ಭಾರತದಲ್ಲಿ 'ಟೊಮೇಟೊ ಜ್ವರ'ದ ಬಗ್ಗೆ ಲ್ಯಾನ್ಸೆಟ್ ಎಚ್ಚರಿಕೆ
ಭಾರತದಲ್ಲಿ ಕಾಲಿಡುತ್ತಿರುವ ಹೊಸ ಅನಾರೋಗ್ಯದ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಇದನ್ನು ಸಾಮಾನ್ಯವಾಗಿ 'ಟೊಮೇಟೊ ಜ್ವರ' ಎಂದು ಕರೆಯಲಾಗುತ್ತದೆ. ಇದು ಕೈ, ಕಾಲು ಮತ್ತು ಬಾಯಿಯಲ್ಲಿ ಕಾಣಿಸಿಕೊಳ್ಳುವ ರೋಗವಾಗಿದ್ದು, ಕೇರಳ ಮತ್ತು ಒಡಿಶಾದಲ್ಲಿ ಪ್ರಕರಣಗಳು ಕಂಡುಬಂದಿದೆ. ಲ್ಯಾನ್ಸೆಟ್ ರೆಸ್ಪಿರೇಟರಿ ಜರ್ನಲ್ (Lancet Respiratory Journal) ಪ್ರಕಾರ, ಮೇ 6 ರಂದು ಕೇರಳದ ಕೊಲ್ಲಂ 'ಟೊಮ್ಯಾಟೊ ಜ್ವರ' ಪ್ರಕರಣವನ್ನು ಮೊದಲು ವರದಿ ಮಾಡಿತು. ಇದುವರೆಗೆ ಅಲ್ಲಿ 82 ಮಕ್ಕಳಿಗೆ ಸೋಂಕು ತಗುಲಿದೆ. ಈ ಮಕ್ಕಳು 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಲ್ಯಾನ್ಸೆಟ್ ವರದಿ ತಿಳಿಸಿದೆ. ಹೀಗಾಗಿ ಲ್ಯಾನ್ಸೆಟ್ ಭಾರತದಲ್ಲಿ 'ಟೊಮೇಟೊ ಫ್ಲೂ' ಬಗ್ಗೆ ಎಚ್ಚರಿಕೆ ನೀಡಿದೆ.
"ನಾವು ಕೋವಿಡ್ -19 ರ ನಾಲ್ಕನೇ ಅಲೆಯಲ್ಲಿದ್ದೇವೆ. ಟೊಮೆಟೊ ಫ್ಲೂ ಅಥವಾ ಟೊಮೆಟೊ ಜ್ವರ ಎಂದು ಕರೆಯಲ್ಪಡುವ ಹೊಸ ವೈರಸ್, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೇರಳದ ಮೂಲಕ ಭಾರತದಲ್ಲಿ ಮೊದಲು ಪತ್ತೆಯಾಯಿತು" ಎಂದು ಲ್ಯಾನ್ಸೆಟ್ ಹೇಳುತ್ತದೆ.
ಸಾಂಕ್ರಾಮಿಕ ರೋಗವು ಕರುಳಿನ ವೈರಸ್ಗಳಿಂದ ಉಂಟಾಗುತ್ತದೆ ಮತ್ತು ವಯಸ್ಕರಲ್ಲಿ ವಿರಳವಾಗಿ ಕಂಡುಬರುತ್ತದೆ. ಏಕೆಂದರೆ ಅವರು ಸಾಮಾನ್ಯವಾಗಿ ವೈರಸ್ನಿಂದ ರಕ್ಷಿಸಲು ಸಾಕಷ್ಟು ಪ್ರಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುತ್ತಾರೆ. ರೋಗಿಯ ದೇಹದಲ್ಲಿ ಕಾಣಿಸಿಕೊಳ್ಳುವ ಕೆಂಪು, ನೋವಿನ ಗುಳ್ಳೆಗಳು ಮತ್ತು ಕ್ರಮೇಣ ಟೊಮೆಟೊ ಗಾತ್ರಕ್ಕೆ ಹೆಚ್ಚಾಗುವುದರಿಂದ ಸೋಂಕಿಗೆ 'ಟೊಮ್ಯಾಟೊ ಜ್ವರ' ಎಂದು ಹೆಸರಿಸಲಾಗಿದೆ.

ರೋಗಲಕ್ಷಣಗಳು ಅಧಿಕ ಜ್ವರ, ದೇಹದ ನೋವು, ಕೀಲು ಊತ ಮತ್ತು ಆಯಾಸ - ಚಿಕೂನ್ಗುನ್ಯಾದಂತೆಯೇ ಇರುತ್ತದೆ. ಕೆಲವು ರೋಗಿಗಳು ವಾಕರಿಕೆ, ವಾಂತಿ, ಅತಿಸಾರ, ಜ್ವರ, ನಿರ್ಜಲೀಕರಣ, ಊದಿಕೊಂಡ ಕೀಲುಗಳು ಮತ್ತು ದೇಹದ ನೋವುಗಳನ್ನು ಸಹ ವರದಿ ಮಾಡಿದ್ದಾರೆ.
ಲ್ಯಾನ್ಸೆಟ್ ಪ್ರಕಾರ, ಕೇರಳದ ಆಂಚಲ್, ಆರ್ಯಂಕಾ ಮತ್ತು ನೆಡುವತ್ತೂರ್ ಇತರ ಪೀಡಿತ ಪ್ರದೇಶಗಳಾಗಿವೆ. ಈ ಕಾಯಿಲೆಯ ಹೊರಹೊಮ್ಮುವಿಕೆಯು ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಎಚ್ಚರಿಕೆಯನ್ನು ಉಂಟುಮಾಡಿದೆ.

"ಹೆಚ್ಚುವರಿಯಾಗಿ, ಭುವನೇಶ್ವರದಲ್ಲಿರುವ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದಿಂದ ಒಡಿಶಾದಲ್ಲಿ 26 ಮಕ್ಕಳು (1-9 ವರ್ಷ ವಯಸ್ಸಿನವರು) ರೋಗವನ್ನು ಹೊಂದಿದ್ದಾರೆಂದು ವರದಿಯಾಗಿದೆ. ಇಲ್ಲಿಯವರೆಗೆ, ಕೇರಳ, ತಮಿಳುನಾಡು ಮತ್ತು ಒಡಿಶಾ ಹೊರತುಪಡಿಸಿ, ಭಾರತದಲ್ಲಿ ಯಾವುದೇ ಪ್ರದೇಶಗಳಲ್ಲಿ ಟೊಮೆಟ್ಓ ಜ್ವರ ಕಂಡುಬಂದಿಲ್ಲ" ಎಂದು ಲ್ಯಾನ್ಸೆಟ್ ವರದಿ ಹೇಳಿದೆ. ಟೊಮೆಟೊ ಜ್ವರಕ್ಕೆ ಚಿಕಿತ್ಸೆ ನೀಡಲು ಯಾವುದೇ ನಿರ್ದಿಷ್ಟ ಔಷಧಿ ಅಸ್ತಿತ್ವದಲ್ಲಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications