ಬೆಂಗಳೂರಿನಿಂದ ಶಬರಿಮಲೆಗೆ ರಾಜಹಂಸ ಬಸ್ ಸಂಚಾರ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಶಬರಿಮಲೆ ಯಾತ್ರೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ರಾಜಹಂಸ ಬಸ್ ಗಳ ಸಂಚಾರವನ್ನು ಆರಂಭಿಸಲಾಗುತ್ತಿದೆ.
ಬೆಂಗಳೂರು, ನವೆಂಬರ್ 20: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಶಬರಿಮಲೆ ಯಾತ್ರೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ರಾಜಹಂಸ ಬಸ್ ಗಳ ಸಂಚಾರವನ್ನು ಆರಂಭಿಸಲಾಗುತ್ತಿದೆ.
ಡಿಸೆಂಬರ್ 9ರಿಂದ ಈ ಹೊಸ ಸೇವೆ ಆರಂಭಗೊಳ್ಳಲಿದೆ. ಬೆಂಗಳೂರು-ಪಂಪಾ(ಶಬರಿಮಲೈ) ಮಾರ್ಗದಲ್ಲಿ ರಾಜಹಂಸ ಸಂಚಾರ ಮಾಡಲಿದೆ. ಪ್ರಯಾಣ ದರ ವಯಸ್ಕರಿಗೆ 825 ರೂ. ನಿಗದಿ ಮಾಡಲಾಗಿದೆ. ಹಬ್ಬದ ಸೀಸನ್ ನಲ್ಲಿ ಖಾಸಗಿ ಬಸ್ ದರ 2,000 ರು ತನಕ ಏರಿಕೆಯಾಗುತ್ತದೆ.[ಶಬರಿಮಲೈ ದರ್ಶನಕ್ಕೆ ಮಹಿಳೆಯರಿಗೆ ಕೇರಳ ಸರ್ಕಾರ ಅನುಮತಿ]
ಬೆಂಗಳೂರನ್ನು 1.30 PM ಗೆ ಬಿಡುವ ಬಸ್ ಮರುದಿನ ಪಂಪಾಗೆ 8.45 AM ಗೆ ಸೇರಲಿದೆ. ಪಂಪಾದಿಂಡ 5 PMಗೆ ಬಿಡುವ ಬಸ್ ಮರುದಿನ ಮಧ್ಯಾಹ್ನ ಬೆಂಗಳೂರು ಸೇರಲಿದೆ. ಈ ರಾಜಹಂಸ ಬಸ್ ಗೆ ಮುಂಗಡ ಬುಕ್ಕಿಂಗ್ ಹಲವಾರು ಕೌಂಟರ್ ಗಳಲ್ಲಿ ಲಭ್ಯವಿದೆ.[ಶಬರಿಮಲೆ ಯಾತ್ರೆ ಆರಂಭ, ಕರ್ನಾಟಕದ ಭಕ್ತರಿಗೆ ನೆರವು]
ಹೆಚ್ಚಿನ
ಮಾಹಿತಿಯನ್ನು
ಕೆಎಸ್ಸಾರ್ಟಿಸಿ
ವೆಬ್
ಸೈಟ್
ನಲ್ಲಿ
ಪಡೆಯಬಹುದು.
ಬೆಂಗಳೂರಿನಿಂದ
ಕೇರಳಕ್ಕೆ
ರೈಲು
ಮಾರ್ಗ:
ಯಶವಂತಪುರ
ಗರೀಬ್
ರಥ
(12257/12258)
ಏರಿ
ಹೋಗಬಹುದು.
(ಒನ್ಇಂಡಿಯಾ
ಸುದ್ದಿ)