ಮದುವೆ ಬಂಧ ಬೇರ್ಪಡಿಸಿದ ಗೋತ್ರದ ಅಡ್ಡಗೋಡೆ
ಚಂಡೀಗಢ, ಜುಲೈ, 23 : ಮದುವೆ ಸಂದರ್ಭದಲ್ಲಿ ನೀವು ಗೋತ್ರ, ನಕ್ಷತ್ರ, ಜಾತಕ ನೋಡುವ ರೂಢಿ ಇಟ್ಟುಕೊಂಡಿದ್ದೀರಾ?ನೀವು ಬಹಳ ಸಂಪ್ರದಾಯವಾದಿಗಳೇ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇಬೇಕು...ಇದು ರೀಲ್ ಅಲ್ಲ..ರಿಯಲ್..
ಪ್ರವೀಣ್ ಮತ್ತು ಪೂನಂ ಬೇಗನ್ ಮನೆಯವರ ನಿಶ್ಚಯದಂತೆ 5 ತಿಂಗಳ ಹಿಂದೆ ಮದುವೆ ಮಂಟಪ ಏರಿದ್ದರು. ಮಗಳ ವಿವಾಹದ ಸಂತೋಷ ಆಕೆಯ ಮನೆಯಲ್ಲಿ ತುಂಬಿದ್ದರೆ, ಮನೆಗೆ ಸೊಸೆ ಬಂದಳಲ್ಲ ಎಂಬ ಸಂತಸ ಹುಡುಗನ ಮನೆಯಲ್ಲಿ.[ಮಗುವಿಗೆ... ಅಪ್ಪನ ಪ್ರೀತಿಗಿಂತ, ಮಿಗಿಲಾದ ಗಿಫ್ಟ್ ಎಲ್ಲಿದೆ?]

ಖುಷಿ ಹಸಿಯಾಗಿರುವಾಗಲೇ ಪೂನಂ ಬೇಗನ್ ಗರ್ಭಿಣಿ ಎಂಬ ವಿಚಾರ ತಿಳಿದು ಅದು ಇನ್ನಷ್ಟು ಇಮ್ಮಡಿಗೊಂಡಿತು. ಆದರೆ ಇದು ಹೆಚ್ಚು ಕಾಲ ಉಳಿಯದೆ, ಮನೆಯವರ ಎಲ್ಲಾ ಕನಸುಗಳಿಗೆ ದುಃಖದ ಕಾರ್ಮೋಡ ಆವರಿಸಿಬಿಟ್ಟಿತು. ಗಂಡ ಹೆಂಡತಿಯರಾದ ಇವರು ಅಣ್ಣ ತಂಗಿಯಾಗಿ ಬದುಕಲು ಒಪ್ಪಂದ ಮಾಡಿಕೊಂಡಿರುವುದೇ ಇದಕ್ಕೆ ಕಾರಣ.
ಈ ದಂಪತಿಗಳಲ್ಲಿ ಒಬ್ಬರದು ಕೌಶಿಕ್ ಪೆಟ್ವಾಡಿಯಾ ಗೋತ್ರವಾದರೆ, ಇನ್ನೊಬ್ಬರದು ಕೌಶಿಕ್ ಪಟ್ವಾಲಿಯಾ ಗೋತ್ರವಾದುದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ. ಈ ಎರಡು ಗೋತ್ರದವರು ಯಾರಾದರೂ ಮದುವೆಯಾದಲ್ಲಿ ಅವರ ಅಣ್ಣ ತಂಗಿ ಸಂಬಂಧಕ್ಕೆ ಬರುತ್ತಾರೆ ಎಂದು ಘೋಷಿಸಿದ ಹರಿಯಾಣದ ಖಫ್ ಪಂಚಾಯತ್ ನಿರ್ಣಯದಂತೆ ಜೀವನ ನಡೆಸಲು ಇಬ್ಬರು ಒಪ್ಪಿಗೆ ಸೂಚಿಸಿದ್ದಾರೆ.
ಪಂಚಾಯಿತಿಯ ನಿರ್ಣಯವನ್ನು ವಿರೋಧಿಸಿದ ದಂಪತಿಗಳ ಕುಟುಂಬ ವರ್ಗದವರು ಹೈಕೋರ್ಟ್ ಮೆಟ್ಟಿಲೇರಿದ್ದು, ಇವರಿಗೆ ಸೆಕ್ಯುರಿಟಿ ಒದಗಿಸಬೇಕೆಂದು ಪೊಲೀಸರಿಗೆ ಆದೇಶ ನೀಡಿದೆ
-
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ












Click it and Unblock the Notifications