'ಮಹಾರಾಷ್ಟ್ರದಲ್ಲಿ ಮೊಘಲರು ಪುನರ್ಜನ್ಮ ಪಡೆದರು': ಕೃಷ್ಣ ಭಕ್ತರ ಮೇಲಿನ ಲಾಠಿಚಾರ್ಜ್ಗೆ ಆಕ್ರೋಶ
ಮುಂಬೈ, ಜೂನ್. 12: ಪಂಡರಾಪುರದ ವಿಠ್ಠಲ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಮಹಾರಾಷ್ಟ್ರ ಪೊಲೀಸರು ಭಾನುವಾರ ಪುಣೆ ಜಿಲ್ಲೆಯಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆ. ಶ್ರೀಕೃಷ್ಣನ ರೂಪವಾದ ವಿಠ್ಠಲನ ಭಕ್ತಾದಿಗಳು ರಾಜ್ಯದಲ್ಲಿ ಪೊಲೀಸ್ ಕ್ರಮಕ್ಕೆ ಒಳಗಾಗಿರುವುದು ಇದೇ ಮೊದಲು. ಮೆರವಣಿಗೆ ವೇಳೆ ಭಕ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಪುಣೆ ನಗರದಿಂದ 22 ಕಿ.ಮೀ ದೂರದಲ್ಲಿರುವ ಅಳಂಡಿ ಪಟ್ಟಣದ ಶ್ರೀ ಕ್ಷೇತ್ರ ಪಂಡರಾಪುರದ ದೇವಸ್ಥಾನಕ್ಕೆ ಸಮಾರಂಭವೊಂದಕ್ಕೆ ಪ್ರವೇಶ ಮಾಡುವ ವೇಳೆ ವಾಗ್ವಾದ ನಡೆದಿದೆ. ಅಪಾರ ಸಂಖ್ಯೆಯ ಭಕ್ತರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಿಯಮದ ಪ್ರಕಾರ 75 ಮಂದಿಗೆ ಮಾತ್ರ ಆವರಣ ಪ್ರವೇಶಿಸಲು ಅವಕಾಶವಿದೆ. ಆದರೆ ಅದರ ಬದಲಾಗಿ ಸುಮಾರು 400 ಮಂದಿ ದೇವಸ್ಥಾನಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭಕ್ತರ ಮೇಲಿನ ಲಾಠಿಚಾರ್ಜ್ ಆರೋಪವನ್ನು ನಿರಾಕರಿಸಿದ್ದಾರೆ. ಇದನ್ನು ಪೊಲೀಸರು ಮತ್ತು ಭಕ್ತ ನಡುವಿನ "ಸಣ್ಣ ಘರ್ಷಣೆ" ಎಂದು ಕರೆದಿದ್ದಾರೆ. "ವಾರ್ಕರಿ ಸಮುದಾಯದ ಮೇಲೆ ಯಾವುದೇ ಲಾಠಿಚಾರ್ಜ್ ನಡೆದಿಲ್ಲ" ಎಂದು ದೇವೇಂದ್ರ ಫಡ್ನವಿಸ್ ನಾಗ್ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ನಾವು ಅದೇ ಸ್ಥಳದಲ್ಲಿ (ಅಳಂದಿ) ಕಳೆದ ವರ್ಷ ನಡೆದ ಕಾಲ್ತುಳಿತದಂತಹ ಪರಿಸ್ಥಿತಿಯಿಂದ ಪಾಠ ಕಲಿತಿದ್ದೇವೆ ಮತ್ತು ವಿವಿಧ ಗುಂಪುಗಳಿಗೆ ಕಡಿಮೆ ಪ್ರವೇಶ ಪಾಸ್ಗಳನ್ನು ನೀಡಲು ಪ್ರಯತ್ನಿಸಿದ್ದೇವೆ. ತೀರ್ಥಯಾತ್ರೆಯಲ್ಲಿ ಭಾಗವಹಿಸುವ ಪ್ರತಿ ಗುಂಪಿಗೆ 75 ಪಾಸ್ಗಳನ್ನು ನೀಡಲು ನಿರ್ಧರಿಸಲಾಗಿದೆ" ಎಂದು ನಿರ್ವಹಿಸುವ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಉಲ್ಲೇಖಿಸಿದೆ.

"ಸುಮಾರು 500 ಜನರು ಯಾತ್ರೆಯಲ್ಲಿ ಭಾಗವಹಿಸುವುದಾಗಿ ಮತ್ತು ಪ್ರವೇಶ ಪಾಸ್ ಹಂಚಿಕೆಯ ನಿರ್ಧಾರವನ್ನು ಅನುಸರಿಸುವುದಿಲ್ಲ ಎಂದು ಭಕ್ತರು ಗಲಾಟೆ ಮಾಡಿದರು. ಅವರು ಬ್ಯಾರಿಕೇಡ್ಗಳನ್ನು ಮುರಿದರು. ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದರು, ಈ ಸಂದರ್ಭದಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಗಾಯಗೊಂಡರು" ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಈ ಘಟನೆ ಹಿನ್ನೆಲೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ.
Oppositions condemn Maharashtra police resorting lathicharge to disperse devotees-Varkari. Maharashtra Congress president Nana Patole says this is century old tradition of going to Pandharpur & part of Vari, but Shinde Fadnavis govt first time resorted lathicharge on Varkari pic.twitter.com/kw6NTNecGc
— Sudhir Suryawanshi (@ss_suryawanshi) June 11, 2023
"ಓಹೋ.. ಹಿಂದುತ್ವ ಸರ್ಕಾರದ ಆಡಂಬರ ಬಯಲಾಗಿದೆ.. ಮುಖವಾಡ ಕಳಚಿಬಿತ್ತು. ಔರಂಗಜೇಬ್ ಇದಕ್ಕಿಂಯ ವಿಭಿನ್ನವಾಗಿ ವರ್ತಿಸುತ್ತಿದ್ದರೇ..? ಮಹಾರಾಷ್ಟ್ರದಲ್ಲಿ ಮೊಘಲರು ಪುನರ್ಜನ್ಮ ಪಡೆದಿದ್ದಾರೆ" ಎಂದು ಶಿವಸೇನೆಯ ಹಿರಿಯ ಸಂಸದ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.
''ಶ್ರೀ ಕ್ಷೇತ್ರ ಆಳಂದಿಯಲ್ಲಿ ವಾರ್ಕರಿ ಸಹೋದರರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ ರೀತಿ ಅತ್ಯಂತ ಅಮಾನವೀಯವಾಗಿದ್ದು, ವಾರ್ಕರಿ ಪಂಗಡಕ್ಕೆ ಬುನಾದಿ ಹಾಕಿದ ಮಹಾನ್ ಸಂತ ಜ್ಞಾನೇಶ್ವರ ಮಹಾರಾಜರ ಸಮ್ಮುಖದಲ್ಲಿ ವಾರ್ಕರಿಗಳಿಗೆ ಈ ಅವಮಾನ ಮಾಡಿರುವುದು ಖಂಡನೀಯ. ಸರಕಾರಕ್ಕೆ ವಾರ್ಕರಿ ಪಂಥದ ಬಗ್ಗೆ ಏನಾದರೂ ಜವಾಬ್ದಾರಿ ಇದೆಯೇ ಅಥವಾ ಇಲ್ಲವೇ?" ಎಂದು ಎನ್ಸಿಪಿಯ ಚಗ್ಗನ್ ಭುಜಬಲ್ ಟ್ವೀಟ್ ಮಾಡಿದ್ದಾರೆ.

ವಾರ್ಕರಿಗಳು ಆಳಂದಿಯಿಂದ ಪಂಡರಾಪುರದ ವಿಠಲ ದೇವಸ್ಥಾನಕ್ಕೆ ಹೋಗುವ ಯಾತ್ರಿಕರು. ಜೂನ್ 11ರಿಂದ ಪಾದಯಾತ್ರೆ ಆರಂಭವಾಗಿತ್ತು. ಜೂನ್ 10 ರಂದು ಆಳಂದಿಯಿಂದ ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮತ್ತು ದೇಹುದಿಂದ ಸಂತ ತುಕಾರಾಂ ಮಹಾರಾಜ್ ಪಾಲ್ಖಿ ನಿರ್ಗಮಿಸುವುದು ಈ ಮಹಾ ಯಾತ್ರೆಯ ಆರಂಭವನ್ನು ಸೂಚಿಸುತ್ತದೆ. ಜೂನ್ 29 ರಂದು ಆಷಾಧಿ ಏಕಾದಶಿಯ ಶುಭ ದಿನದಂದು ಪಂಡರಾಪುರದ ಪವಿತ್ರ ಪಟ್ಟಣದಲ್ಲಿ ವಾರ್ಕರಿಗಳು ಸೇರುವ ನಿರೀಕ್ಷೆಯಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications