Holi 2024: ಇಲ್ಲಿನ ಪುರುಷರು ಪರಸ್ಪರ ಬಟ್ಟೆ ಹರಿದುಕೊಂಡು ಹೋಳಿ ಆಚರಿಸುವರು... ಬೇರೆ ರಾಜ್ಯಗಳಲ್ಲಿ ಹೇಗೆ?
ದೇಶಾದ್ಯಂತ ಮಾರ್ಚ್ 24 ಮತ್ತು 25 ರಂದು ಹೋಳಿಯನ್ನು ಆಚರಿಸಲಾಗುತ್ತದೆ. ಇದು ಬಣ್ಣಗಳ ಹಬ್ಬವಾಗಿದ್ದು ಜನ ಒಗ್ಗೂಡಿ ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮಿಸುತ್ತಾರೆ. ಈ ಹಬ್ಬವನ್ನು ದೇಶದ ವಿವಿಧ ಸ್ಥಳಗಳಲ್ಲಿ ವಿವಿಧ ಹೆಸರುಗಳೊಂದಿಗೆ ಆಚರಿಸಲಾಗುತ್ತದೆ. ಮಾತ್ರವಲ್ಲದೆ ಈ ಹಬ್ಬವನ್ನು ಆಚರಿಸುವ ರೀತಿ ಕೂಡ ಬೇರೆ ಬೇರೆಯಾಗಿದೆ. ಹಾಗಾದರೆ ದೇಶದಲ್ಲಿ ಆಚರಿಸಲಾಗುವ ವಿವಿಧ ರೀತಿಯ ಹೋಳಿಗಳ ಬಗ್ಗೆ ತಿಳಿಯೋಣ-
ಹೂಗಳ ಹೋಳಿ, ವೃಂದಾವನ
ವೃಂದಾವನದಲ್ಲಿ ಹೋಳಿಯನ್ನು ಹೂವಿನ ಹಬ್ಬ ಎಂದು ಆಚರಿಸಲಾಗುತ್ತದೆ. ವೃಂದಾವನದ ಬಂಕೆ ಬಿಹಾರಿ ದೇವಸ್ಥಾನದ ಅರ್ಚಕರು ದೇವಸ್ಥಾನದ ಬಾಗಿಲು ತೆರೆದ ತಕ್ಷಣ ಭಕ್ತರ ಮೇಲೆ ಹೂವುಗಳನ್ನು ಎಸೆಯುತ್ತಾರೆ. ಈ ರೀತಿಯಾಗಿ ಜನರು ಹೋಳಿಯನ್ನು ವೃಂದಾವನದಲ್ಲಿ ಆನಂದಿಸುತ್ತಾರೆ.

ಖಾರಿ ಹೋಲಿ, ಉತ್ತರಾಖಂಡ
ಉತ್ತರಾಖಂಡದ ಕುಮಾವೂನ್ನಲ್ಲಿ ಹೋಳಿ ಹಬ್ಬವು ಈ ದಿನಕ್ಕೆ ಒಂದು ತಿಂಗಳು ಮುಂಚಿತವಾಗಿ ಪ್ರಾರಂಭವಾಗುತ್ತದೆ. ಇಲ್ಲಿ ಜಾನಪದ ಹಾಡುಗಳು ಮತ್ತು ಭಕ್ಷ್ಯಗಳ ಋತುವು ಒಂದು ತಿಂಗಳು ಮುಂಚಿತವಾಗಿ ಪ್ರಾರಂಭವಾಗುತ್ತದೆ. ಈ ಹಬ್ಬವನ್ನು ಆಚರಿಸಲು, ಸ್ಥಳೀಯ ಜನರು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಸ್ಥಳೀಯ ಸಂಪ್ರದಾಯಿಕ ಹಾಡುಗಳನ್ನು ಹಾಡುತ್ತಾ ಗುಂಪುಗಳಾಗಿ ನೃತ್ಯ ಮಾಡುತ್ತಾರೆ.
ಪಂಜಾಬ್ನಲ್ಲಿ ಹೋಲಾ ಮೊಹಲ್ಲಾ
ಪಂಜಾಬ್ನಲ್ಲಿ ಹೋಳಿ ಹಬ್ಬವನ್ನು ಹೋಲಾ ಮೊಹಲ್ಲಾ ಎಂದೂ ಕರೆಯುತ್ತಾರೆ. ಇದರಲ್ಲಿ ನಿಹಾಂಗ್ ಸಿಖ್ಖರು ಯುದ್ಧ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ. ಹೋಳಿ ಹಬ್ಬಕ್ಕೆ ಕೆಲವು ದಿನಗಳ ಮೊದಲು ಇದನ್ನು ಆಚರಿಸಲಾಗುತ್ತದೆ.
ರಾಜಸ್ಥಾನದಲ್ಲಿ ಹೋಳಿ
ರಾಜಸ್ಥಾನದಲ್ಲಿ ಹೋಳಿಯ ವಿವಿಧ ರೂಪಗಳನ್ನು ಕಾಣಬಹುದು. ಕೆಲವೆಡೆ ಲಾಠ್ಮಾರ್ ಸಂಪ್ರದಾಯವಿದ್ದು, ಕೆಲವೆಡೆ ಬೇಟಮಾರ್ ಹೋಳಿ ಆಚರಣೆ ಮಾಡಲಾಗುತ್ತದೆ. ಅಜ್ಮೀರ್ನ ಪುಷ್ಕರ್ನಲ್ಲಿ ಬಟ್ಟೆ ಹರಿದು ಹೋಳಿ ಆಡಲಾಗುತ್ತದೆ. ಪಶ್ಚಿಮ ರಾಜಸ್ಥಾನದಲ್ಲಿ ಗೈರ್ ನೃತ್ಯವನ್ನು ಆಯೋಜಿಸಲಾದರೆ ಶೇಖಾವತ್ನಲ್ಲಿ ಹೋಳಿ ಸಂದರ್ಭದಲ್ಲಿ ಗಿಂಡಾಡ್ ನೃತ್ಯವನ್ನು ಆಯೋಜಿಸಲಾಗುತ್ತದೆ. ಇಲ್ಲಿ ಹೋಳಿ ಹಬ್ಬವು ಹೋಳಿಗೆ 21 ದಿನಗಳ ಮೊದಲು ಪ್ರಾರಂಭವಾಗುತ್ತದೆ. ಅಲ್ಲಿ ಪುರುಷರ ಗುಂಪು ಜಾನಪದ ಹಾಡುಗಳನ್ನು ಹಾಡುತ್ತಾರೆ ಮತ್ತು ಬಣ್ಣಗಳನ್ನು ಪರಸ್ಪರ ಹಚ್ಚುವ ಮೂಲಕ ಸಂಭ್ರಮಿಸುತ್ತಾರೆ.

ಗೋವಾದ ಶಿಮ್ಗೋ
ಗೋವಾದಲ್ಲಿ ಕೊಂಕಣಿ ಜನರು ಹೋಳಿಯನ್ನು ಶಿಮ್ಗೋ ಅಥವಾ ಶಿಮ್ಗೋತ್ಸವ್ ಎಂದು ಆಚರಿಸುತ್ತಾರೆ. ಈ ಜನರು ವಸಂತವನ್ನು ಸ್ವಾಗತಿಸಲು ಬಣ್ಣ ಎರಚಿ ಆಡುತ್ತಾರೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಆಹಾರವೆಂದರೆ ಮಸಾಲೆಯುಕ್ತ ಚಿಕನ್ ಅಥವಾ ಮಟನ್ ಕರಿ ಇದನ್ನು ಕೊಂಕಣಿಯಲ್ಲಿ ಶಾಗೋಟಿ ಎಂದು ಕರೆಯಲಾಗುತ್ತದೆ. ಗೋವಾದಲ್ಲಿ ಶಿಮ್ಗೋತ್ಸವದ ಸಂದರ್ಭದಲ್ಲಿ ಬೃಹತ್ ಮೆರವಣಿಗೆಯನ್ನು ಮಾಡಲಾಗುತ್ತದೆ.
ದೋಲ್ ಜಾತ್ರೆ, ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಹೋಳಿಯನ್ನು 'ಡೋಲ್ ಜಾತ್ರೆ' ಎಂದು ಕರೆಯಲಾಗುತ್ತದೆ. ಈ ದಿನ ಇಲ್ಲಿನ ಜನರು ಕೃಷ್ಣ ಮತ್ತು ರಾಧೆಯರ ವಿಗ್ರಹಗಳನ್ನು ಪಲ್ಲಕ್ಕಿಯ ಮೇಲೆ ಇಟ್ಟು ಗುಲಾಲ್ನೊಂದಿಗೆ (ಬಣ್ಣ) ಹೋಳಿ ಆಡುತ್ತಾರೆ. ಯುವಕರು ಹಿರಿಯರ ಕಾಲಿಗೆ ತಲೆ ಹಚ್ಚಿ ಆಶೀರ್ವಾದ ಪಡೆಯುತ್ತಾರೆ. ಜಾನಪದ ಹಾಡುಗಳು ಮತ್ತು ಜಾನಪದ ನೃತ್ಯಗಳನ್ನು ಆಯೋಜಿಸಲಾಗುತ್ತದೆ.
-
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ?












Click it and Unblock the Notifications