ಕಣ್ಣೂರು : ಆರೆಸ್ಸೆಸ್- ಬಿಜೆಪಿ ಕಾರ್ಯಕರ್ತ ಬಿಜು ಭೀಕರವಾಗಿ ಹತ್ಯೆ
ಕೇರಳದ ಕಣ್ಣೂರಿನಲ್ಲಿ ರಾಜಕೀಯ ದ್ವೇಷಕ್ಕೆ ಮತ್ತೊಮ್ಮೆ ನೆತ್ತರು ಹರಿದಿದೆ. ಸಿಪಿಐ(ಎಂ) ಕಾರ್ಯಕರ್ತ ಧನರಾಜ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಆರೆಸ್ಸೆಸ್ -ಬಿಜೆಪಿ ಕಾರ್ಯಕರ್ತ ಚೂರಕ್ಕತ್ತು ಬಿಜು ಅವರನ್ನು ಕಣ್ಣೂರಿನ ಪಯಣ್ಣೂರು ಬಳಿ ಶುಕ್ರವಾರದ
ಕಣ್ಣೂರು, ಮೇ 12 : ಕೇರಳದ ಕಣ್ಣೂರಿನಲ್ಲಿ ರಾಜಕೀಯ ದ್ವೇಷಕ್ಕೆ ಮತ್ತೊಮ್ಮೆ ನೆತ್ತರು ಹರಿದಿದೆ. ಸಿಪಿಐ(ಎಂ) ಕಾರ್ಯಕರ್ತ ಧನರಾಜ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಆರೆಸ್ಸೆಸ್ -ಬಿಜೆಪಿ ಕಾರ್ಯಕರ್ತ ಚೂರಕ್ಕತ್ತು ಬಿಜು ಅವರನ್ನು ಕಣ್ಣೂರಿನ ಪಯಣ್ಣೂರು ಬಳಿ ಶುಕ್ರವಾರದಂದು ಭೀಕರವಾಗಿ ಹತ್ಯೆಗೈಯಲಾಗಿದೆ.
ಕಕ್ಕಂಪರ ಮಂಡಲದ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಬಿಜು ಅವರು ಧನರಾಜ್ ಕೊಲೆ ಕೇಸಿನಲ್ಲಿ 12ನೇ ಆರೋಪಿಯಾಗಿದ್ದಾರೆ. ಧನರಾಜ್ ಅವರನ್ನು ಜುಲೈ 2016ರಲ್ಲಿ ಅವರ ಮನೆಯಲ್ಲೇ ಹತ್ಯೆ ಮಾಡಲಾಗಿತ್ತು.

ತಕ್ಷಣವೇ ನಾಲ್ವರು ಆರೆಸ್ಸೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಸಿಪಿಐಎಂ ಹಾಗೂ ಬಿಜೆಪಿ ನಡುವಿನ ರಾಜಕೀಯ ದ್ವೇಷಕ್ಕೆ 12ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.












Click it and Unblock the Notifications