ತಾಯ್ನಾಡಲ್ಲಿ ಮೋದಿ ಹೆಮ್ಮೆಯಿಂದ ಹೇಳಿದ ಮಾತೇನು?
ಎರಡು ದಿನಗಳ ಕಾಲ ತಮ್ಮ ತಾಯ್ನಾಡಾದ ಗುಜರಾತಿನಲ್ಲಿ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ ಗುಜರಾತಿನ ಜನರ ಮನೋಬಲವನ್ನು ಕೊಂಡಾಡಿದರು.
ಕಛ್, ಮೇ 23: ಕಛ್ ಗೆ ನನ್ನ ಹೃದಯದಲ್ಲಿಹೆಮ್ಮೆಯ ಸ್ಥಾನವಿದೆ. 2001 ರ ಭೂಕಂಪದಿಂದಾಗಿ ಸಂಪೂರ್ಣ ನಾಶವಾಗಿದ್ದ ಕಛ್ ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿ ಹೆಸರು ಮಾಡಿದೆ. ಇಲ್ಲಿನ ಜನರ ಛಲ ಮತ್ತು ಧೈರ್ಯದಿಂದಲೇ ಇದು ಸಾಧ್ಯವಾಗಿರುವುದು ಎಂದು ಪ್ರಧಾನಿ ನರೆಂದ್ರ ಮೋದಿ ಕಛ್ ಜನರ ಕುರಿತು ಅಭಿಮಾನ ಮತ್ತು ಮೆಚ್ಚುಗೆಯ ಮಾತುಗಳನ್ನಾಡಿದರು.
ಎರಡು ದಿನಗಳ ಕಾಲ ತಮ್ಮ ತಾಯ್ನಾಡಾದ ಗುಜರಾತ್ ಪ್ರವಾಸದಲ್ಲಿರುವ ಮೋದಿ, ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿ, ಗುಜರಾತಿನ ಜನರ ಮನೋಬಲವನ್ನು ಕೊಂಡಾಡಿದರು. ನಿನ್ನೆ (ಮೇ 22) ಇಲ್ಲಿನ ಕಂಡ್ಲಾ ಮತ್ತು ಬಚೋ ಬಂದರುಗಳನ್ನು ಉದ್ಘಾಟಿಸಿದ ಅವರು, ಬಂದರುಗಳು ಪ್ರತಿ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಮೂಲಸೌಕರ್ಯ ಅಭಿವೃದ್ಧಿ ಆಡಳಿತದಲ್ಲಿ ಪಾರದರ್ಶಕತೆ ಈ ಎಲ್ಲವೂ ಒಂದು ಸರ್ಕಾರದ ಆಧಾರ ಸ್ತಂಬಗಳು ಎಂಮದಿರುವ ಮೋದಿ, ಕಛ್ ಜನರು ನನಗೆ ತೋರಿದ ಅಭಿಮಾನಕ್ಕೆ ಚಿರಋಣಿ ಎಂದರು.[ದೇಶದ ಎಲ್ಲ ಹಳ್ಳಿಗಳಲ್ಲೂ ಮುಂದಿನ ವರ್ಷದ ಹೊತ್ತಿಗೆ ವಿದ್ಯುತ್ ಸಂಪರ್ಕ: ಮೋದಿ]
ಅತ್ತ ಮೋದಿ ದೇಶದ ಆಧಾರ ಸ್ತಂಬದ ಬಗ್ಗೆ ಮಾತನಾಡಿ, ದೇಶದ ಅಭಿವೃದ್ಧಿಯ ಕುರಿತು ಚಿಂತಿಸುತ್ತಿದ್ದರೆ ಇತ್ತ ಕಾಶ್ಮೀರದಲ್ಲಿ ದೇಶದ ಭವಿಷ್ಯ ಎಂದೇ ಕರೆಸಿಕೊಳ್ಳುವ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳು ಕಲ್ಲು ಹಿಡಿದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿನಗರದಲ್ಲಿ ಪ್ರಧಾನಿ ಮೋದಿ

ಹತ್ರ ಬಂದ್ರೆ ಹುಷಾರ್!

ನಾಲ್ಗೊಂಡದಲ್ಲಿ ಅಮಿತ್ ಶಾ
ತೆಲಂಗಾಣದ ನಾಲ್ಗೊಂಡದ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮನೆ ಮನೆಯ ಪ್ರಚಾರದ ಸಮಯದಲ್ಲಿ ತೆರಟ್ಪಳ್ಳಿಯ ದಲಿತ ಕಾಲೊನಿಯಲ್ಲಿಕಂಡಿದ್ದು ಹೀಗೆ.

ರೈತರಿಗಾಗಿ ಹೋರಾಟ
ಸ್ವಾಭಿಮಾನಿ ಶೆತ್ಕಾರಿ ಸಂಘಟನೆಯ ನಾಯಕ ರಾಜು ಶೆಟ್ಟಿ ರೈತರ ಪರ ಹೋರಾಟ ಆರಂಭಿಸಿದ್ದು, ನಿನ್ನೆ ಮಹಾರಾಷ್ಟ್ರದ ಪುಣೆಯಿಂದ ಮುಂಬೈ ವರೆಗೆ ಪ್ರತಿಭಟನೆ ನಡೆಸಿದರು. ಆ ಸಂದರ್ಭದಲ್ಲಿ ತಮ್ಮ ಬೆಂಬಲಿಗರೊಂದಿಗೆ ಅವರು ಕಂಡುಬಂದಿದ್ದು ಹೀಗೆ.

ಮ್ಯಾಂಚೆಸ್ಟರ್ ದುರಂತ
ಇಂಗ್ಲೆಂಡಿನ ಮ್ಯಾಂಚೆಸ್ಟರ್ ಅರೇನಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಅಳಿದುಳಿದಿರುವವವರ ಸೇವೆಯಲ್ಲಿ ತೊಡಗಿರುವ ಸ್ವಯಂಸೇವಕರು. ಭಾರತೀಯ ಕಾಲಮಾನದಂತೆ ಇಂದು (ಮೇ 23) ಬೆಳಗ್ಗೆ 3:03 ಕ್ಕೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 19 ಜನ ಅಸುನೀಗಿದ್ದರು.

ಪ್ರಿಯಾಂಕಾ ಚೋಪ್ರಾ
ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್ ಅಂಗಳದಲ್ಲೂ ಪ್ರಸಿದ್ಧಿ ಪಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಬೇವಾಚ್ ಎಂಬ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಿರುವ ಪ್ರಿಯಾಂಕ ಚೋಪ್ರಾ ಆ ಚಿತ್ರದ ದೃಶ್ಯವೊಂದರಲ್ಲಿ ಕಂಡುಬಂದಿದ್ದು ಹೀಗೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications