ಭಾರತೀಯರ ಕ್ರಿಯೇಟಿವಿಟಿ ನೋಡಿ ದಂಗಾದ ಇವಾಂಕಾ ಟ್ರಂಪ್
ನವದೆಹಲಿ, ಮಾರ್ಚ್ 01: ಭಾರತೀಯರ ಟ್ಯಾಲೆಂಟ್ ಕಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಅವಾಕ್ಕಾಗಿದ್ದಾರೆ.
ಇತ್ತೇಚೆಗಷ್ಟೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ಪ್ರವಾಸಕ್ಕೆ ಭಾರತಕ್ಕೆ ಬಂದಿದ್ದರು. ಈ ಸಮಯದಲ್ಲಿ ಮಡದಿ ಮಲಾನಿಯಾ ಟ್ರಂಪ್ ಮತ್ತು ಮಗಳು ಇವಾಂಕಾ ಟ್ರಂಪ್ ಸಹ ಭಾರತಕ್ಕೆ ಬಂದಿದ್ದರು.
ಇವಾಂಕಾ ಟ್ರಂಪ್ ಅವರು ಭಾರತದ ಹೆಮ್ಮೆ ತಾಜ್ ಮಹಲ್ ಮುಂದೆ ಕೂತು ಚಿತ್ರ ತೆಗೆಸಿಕೊಂಡಿದ್ದರು. ಈ ಚಿತ್ರ ಕಾಲೆಳೆಯುವ ನೆಟ್ಟಿಗರಿಗೆ ಆಹಾರವಾಗಿತ್ತು. ಇವಾಂಕಾ ಟ್ರಂಪ್ ಚಿತ್ರವನ್ನು ಎಡಿಟ್ ಮಾಡಿ ಹಾಸ್ಯ ಮಾಡಿದ್ದರು.
ಆದರೆ ಇವನ್ನು ಇವಾಂಕಾ ಟ್ರಂಪ್ ಕ್ರೀಡಾಸ್ಪೂರ್ತಿಯೊಂದಿಗೆ ಎದುರುಗೊಂಡಿದ್ದು, ತಮ್ಮನ್ನು ಹಾಸ್ಯದ ವಸ್ತುವನ್ನಾಗಿಸಿದ ಟ್ವೀಟ್ಗಳನ್ನು ತಮ್ಮದೇ ಖಾತೆಯಿಂದ ಶೇರ್ ಮಾಡಿದ್ದಾರೆ.

ಖ್ಯಾತ ಹಾಡುಗಾರ, ನಟ ದಿಲ್ಜಿತ್ ದೋಸಂಜ್ ಅವರು ಇವಾಂಕಾ ಟ್ರಂಪ್ ಚಿತ್ರವನ್ನು ಎಡಿಟ್ ಮಾಡಿ ತಮ್ಮ ಚಿತ್ರವನ್ನು ಜೊತೆಗೆ ಹಾಕಿ, 'ತಾಜ್ ಮಹಲ್ ಗೆ ಕರೆದುಕೊಂಡು ಹೋಗು ಎಂದು ಹಠ ಮಾಡುತ್ತಿದ್ದಳು, ಅದಕ್ಕೆ ಕರೆತಂದೆ' ಎಂದು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇವಾಂಕಾ ಟ್ರಂಪ್, 'ನನ್ನನ್ನು ತಾಜ್ ಮಹಲ್ ಗೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು, ಅದೊಂದು ಮರೆಯಲಾಗದ ಅನುಭವ' ಎಂದು ಪ್ರತಿಕ್ರಿಯಿಸಿದ್ದರು.
ಅದಿತ್ಯಾ ಚೌಧರಿ ಎಂಬುವರು, ಇವಾಂಕಾ ಟ್ರಂಪ್ ರ ತಾಜ್ ಮಹಲ್ ಚಿತ್ರವನ್ನು ತಮಾಷೆಯಾಗಿ ಎಡಿಟ್ ಮಾಡಿದ ಇನ್ನೂ ಕೆಲವು ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದರು. ಇದನ್ನೂ ರೀಟ್ವೀಟ್ ಮಾಡಿದ ಇವಾಂಕಾ ಟ್ರಂಪ್, 'ನಾನು ಹಲವು ಗೆಳೆಯರನ್ನು ಮಾಡಿಕೊಂಡೆ, ಭಾರತೀಯ ಆದರಕ್ಕೆ ಧನ್ಯವಾದ' ಎಂದು ಬರೆದುಕೊಂಡಿದ್ದಾರೆ.
ಹಾಸ್ಯಕ್ಕಾಗಿ ಮಾಡುವ ಟ್ರೋಲ್ಗಳಿಂದ ಸೆಲೆಬ್ರಿಟಿಗಳು ಸಿಟ್ಟಾಗುವುದೇ ಹೆಚ್ಚು, ಮಾನನಷ್ಟ ಮೊಕದ್ದಮೆ ಹಾಕಿದ್ದೂ ಇದೆ, ಆದರೆ ಇವಾಂಕಾ ಮಾತ್ರ ತಮ್ಮನ್ನು ಹಾಸ್ಯಮಯವಾಗಿ ಚಿತ್ರಿಸಿದ ಚಿತ್ರಗಳನ್ನು ತಾವೇ ಟ್ವೀಟ್ ಮಾಡಿ ವಿಶಾಲ ಮನೋಭಾವ ಪ್ರದರ್ಶಿಸಿದ್ದಾರೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications