ಲೋಕಸಭೆಯಲ್ಲಿ ಭದ್ರತಾ ಲೋಪ: ಸಂಸದರಲ್ಲಿ ಹೆಚ್ಚಿದ ಭೀತಿ!
ದೆಹಲಿ ಡಿಸೆಂಬರ್ 13: ಲೋಕಸಭೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಪ್ರವೇಶಿಸಿದ್ದು ಸಂಸದರಲ್ಲಿ ಭೀತಿಯನ್ನು ಹುಟ್ಟಿಸಿದೆ. ಅಪರಿಚಿತರನ್ನು ನೋಡುತ್ತಿದ್ದಂತೆ ಸಂಸದರು ಭಯದಿಂದ ಲೋಕಸಭೆಯಿಂದ ಹೊರ ಓಡಿ ಬಂದಿದ್ದಾರೆ. ಇದು ಲೋಕಸಭೆಯಲ್ಲಿ ಭದ್ರತಾ ಲೋಪವನ್ನು ಎತ್ತಿ ತೋರಿಸುತ್ತದೆ.
ಅಪರಿಚಿತ ವ್ಯಕ್ತಿ ಕೈಯಲ್ಲಿ ಕಲರ್ ಸ್ಮೋಕ್ ಇದ್ದಿದ್ದು ಕಂಡುಬಂದಿದೆ. ಈ ಬಗ್ಗೆ ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಮಾತನಾಡಿ, "ಇದೊಂದು ಭಯಾನಕ ಅನುಭವ. ಅವರ ಗುರಿ ಏನು ಮತ್ತು ಅವರು ಏಕೆ ಹೀಗೆ ಮಾಡುತ್ತಿದ್ದಾರೆಂದು ಯಾರಿಗೂ ಊಹಿಸಲು ಸಾಧ್ಯವಾಗಲಿಲ್ಲ. ನಾವೆಲ್ಲರೂ ತಕ್ಷಣವೇ ಸದನದಿಂದ ಹೊರಬಂದೆವು, ಆದರೆ ಇದು ಭದ್ರತಾ ಲೋಪವಾಗಿದೆ. ಅವರು ಹೊಗೆ ಬಿಡುವ ಉಪಕರಣಗಳೊಂದಿಗೆ ಹೇಗೆ ಪ್ರವೇಶಿಸಿದರು? ಎಂಬ ಬಗ್ಗೆ ತನಿಖೆಯಾಗಬೇಕಿದೆ..." ಎಂದರು.

ಈ ಬಗ್ಗೆ ಸಮಾಜವಾದಿ ಪಕ್ಷದ (ಎಸ್ಪಿ) ಸಂಸದೆ ಡಿಂಪಲ್ ಯಾದವ್ ಮಾತನಾಡಿ, "ಇಲ್ಲಿಗೆ ಬರುವವರೆಲ್ಲರೂ ಸಂದರ್ಶಕರು ಅಥವಾ ವರದಿಗಾರರು ಟ್ಯಾಗ್ಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಸರ್ಕಾರವು ಈ ಬಗ್ಗೆ ಗಮನ ಹರಿಸಬೇಕು ಎಂದು ನಾನು ಭಾವಿಸುತ್ತೇನೆ. ಇದು ಸಂಪೂರ್ಣ ಭದ್ರತಾ ಲೋಪ ಎಂದು ನಾನು ಭಾವಿಸುತ್ತೇನೆ. ಲೋಕಸಭೆಯ ಒಳಗೆ ಏನು ಬೇಕಾದರೂ ಆಗಬಹುದಿತ್ತು..." ಎಂದು ಹೇಳಿದರು.
#WATCH | Security breach in Lok Sabha | TMC MP Sudip Bandyopadhyay says, "It was a terrible experience. Nobody could guess what was their target and why were they doing this. We all left the House immediately, but it was a security lapse. How could they enter with instruments… pic.twitter.com/efnwGGTdvJ
— ANI (@ANI) December 13, 2023
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಭದ್ರತಾ ಉಲ್ಲಂಘನೆ ಮತ್ತು ಸದನದಲ್ಲಿ ಗದ್ದಲದ ಘಟನೆಯ ಕುರಿತು ಮಾತನಾಡಿದರು. "ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದರು ಮತ್ತು ಅವರಿಂದ ಅನಿಲ ಹೊರಸೂಸುವಿಕೆಯಾಗುವ ಏನನ್ನೋ ಎಸೆಯಲಾಯಿತು. ಅವರನ್ನು ಸಂಸದರು ಹಿಡಿದರು, ಅವರನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕರೆತಂದರು. ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಇದು ಖಂಡಿತವಾಗಿಯೂ ಭದ್ರತಾ ಲೋಪವಾಗಿದೆ" ಎಂದು ಹೇಳಿದರು.
#WATCH | Security breach in Lok Sabha | Congress MP Karti Chidambaram says "Suddenly two young men around 20 years old jumped into the House from the visitor's gallery and had canisters in their hand. These canisters were emitting yellow smoke. One of them was attempting to run… pic.twitter.com/RhZlecrzxo
— ANI (@ANI) December 13, 2023
ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಮಾತನಾಡಿ, "ಇಬ್ಬರು 20 ವರ್ಷ ವಯಸ್ಸಿನ ಯುವಕರು ಇದ್ದಕ್ಕಿದ್ದಂತೆ ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದರು ಮತ್ತು ಅವರ ಕೈಯಲ್ಲಿ ಡಬ್ಬಿಗಳನ್ನು ಹೊಂದಿದ್ದರು. ಈ ಡಬ್ಬಿಗಳು ಹಳದಿ ಹೊಗೆಯನ್ನು ಹೊರಸೂಸುತ್ತಿದ್ದವು. ಅವರಲ್ಲಿ ಒಬ್ಬರು ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸುತ್ತಿದ್ದರು. ಕೆಲವು ಘೋಷಣೆಗಳನ್ನು ಕೂಗಿದರು. ಹೊಗೆಯು ವಿಷಕಾರಿಯಾಗಿರಬಹುದು. ಇದು ವಿಶೇಷವಾಗಿ ಡಿಸೆಂಬರ್ 13 ರಂದು 2001 ರಲ್ಲಿ ಸಂಸತ್ತಿನ ಮೇಲೆ ದಾಳಿಯಾದ ದಿನದಂದು ಗಂಭೀರವಾದ ಭದ್ರತಾ ಉಲ್ಲಂಘನೆಯಾಗಿದೆ ... " ಎಂದು ಕಿಡಿ ಕಾರಿದರು.












Click it and Unblock the Notifications