ಸಂಸತ್ನ ಕ್ಯಾಂಟೀನ್ನಿಂದ ಉತ್ತರ ರೈಲ್ವೆಗೆ ಗೇಟ್ಪಾಸ್: ಐಟಿಡಿಸಿಗೆ ನಿರ್ವಹಣೆ ಹೊಣೆ
ನವದೆಹಲಿ, ಅಕ್ಟೋಬರ್ 23: ಸಂಸತ್ ಭವನದಲ್ಲಿ ಸಂಸದರು, ಅಧಿಕಾರಿಗಳು ಹಾಗೂ ಇತರೆ ಉದ್ಯೋಗಿಗಳಿಗೆ ಆಹಾರ ಸೇವೆ ಒದಗಿಸುತ್ತಾ ಬಂದಿದ್ದ ಉತ್ತರ ರೈಲ್ವೆಯ 52 ವರ್ಷಗಳ ಭವ್ಯ ಪರಂಪರೆ ಅಂತ್ಯಗೊಂಡಿದೆ. ಸಂಸತ್ ಭವನದಲ್ಲಿ ಕ್ಯಾಂಟೀನ್ ನಡೆಸುವ ಅವಕಾಶವನ್ನು ಅದು ನವೆಂಬರ್ 15ರಂದ ಐಟಿಡಿಸಿಗೆ ಹಸ್ತಾಂತರಿಸುತ್ತಿದೆ.
1968ರಿಂದಲೂ ಕ್ಯಾಂಟೀನ್ ನಡೆಸುತ್ತಿರುವ ಉತ್ತರ ರೈಲ್ವೆಗೆ ನವೆಂಬರ್ 15ರ ವೇಳೆಗೆ ಸಂಸತ್ ಭವನದಲ್ಲಿನ ತನ್ನ ಎಲ್ಲ ಕೆಲಸಗಳನ್ನು ನಿಲ್ಲಿಸಿ ಖಾಲಿ ಮಾಡುವಂತೆ ಲೋಕಸಭೆ ಕಾರ್ಯದರ್ಶಿಗಳ ಪತ್ರದಲ್ಲಿ ಸೂಚಿಸಲಾಗಿದೆ.
ಐಷಾರಾಮಿ ಪಂಚತಾರಾ ಅಶೋಕ್ ಹೋಟೆಲ್ ಸಮೂಹವನ್ನು ನಡೆಸುತ್ತಿರುವ ಸರ್ಕಾರದ ಪ್ರವಾಸೋದ್ಯಮ ಅಂಗ ಭಾರತೀಯ ಪ್ರವಾಸ ಅಭವೃದ್ಧಿ ನಿಗಮ (ಐಟಿಡಿಸಿ) ಇನ್ನು ಮುಂದೆ ಸಂಸತ್ ಭವನದಲ್ಲಿನ ಕ್ಯಾಂಟೀನ್ ನಿರ್ವಹಣೆ ಮಾಡಲಿದೆ.

'ಸಂಸತ್ ಭವನದ ಸಂಕೀರ್ಣದಲ್ಲಿನ ಕ್ಯಾಂಟೀನ್ ಘಟಕಗಳನ್ನು ನವೆಂಬರ್ 15ರಿಂದ ಐಟಿಡಿಸಿಗೆ ಒಪ್ಪಿಸಲು ಸರ್ಕಾರ ತೀರ್ಮಾನಿಸಿದೆ. ಉತ್ತರ ರೈಲ್ವೆಯು ಅದಕ್ಕೆ ಅನುಗುಣವಾಗಿ ಲೋಕಸಭೆ ಕಾರ್ಯಾಲಯ ನೀಡಿರುವ ಕಂಪ್ಯೂಟರ್ ಪ್ರಿಂಟರ್ ಹಾಗೂ ಇತರೆ ವಿದ್ಯನ್ಮಾನ ಗ್ಯಾಡ್ಜೆಟ್ಗಳನ್ನು ಐಟಿಡಿಸಿಗೆ ಹಾಗೂ ಪೀಠೋಪಕರಣಗಳು, ಗ್ಯಾಡ್ಜೆಟ್ ಸಾಧನಗಳು ಮುಂತಾದವುಗಳಲ್ಲಿ ಸಿಪಿಡಬ್ಲ್ಯೂಡಿಗಳನ್ನು ಒಪ್ಪಿಸಬೇಕು' ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ಸಂಸತ್ನಲ್ಲಿ ಕ್ಯಾಂಟೀನ್ ನಡೆಸುವ ಹೊಸ ಸಂಸ್ಥೆಗಾಗಿ ಕಳೆದ ವರ್ಷದಿಂದ ಹುಡುಕಾಟ ಆರಂಭವಾಗಿತ್ತು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಮತ್ತು ಐಟಿಡಿಸಿಯ ಅಧಿಕಾರಿಗಳನ್ನು ಜುಲೈನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಉತ್ತರ ರೈಲ್ವೆಯ ಅಡುಗೆಯವರು, ಕಿಚನ್ ಸಿಬ್ಬಂದಿ ಹಾಗೂ ಇತರೆ ಸಹಾಯಕರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಸಂಸತ್ ಭವನದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಸತ್ ಅಧಿವೇಶನಗಳ ಸಂದರ್ಭದಲ್ಲಿ ಐಆರ್ಸಿಟಿಸಿಯ ಸುಮಾರು 75 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿತ್ತು.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications