ಪ್ರತಿಭಾವಂತ ವಿದ್ಯಾರ್ಥಿನಿಯ ರಕ್ತ ಹೀರುತ್ತಿರುವ ಕ್ಯಾನ್ಸರ್
ಕೋಲ್ಕತ್ತಾ, ಜು. 15: ಆಕೆಯ ಕಣ್ಣುಗಳಲ್ಲಿ ಕನಸಿತ್ತು, ಸಾಧನೆ ಮಾಡಬೇಕೆಂಬ ಛಲವಿತ್ತು, ಮಧ್ಯಮ ವರ್ಗದಪ್ರತಿಭಾವಂತ ವಿದ್ಯಾರ್ಥಿನಿಗೆ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಎಲ್ಲ ಸಾಮರ್ಥ್ಯವಿತ್ತು.
ಆದರೆ ಅದೊಂದು ಘಟನೆ ಅವಳ ಎಲ್ಲ ಕನಸುಗಳನ್ನು ಪುಡಿಪುಡಿ ಮಾಡಿತು. ಕೆಮಿಸ್ಟ್ರಿ ಪರೀಕ್ಷೆ ಬರೆಯುತ್ತಿದ್ದ ಆಕೆಯ ಕಾಲುಗಳಲ್ಲಿ ಇದ್ದಕ್ಕಿದ್ದಂತೆ ಯಮಯಾತನೆ ಆರಂಭವಾಗಿತ್ತು. ಪರೀಕ್ಷೆಯನ್ನು ಬರೆಯಲು ಸಾಧ್ಯವಾಗದೇ ಆಕೆ ಕೊಠಡಿಯಿಂದ ಹೊರಬಂದಿದ್ದಳು.[ಪುಟಾಣಿ ಚಂದನ್ ಹೋರಾಟಕ್ಕೆ ಅಂತ್ಯ ಹಾಡಿದ ಕ್ಯಾನ್ಸರ್]

ಆಸ್ಪತ್ರೆಗೆ ತೆರಳಿ ಎಲ್ಲ ಪರೀಕ್ಷೆಗಳನ್ನು ಮಾಡಿದ ನಂತರ ಗೊತ್ತಾದ ಆಘಾತಕಾರಿ ಸಂಗತಿ ಆಕೆಯ ಜೀವನವನ್ನು ಮತ್ತೊಂದು ಹೋರಾಟಕ್ಕೆ ಸಿಕ್ಕಿಸಿತ್ತು. ಟಾಟಾ ಮೆಡಿಕಲ್ ಸೆಂಟರ್ ನ ವೈದ್ಯರು ಆಕೆಗೆ ರಕ್ತದ ಕಾನ್ಸರ್(Barcids Lyphoma) ಎಂದು ವರದಿ ನೀಡಿದ್ದರು.
ಮೂವರು ಮಕ್ಕಳಲ್ಲಿ ಶೊಹೆಲಿ ಚಕ್ರವರ್ತಿ ಕಿರಿಯಳು. ತಂದೆ ಸಾರಿಗೆ ಇಲಾಖೆಯಲ್ಲಿ ದಿನಗೂಲಿ ನೌಕರ. ಚಿಕ್ಕಂದಿನಿಂದಲೇ ಓದಿನಲ್ಲಿ ಮುಂದಿದ್ದ ಶೊಹೆಲಿ ಈ ಬಾರಿ ಇಂಜಿನಿಯರಿಂಗ್ ಪ್ರವೇಶ ಪಡೆಯಬೇಕು ಎಂದು ಬಯಸಿದ್ದಳು. ಆದರೆ ಕಾನ್ಸರ್ ಎಂಬ ಮಾರಿ ಅವಳನ್ನು ಬರಸೆಳೆದು ಅಪ್ಪಿಕೊಂಡಿತ್ತು.[ಇಂಥ ಕನ್ನಡಿಗ ಇನ್ನಿಲ್ಲ ಎಂದರೆ ನಂಬುವುದಕ್ಕಾಗಲ್ಲ]
ಮುಗಿಯದ ಪ್ರಯಾಣ
ಸೋಹೆಲಿಯನ್ನು ಕೆಮೋಥೆರಫಿ ಮೂಲಕ ಬದುಕಿಸಲು ಸಾಧ್ಯವಿದೆ. ರಕ್ತ ಬದಲಾವಣೆ ಪ್ರಕ್ರಿಯೆಯನ್ನು ನಿರಂತರವಾಗಿ ಮಾಡಬೇಕು. ಆದರೆ ಇದಕ್ಕೆ 12 ಲಕ್ಷ ರು. ಗೂ ಅಧಿಕ ವೆಚ್ಚ ತಗುಲಲಿದ್ದು ಕುಟುಂಬ ಪ್ರೀತಿಯ ಮಗಳನ್ನು ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದೆ. ಆಕೆಯದ್ದು "ಓ" ನೆಗೆಟಿವ್ ರಕ್ತದ ಗುಂಪು ಆಗಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲವಾಗಿದೆ. ಆಕೆಯ ಕುಟುಂಬ ಮತ್ತು ಬಂಧುಬಳಗದವರು ತಮ್ಮ ಕೈಯಲ್ಲಾದ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಪ್ರಾರ್ಥನೆ ಸಾಕಾಗುತ್ತಿಲ್ಲ.
ಶೊಹೆಲಿ ತಂದೆ ತಪನ್ ಚಕ್ರವರ್ತಿ ಅವರಿಗೆ ಮಗಳ ಚಿಕಿತ್ಸೆಗೆ ಹಣ ಎಲ್ಲಿಂದ ತರಬೇಕು ಎಂಬ ದಾರಿಗಳು ತಿಳಿಯುತ್ತಿಲ್ಲ. ಸ್ಥಳೀಯ ಸ್ಪೋರ್ಟ್ಸ್ ಕ್ಲಬ್ ಮತ್ತು ಶೊಹೆಲಿ ಶಾಲೆ ಸಹ ಸಹಾಯ ಮಾಡಿದೆ. ಕ್ಲಬ್ ಸದಸ್ಯ ಸಜಲ್ ಚಂದಾ ಹೇಳುವಂತೆ ಬೇಕಾಗಿರುವ ಹಣಕ್ಕೆ ಹೋಲಿಕೆ ಮಾಡಿದರೆ ಇದು ಏನಕ್ಕೂ ಸಾಕಾಗುವುದಿಲ್ಲ ಎಂದು ತಿಳಿಸಿದ್ದಾರೆ.[ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಪ್ರಕರಣ]
ಕಳೆದ ಮೂರು ತಿಂಗಳಿನಿಂದ ಬಾಲಕಿ ಯಮಯಾತನೆ ಅನುಭವಿಸುತ್ತಿದ್ದಾಳೆ. ಆಕೆಯ ನೆರವಿಗೆ ಸ್ಪಂದಿಸಲು ಮತ್ತು ರಕ್ತ ದಾನ ಮಾಡಲು 9535613441 ಕ್ಕೆ ಕರೆ ಮಾಡಬಹುದು.
ನೇರವಾಗಿ ಧನ ಸಹಾಯ ಮಾಡುವರಿದ್ದರೆ
* ಖಾತೆ ಸಂಖ್ಯೆ: 0163010445894
* ಐಎಫ್ ಎಸ್ ಸಿ ಕೋಡ್ : UTBI0UTT221
* ಮೊಬೈಲ್ ಸಂಖ್ಯೆ: 9433328681
ಬಾಲಕಿಯ ಜೀವ ಉಳಿಸಲು ನೆರವಾಗಿ ಮತ್ತು ಸಂಗತಿಯನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?












Click it and Unblock the Notifications