ಅತೀಕ್ ಅಹ್ಮದ್ ವಶಪಡಿಸಿಕೊಂಡಿದ್ದ ಜಮೀನು ಮಾಲೀಕರಿಗೆ ವಾಪಸ್: ಆಯೋಗ ರಚನೆಗೆ ಯೋಗಿ ಸರ್ಕಾರ ಚಿಂತನೆ
ಲಕ್ನೋ ಏಪ್ರಿಲ್ 25: ಕ್ರಿಮಿನಲ್ ಅತೀಕ್ ಅಹ್ಮದ್ ತನಗೆ ಇಷ್ಟವಾದ ಜಮೀನನ್ನು ಕಬಳಿಸುತ್ತಿದ್ದ. ತನಗೆ ಬೇಕೆನಿಸಿದರೆ ಅರ್ಧ ಬೆಲೆಗೂ ಜನರಿಂದ ಜಮೀನು ಖರೀದಿಸುತ್ತಿದ್ದನು. ಅತೀಕ್ ನ ಭೀಕರತೆಯಿಂದ ನರಳುತ್ತಿರುವವರಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ.
ಹೌದು.. ಅತೀಕ್ ವಶಪಡಿಸಿಕೊಂಡ ಭೂಮಿಯನ್ನು ಜನರಿಗೆ ಹಿಂದಿರುಗಿಸಬಹುದೇ ಎಂದು ಯೋಗಿ ಸರ್ಕಾರ ಚಿಂತನೆ ನಡೆಸುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ರಾಜ್ಯದಲ್ಲಿ ಯೋಗಿ ಸರ್ಕಾರ ಇದಕ್ಕಾಗಿ ಆಯೋಗವನ್ನು ರಚಿಸುತ್ತಿದೆ. ಈ ಆಯೋಗ ಅತೀಕ್ನಿಂದ ಭೂಮಿಯನ್ನು ಕಳೆದುಕೊಂಡವರು ಕಾನೂನುಬದ್ಧವಾಗಿ ಮರಳಿ ಪಡೆಯಲು ಸಹಾಯ ಮಾಡುತ್ತದೆ.

ಅತೀಕ್ ಅಹ್ಮದ್ ಹತ್ಯೆ ಪ್ರಕರಣದ ನಂತರ ಇದೀಗ ಯೋಗಿ ಸರ್ಕಾರ ಮಾಫಿಯಾದಿಂದ ವಶಪಡಿಸಿಕೊಂಡಿರುವ ಭೂಮಿಯನ್ನು ಜನರಿಗೆ ಹಿಂದಿರುಗಿಸಲು ಯೋಜಿಸುತ್ತಿದೆ. ಸುದ್ದಿ ಪ್ರಕಾರ, ಯೋಗಿ ಸರ್ಕಾರ ಶೀಘ್ರದಲ್ಲೇ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.
ಅತೀಕ್ ಹತ್ಯೆ ಪ್ರಕರಣದ ನಂತರ ಅತೀಕ್ ಮತ್ತು ಅಶ್ರಫ್ ಬಲವಂತವಾಗಿ ಜಮೀನು ಕಬಳಿಸಿದವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ವಿವರ ಸಿದ್ಧಪಡಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಇಂತಹ ಅನೇಕರು ಇಂದು ಪೊಲೀಸರ ಠಾಣೆಗೆ ಬರುತ್ತಿದ್ದಾರೆ.
ಇದೀಗ ಈ ಜಮೀನುಗಳನ್ನು ಅತೀಕ್ ಗ್ಯಾಂಗ್ಗಳ ವಶದಿಂದ ಮುಕ್ತಗೊಳಿಸಿ ಜನರಿಗೆ ಹಿಂದಿರುಗಿಸುವ ಯೋಜನೆಯನ್ನು ಯೋಗಿ ಸರ್ಕಾರ ಹೊಂದಿದೆ. ಸುದ್ದಿ ಪ್ರಕಾರ, ಇದಕ್ಕಾಗಿ ಸಮಿತಿಯನ್ನು ರಚಿಸುವ ಚಿಂತನೆ ನಡೆದಿದೆ. ಸಂತ್ರಸ್ತರಿಗೆ ತಮ್ಮ ಜಮೀನು ವಾಪಸ್ ಪಡೆಯಲು ಆಯೋಗ ಕಾನೂನು ನೆರವು ನೀಡಲಿದೆ.

ಯುಪಿ ನಗರಪಾಲಿಕೆ ಚುನಾವಣೆ: -
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುನ್ಸಿಪಲ್ ಚುನಾವಣಾ ಪ್ರಚಾರದ ಆರಂಭದಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈಗ ರಾಜ್ಯದಲ್ಲಿ ಕರ್ಫ್ಯೂ ಇಲ್ಲ, ಗಲಭೆ ಇಲ್ಲ ಎಂದು ಸಿಎಂ ಹೇಳಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಈಗ ಗಲಭೆಯಾಗಲೀ, ಕರ್ಫ್ಯೂ ಆಗಲಿ ಇಲ್ಲ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಯುಪಿ ಇನ್ನು ಮುಂದೆ ಉತ್ಕೃಷ್ಟ ರಾಜ್ಯವಾಗಿರುವುದರಿಂದ ಇಲ್ಲಿ ಯಾವುದೇ ಸುಲಿಗೆ ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಯುಪಿ 6 ವರ್ಷಗಳ ಹಿಂದೆ ಗಲಭೆ ಮತ್ತು ಕರ್ಫ್ಯೂ ಐಡೆಂಟಿಟಿಯಾಗಿತ್ತು. ಹೆಣ್ಣು ಮಕ್ಕಳಾಗಲೀ ತಾಯಂದಿರ ಗೌರವವಾಗಲೀ ಸುರಕ್ಷಿತವಾಗಿರಲಿಲ್ಲ. ತುಷ್ಟೀಕರಣ ಮತ್ತು ಪಲಾಯನವಾದದ ರಾಜಕಾರಣ ನಡೆಯುತ್ತಿತ್ತು. ಕೇವಲ 6 ವರ್ಷಗಳಲ್ಲಿ ಸಂಪೂರ್ಣ ಪರಿಸ್ಥಿತಿ ಬದಲಾಗಿದೆ. ರಾಜ್ಯದಲ್ಲಿ ಈಗ ಮಾಫಿಯಾ-ಕ್ರಿಮಿನಲ್ಗಳು ಹಿಂದೆ ಸರಿದಿದ್ದಾರೆ, ಭದ್ರತೆ, ಸಮೃದ್ಧಿ ಮತ್ತು ಉದ್ಯೋಗ ಹೆಚ್ಚಾಗಿದೆ ಎಂದು ಸಿಎಂ ಯೋಗಿ ಹೇಳಿದರು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications