Kargil Vijay Diwas: ಯೋಧ ಹುತಾತ್ಮರ ತ್ಯಾಗ ಸ್ಮರಣಾರ್ಥ ಮಿಲಿಟರಿ ವಿದ್ಯಾರ್ಥಿಗಳ ಬೈಕ್ ರೈಡ್
ಬೆಂಗಳೂರು, ಜುಲೈ 26: ಭಾರತವು ಕಾರ್ಗಿಲ್ ಯುದ್ಧದ 25 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿಯ (IMA) 101 ನಿಯಮಿತ ಕೋರ್ಸ್ನ ಎಲ್ಲಾ ಹಳೆಯ ವಿದ್ಯಾರ್ಥಿಗಳ ಪೈಕಿ 12 ಮೋಟಾರ್ಸೈಕಲ್ ಸವಾರರ ಗುಂಪು ಕಾರ್ಗಿಲ್ ವಿಜಯ ನೆನಪಿಸಿಕೊಡಲಿದೆ. ಈ ಸಂಬಂಧ 1999 ರಲ್ಲಿ ನಡೆದಿದ್ದ ಇಂಡೋಪಾಕ್ ನಡುವಿನ ಸಂಘರ್ಷದ ಹಾದಿ, ವಿಜಯದ ಭಾವನಾತ್ಮಕ ಬೈಕ್ ಯಾತ್ರೆ ಆರಂಭಿಸಿದೆ.
ಯುದ್ಧದ ವೇಳೆ ಭಾರತೀಯ ಸೇನೆಯು ಪಾಕಿಸ್ತಾನಿ ಒಳನುಗ್ಗುವವರನ್ನು ಹೊಡೆದೋಡಿಸಿತು.ಮತ್ತು ಕಾಶ್ಮೀರ ಪ್ರದೇಶದಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಆಪರೇಷನ್ ವಿಜಯ್ನಲ್ಲಿ ಟೈಗರ್ ಹಿಲ್ ಮತ್ತು ಇತರ ಪೋಸ್ಟ್ಗಳನ್ನು ಪುನಃ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ವಿಜಯವನ್ನು ಭಾರತೀಯ ಸೈನಿಕರು ಮೂರು ತಿಂಗಳ ಯುದ್ಧದ ನಂತರ ಸಾಧಿಸಿದರು, ಇದರಿಂದಾಗಿ ಅಂದು ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸಿದವು.

ಕಾರ್ಗಿಲ್ಗೆ 25 ವರ್ಷ ಸಂಭ್ರಮ
ಪ್ರತಿ ವರ್ಷದಂತೆ ಈ ವರ್ಷವು ಜುಲೈ 26 ರಂದು ಭಾರತವು ಕಾರ್ಗಿಲ್ ವಿಜಯ ದಿವಸ ಆಚರಿಸುತ್ತಿದೆ. ಇದರ ಸ್ಮರಣಾರ್ಥ 1997 ರಲ್ಲಿ ಪದವಿ ಪಡೆದ ವಿದ್ಯಾರ್ಥಿಗಳ ಗುಂಪಿ ಬೈಕ್ ಸವಾರಿಯನ್ನು ಚಂಡೀಗಢದಲ್ಲಿ ಆರಂಭಿಸಿದ್ದಾರೆ. ಅವರು ಬೈಕ್ ರ್ಯಾಲಿಯು ಕಾರ್ಗಿಲ್ನ ಕಡಿದಾದ ಭೂಪ್ರದೇಶ ಹಾದು ಹೋಗಲಿದೆ. ದೇಶಕ್ಕಾಗಿ ಹೋರಾಡಿ ಮಡಿದ ಯೋಧ ಹುತಾತ್ಮದರ ತ್ಯಾಗ, ಬಲಿದಾನ ಸ್ಮರಿಸಲಿದ್ದಾರೆ.
ಈ ಬೈಕ್ ಯಾತ್ರೆ ಮೂಲಕ ಲೆಜೆಂಡರಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಸೇರಿದಂತೆ ಮಡಿದ ಅನೇಕ ಜೀವಗಳಿಗೆ ಮನದಾಳದಿಂದ ಗೌರವ ಸಲ್ಲಿಸಲಾಗುತ್ತಿದೆ. ಕ್ಯಾಪ್ಟನ್ ಬಾತ್ರಾ ಅವರು ಶತ್ರು ಸ್ಥಾನಗಳಿಂದ ಪಾಯಿಂಟ್ 5140 ಅನ್ನು ಪುನಃ ವಶಪಡಿಸಿಕೊಳ್ಳಲು ಧೈರ್ಯಶಾಲಿ ಆಕ್ರಮಣ ತೋರಿದ ವೇಳೆ, ಗಾಯಗೊಂಡ ಅಧಿಕಾರಿ ರಕ್ಷಿಸುವಾಗ ಮಡಿದರು.
ಈ ಮಾಜಿ ಸೈನಿಕರು ಓಡಿದ ಪ್ರತಿಯೊಂದು ಮೈಲುಗಳು ಭಾರತದ ಸಶಸ್ತ್ರ ಪಡೆಗಳ ಧೈರ್ಯ ಮತ್ತು ತ್ಯಾಗಕ್ಕೆ ಸಾಕ್ಷಿಯಾಗಿದೆ. ಅವರ ಧ್ಯೇಯವು ಕಾರ್ಗಿಲ್ ಯುದ್ಧದ ವೀರರನ್ನು ಗೌರವಿಸುವುದು ಮಾತ್ರವಲ್ಲದೆ ದೇಶದ ಸಾರ್ವಭೌಮತ್ವವನ್ನು ಕಾಪಾಡಲು ತಮ್ಮ ಮನೆಗಳ ಸೌಕರ್ಯವನ್ನು ಬಿಟ್ಟು ಸೈನಿಕರು ಮಾಡಿದ ನಿಸ್ವಾರ್ಥ ತ್ಯಾಗವನ್ನು ನೆನಪಿಸುತ್ತದೆ.

ಅಕಾಡೆಮಿಯ ವಿದ್ಯಾರ್ಥಿಗಳು ಗೌರವವು ರಾಷ್ಟ್ರದ ಸಮಗ್ರತೆಯನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರಿಗೆ ಹೆಮ್ಮೆ ಮತ್ತು ಕೃತಜ್ಞತೆಯಿಂದ ಅರ್ಪಿಸುತ್ತದೆ. ಕಾರ್ಗಿಲ್ನಲ್ಲಿ ಮಡಿದ ತ್ಯಾಗ, ಬಲಿದಾನ, ಮಹತ್ಕಾರ್ಯಗಳು ದೇಶದಲ್ಲಿ ಅಜರಾಮರವಾಗಿರುತ್ತವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications