಮಂತ್ರಿ ವಾರಣಾಸಿಯಲ್ಲಿ ಕನಿಷ್ಠ 50 ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಇಲ್ಲಿಯವರೆಗೆ, ಚುನಾವಣಾ ಸಮಯದಲ್ಲಿ ಪ್ರಧಾನಿ ಮೋದಿ ದೇಶಾದ್ಯಂತ 250 ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 2014 ರ ಸಾರ್ವತ್ರಿಕ ಚುನಾವಣೆಯ ಮೊದಲು ಪ್ರಧಾನಿ ವಾರಣಾಸಿಯಿಂದ ಮೊದಲ ಬಾರಿಗೆ ಚುನಾಯಿತರಾಗುವ ಮೊದಲು ಚುನಾವಣೆಯ ಹಿಂದಿನ ತಿಂಗಳಲ್ಲಿ 437 ರ ್ಯಾಲಿಗಳನ್ನು ನಡೆಸಿದ್ದರು.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral












Click it and Unblock the Notifications