ಭೀಕರ ಬಿಸಿಲು : ಇತರ ನಗರಗಳೊಂದಿಗೆ ಕಲಬುರಗಿ ಪೈಪೋಟಿ
ಬೆಂಗಳೂರು, ಏಪ್ರಿಲ್ 15 : ಬರಗಾಲಕ್ಕೆ ಸಂಬಂಧಿಸಿದಂತೆ ದೇಶದ ಹಲವಾರು ರಾಜ್ಯಗಳೊಂದಿಗೆ ಪೈಪೋಟಿಗೆ ಬಿದ್ದಿರುವ ಕರ್ನಾಟಕ, ಈ ವರ್ಷ ಬಿಸಿಲಿಗೆ ಸಂಬಂಧಿಸಿದಂತೆಯೂ ಇತರ ರಾಜ್ಯಗಳೊಂದಿಗೆ ಜಿದ್ದಿಗೆ ಬಿದ್ದಿದೆ.
ಬಿಸಿಲೇರುತ್ತಿದ್ದಂತೆ ಕರ್ನಾಟಕದ ಕೆಲ ಊರುಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿ ಸಮಾಧಾನ ತಂದಿದ್ದರೂ, ನಿಗಿನಿಗಿ ಕೆಂಡದಂತಾಗಿರುವ ಕಲಬುರ್ಗಿ ನಗರ ಕಳೆದ ಹಲವಾರು ದಿನಗಳಿಂದ ತನ್ನ ಅಗ್ರಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಕಲಬುರಗಿಯಲ್ಲಿ ಅತ್ಯಧಿಕ ತಾಪಮಾನ 42.1 ಡಿಗ್ರಿ ದಾಖಲಾಗಿದೆ.

ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 2 ಸೆಂ.ಮೀ. ಮತ್ತು ನಾಪೋಕ್ಲುವಿನಲ್ಲಿ 1 ಸೆಂ.ಮೀ. ಮಳೆಯಾಗಿದ್ದು ಬಿಟ್ಟರೆ, ರಾಜ್ಯದ ಉಳಿದ ಭಾಗಗಳು ಬಾಯಾರಿ ನಿಂತಿವೆ. ಇನ್ನು ಮುಂದಿನ ಐದು ದಿನಗಳಲ್ಲಿ ರಾಜ್ಯದಲ್ಲಿ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ತಿಳಿಸಿದೆ.
ಈ ನಡುವೆ ಸ್ಕೈಮೆಟ್ ವೆದರ್ ವೆಬ್ ಸೈಟ್ ದೇಶದಲ್ಲಿ ಅತಿಹೆಚ್ಚು ತಾಪಮಾನ ದಾಖಲಿಸಿರುವ 10 ಊರು ಮತ್ತು ರಾಜ್ಯಗಳ ಪಟ್ಟಿಯನ್ನು ರೆಡಿ ಮಾಡಿದೆ. ಕರ್ನಾಟಕ ಸ್ವಲ್ಪದರಲ್ಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.
ಆ ಊರು, ರಾಜ್ಯ ಮತ್ತು ಅಲ್ಲಿ ದಾಖಲಾಗಿರುವ ತಾಪಮಾನ ಕೆಳಗಿನಂತಿವೆ.
| ಊರು | ರಾಜ್ಯ | ತಾಪಮಾನ |
| ಫಲೋಡಿ | ರಾಜಸ್ಥಾನ | 46 |
| ಚಂದ್ರಾಪುರ | ಮಹಾರಾಷ್ಟ್ರ | 45.8 |
| ಜೈಸಲ್ಮೇರ್ | ರಾಜಸ್ಥಾನ | 45.6 |
| ಕಾಂಡ್ಲಾ | ಗುಜರಾತ್ | 45.4 |
| ಬರ್ಮರ್ | ರಾಜಸ್ಥಾನ | 45.4 |
| ಸುರೇಂದ್ರನಗರ | ಗುಜರಾತ್ | 45.3 |
| ಇದಾರ್ | ಗುಜರಾತ್ | 45 |
| ಬುಂಡಿ | ರಾಜಸ್ಥಾನ | 45 |
| ಬಿಕನೇರ್ | ರಾಜಸ್ಥಾನ | 44.5 |
| ನಾಗಪುರ | ಮಹಾರಾಷ್ಟ್ರ | 44.4 |
ಕೇರಳದಲ್ಲಿ ಮಳೆ : ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಸಂಭವಿಸಿರುವುದರಿಂದ ಕೇಳದ ಹಲವಾರು ಭಾಗಗಳಲ್ಲಿ ಮಳೆಯಾಗುತ್ತಿದೆ. ಮಳೆ ಕೇರಳದಲ್ಲಿಯೂ ಆಗುವ ಸಂಭವನೀಯತೆ ಇದೆ ಎಂದು ಸ್ಕೈಮೆಟ್ ವೆದರ್ ವರದಿ ಮಾಡಿದೆ.
-
Summer Super Drink: ಪ್ರತಿದಿನ ಎರಡು ಗ್ಲಾಸ್ ಕಬ್ಬಿನ ರಸ: ಬೇಸಿಗೆಯ ಸೂಪರ್ ಡ್ರಿಂಕ್ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications