IN PICS: ಕಾನ್ಪುರ ರೈಲು ದುರಂತದ ಮನಸ್ಸು ಕಲಕುವ ಚಿತ್ರ..
ಸಾವು..ಸಾವು...ಸಾವು
-ಉತ್ತರ ಪ್ರದೇಶದ ಕಾನ್ಪುರ ಪುಕ್ರಾಯನ್ ಬಳಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ಹೀಗೆ ಹೇಳಬಹುದು. ಭಾನುವಾರ ಪಾಟ್ನಾ-ಇಂದೋರ್ ಎಕ್ಸ್ ಪ್ರೆಸ್ ಹಳಿ ತಪ್ಪಿ, ಕನಿಷ್ಠ ನೂರಾ ನಲವತ್ತೆರಡು ಮಂದಿ ಉಸಿರು ಕಳೆದುಕೊಂಡರು. ಅಲ್ಲಿನ ಸಾವು-ನೋವು, ಗಾಯಾಳುಗಳು.. ಅಬ್ಬಾ ಮೈ ನಡುಗಿಸುವಂಥ ದುರಂತವದು.
ಇನ್ನೂರು ಗಾಯಾಳುಗಳು ಇದ್ದಾರೆ ಎಂಬ ಮಾಹಿತಿಯಿದೆ. ಎಸ್ 3 ಮತ್ತು ಎಸ್ 4 ಬೋಗಿಗಳನ್ನು ತೆಗೆದು ಬಿಸಾಡಿದ ಹಾಗೆ ಬಿದ್ದಿದೆ. ಇನ್ನು ಏಸಿ ಕೋಚ್ ಗಳಿಗೂ ಭಾರೀ ಹಾನಿಯಾಗಿದೆ. ದುರಂತಕ್ಕೆ ಕಾರಣ ಗೊತ್ತಾಗಿಲ್ಲ. ಈ ಅವಘಡಕ್ಕೆ ಕೇವಲ ಒಂಬತ್ತು ನಿಮಿಷದ ಮುಂಚೆ ಸಬರಮತಿ ಎಕ್ಸ್ ಪ್ರೆಸ್ ಇದೇ ಹಳಿ ಮೇಲೆ ಹಾದುಹೋಗಿದೆ.[ಕಳೆದ ಮೂರು ವರ್ಷಗಳಲ್ಲಿ ನಡೆದ ಭೀಕರ ರೈಲು ದುರಂತಗಳು]
ಆದರೆ, ಆ ವೇಳೆ ಯಾವುದೇ ಅನುಮಾನ ಬರುವಂಥ ಸ್ಥಿತಿ ಇರಲಿಲ್ಲ ಎಂದು ಸಬರಮತಿ ಎಕ್ಸ್ ಪ್ರೆಸ್ ರೈಲ್ವೆ ಎಂಜಿನ್ ನ ಡ್ರೈವರ್ ತಿಳಿಸಿದ್ದಾರೆ. ಅಪಘಾತದಲ್ಲಿ ತೀರಿಕೊಂಡವರು ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಹಾಗೂ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದವರು ಇದ್ದಾರೆ.
ಮದುವೆ ಗೊತ್ತಾಗಿದ್ದ ಹೆಣ್ಣುಮಗಳೊಬ್ಬಳು ಇದೇ ರೈಲಿನಲ್ಲಿ ಹೊರಟಿದ್ದಳು. ಸಂಭ್ರಮವನ್ನು, ಭವಿಷ್ಯದ ಕನಸನ್ನು ಹೊತ್ತಿದ್ದವಳಿಗೆ ತಂದೆಯನ್ನು ಕಳೆದುಕೊಂಡ ದುಃಖ ಜೊತೆಯಾಗಿದೆ. ಎಷ್ಟು ಕುಟುಂಬಗಳು, ಎಷ್ಟು ಥರದ ದುಃಖ? ಅಲ್ಲಿನ ದುರಂತದ ಚಿತ್ರಗಳು ಇಲ್ಲಿವೆ. ಮನಸ್ಸು ಗಟ್ಟಿ ಮಾಡಿಕೊಂಡು ನೋಡಿ.[ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 100ಕ್ಕೆ ಏರಿಕೆ]

ದುರಂತ ಚಿತ್ರಣ
ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ದುರಂತದ ನಂತರ ಕಾನ್ಪುರದ ದೆಹತ್ ಬಳಿ ಪರಿಹಾರ ಕಾರ್ಯ ಕೈಗೊಂಡ ವೇಳೆ ಅವಘಡದ ಪ್ರಮಾಣ ಸೂಚಿಸುವಂಥ ಚಿತ್ರವಿದು.

ಪ್ರಯಾಣಿಕರ ರಕ್ಷಣೆ
ಕಾನ್ಪುರ ರೈಲು ದುರಂತದ ನಂತರ ಬೋಗಿಯಲ್ಲಿ ಸಿಕ್ಕಿಬಿದ್ದಿದ್ದ ಪ್ರಯಾಣಿಕರೊಬ್ಬರ ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದ ದೃಶ್ಯ.

ಸಿಬ್ಬಂದಿ ಸಹಾಯ
ರೈಲು ದುರಂತದ ಗಾಯಾಳುಗಳ ತುರ್ತು ರಕ್ಷಣೆಯಲ್ಲಿ ಎನ್ ಡಿಆರ್ ಎಫ್ ಸಿಬ್ಬಂದಿ ಕಂಡುಬಂದಿದ್ದು ಹೀಗೆ.

ಕಣ್ಣೀರ ಕ್ಷಣ
ರೈಲು ಅಪಘಾತದಲ್ಲಿ ಸಾವಿಗೀಡಾದ ವ್ಯಕ್ತಿಯ ಸಂಬಂಧಿಕರೊಬ್ಬರು ಕಣ್ಣೀರಾದ ಕ್ಷಣ.

ಯಾರಾದರೂ ಇದ್ದೀರಾ
ಅಪಘಾತದ ರಕ್ಷಣಾ ಕಾರ್ಯಾಚರಣೆ ವೇಳೆ ರೈಲು ಕೋಚ್ ನ ಒಳಗೆ ಯಾರಾದರೂ ಸಿಕ್ಕಿಕೊಂಡಿದ್ದಾರಾ ಎಂದು ಗಮನಿಸುತ್ತಿರುವ ಪೊಲೀಸ್ ಸಿಬ್ಬಂದಿ.

ಆಟಿಕೆಯಂತಾದ ರೈಲು
ಮಕ್ಕಳು ಅಡಿ ಕಿತ್ತು ಬಿಸಾಡಿದಂತೆ ಕಾಣುತ್ತಿರುವ ಈ ದೃಶ್ಯದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ ಸಿಬ್ಬಂದಿ ಅದೆಷ್ಟು ಮಂದಿ ಇದ್ದರೋ ಎಂದು ಕುತೂಹಲ ಹುಟ್ಟುತ್ತದೆ.

ತಂದೆ ಕಳೆದುಕೊಂಡ ದುಃಖದಲ್ಲಿ ಮದುವೆ ಹೆಣ್ಣು
ಈ ಹೆಣ್ಣುಮಗಳ ಮದುವೆ ನಿಶ್ಚಯವಾಗಿತ್ತು. ಅ ಸಂಭ್ರಮದಲ್ಲೇ ಪಾಟ್ನಾ-ಇಂದೋರ್ ಎಕ್ಸ್ ಪ್ರೆಸ್ ರೈಲು ಹತ್ತಿದ್ದಳು. ಅದರೆ ದುರಂತದಲ್ಲಿ ತನ್ನ ತಂದೆಯನ್ನು ಕಳೆದುಕೊಂಡು ನಿಸ್ಸಹಾಯಕಳಾಗಿ ನಿಂತಿದ್ದ ಹೆಣ್ಣುಮಗಳನ್ನು ಕಂಡು ಕರುಳು ಚುರ್ ಎನ್ನುವಂತಿತ್ತು.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications