ಕೇರಳದಲ್ಲಿ 12 ಉಗ್ರರಿದ್ದಾರೆ: interpol ಘೋಷಣೆ

ಆತಂಕಕಾರಿ ವಿಷಯವೆಂದರೆ ಇಂಟರ್ ಪೋಲ್ ಸಂಸ್ಥೆಗೆ ಅತ್ಯಗತ್ಯವಿರುವ 12 ಭಯೋತ್ಪಾದಕರು ಕೇರಳದಲ್ಲಿದ್ದಾರಾದರೂ ಅವರ ಅಡಗುದಾಣ ಯಾವುದು ಎಂಬುದು ಪತ್ತೆಯಾಗಿಲ್ಲ. ಆದರೆ ಇವರೆಲ್ಲ ಎರ್ನಾಕುಲಂ ಮೂಲಸ್ಥರು.
ಸಿಬಿಐ ಪ್ರಕಾರ 19 ಮಂದಿ ಉಗ್ರರು ಕೇರಳದಲ್ಲಿದ್ದಾರೆ. ಇವರ ವಿರುದ್ಧ Interpol red corner ಸಹ ಜಾರಿಗೊಳಿಸಲಾಗಿದೆ. ಆದರೆ ಅವರು ಯಾರೂ ಇದುವರೆಗೂ ಪತ್ತೆಯಾಗಿಲ್ಲ.
{ಭಯೋತ್ಪಾದನೆ ಚಟುವಟಿಕೆಗೆ ಕೇರಳ ಹೆಚ್ಚು ಪ್ರಶಸ್ತ: ಭಟ್ಕಳ}
ಆದರೆ ಭಯೋತ್ಪಾದನೆ ಚಟುವಟಿಕೆ ನಡೆಸಿದ ಆರೋಪದ ಮೇಲೆ ಇಂಟರ್ ಪೋಲ್ ಸಂಸ್ಥೆ ಪ್ರಕಟಿಸಿರುವ 12 ಮಂದಿ ಭಯೋತ್ಪಾದಕರ ಪಟ್ಟಿಯಲ್ಲಿ ಅವರ ಭಾವಚಿತ್ರಗಳೇ ಇಲ್ಲ. ಅಥವಾ ವೈಯಕ್ತಿಕ ವಿವರಗಳೂ ಇಲ್ಲ. ಸ್ಥಳೀಯ ಪೊಲೀಸರು ಮತ್ತು ವಿಶೇಷ ತನಿಖಾ ದಳಗಳು ನೀಡಿರುವ ವಿವರಗಳಷ್ಟೇ ದಾಖಲಾಗಿವೆ. ಈ ಭಯೋತ್ಪಾದಕರ ಜನ್ಮಸ್ಥಳ ಮತ್ತು ಅವರು ಭಾಗಿಯಾಗಿರುವ ಭಯೋತ್ಪಾದಕ ಚಟುವಟಿಕೆಗಳ ವಿವರವಷ್ಟೇ ನಮೂದಾಗಿವೆ.
ಆತಂಕದ ವಿಷಯವೆಂದರೆ ಈ ಉಗ್ರರು ದೇಶದಲ್ಲಿ ಇನ್ನೂ ಚಲಾವಣೆಯಲ್ಲಿದ್ದು, ಭಯೋತ್ಪಾದಕ ಚಟುವಟಿಕೆಗಳಿಗೆ ಹೊಂಚುಹಾಕುತ್ತಿದ್ದಾರೆ ಎಂದು ಸಿಬಿಐ ಮೂಲಗಳು ಹೇಳಿವೆ. [ದಕ್ಷಿಣ ಭಾರತದ ಮೇಲೆ ಉಗ್ರರ ಕಣ್ಣು ಬಿದ್ದಿದೆ]
Interpol red corner ಪಟ್ಟಿಯಲ್ಲಿರುವ ಪ್ರಮುಖ ಉಗ್ರರು:
ಚೆನ್ನಪರಾಂಬಿಲ್ ಮೊಹಮದ್ ಬಷೀರ್, ಅಳುವಾ, ಕದಪ್ಪುರಂ ಶಿಹಾಬ್, ಕಾಸರಗೋಡ್, ಕರೀಂಬೇರಿಪಾಡಿ ನಜೀಬ್, ಎರ್ನಾಕುಲಂ, ಕೋಚುಪೀಡಿಕಯೀಲ್ ಸಬೀರ್, ಮರಕ್ಕರಕಂಡಿ, ಕಣ್ಣೂರು, ಕೊಟ್ಟಾ ಅಬ್ದುಲ್ ಸಬೂರ್, ಮರಂಗಟ್ಟು ನಸಾರ್, ಎರ್ನಾಕುಲಂ ಮೊಹಮದ್ ಅಷಾರ್, ಕೊಳವಲ್ಲೂರು, ತಲಷೇರಿ, ಮುದಸ್ಸೇರಿ ಸವಾದ್, ಪಿಪಿ ಯೂಸುಫ್, ಕೊಯ್ಯಂ, ತಲಿಪರಂಬ, ಪೊಟ್ಟಿಂಕಲ್ ಸುಹೇಬ್, ಪತಿಯನ್ನು ಕೊಂದ ತಮಿಳುನಾಡಿನ ಡಾ. ಎದಾದನ್ ಒಮಾನಾ ಇನ್ನೂ ಮುಂತಾದವರು.
{ ಚಿತ್ತೂರು ಉಗ್ರರು ಬೆಂಗಳೂರಿಗೆ; ಜತೆಗೆ ಭಟ್ಕಳನೂ }
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications