ಐತಿಹಾಸಿಕ ಮೈಲುಗಲ್ಲು, ಇಸ್ರೋದಿಂದ 100ನೇ ಉಪಗ್ರಹ ಉಡಾವಣೆ
ಬೆಂಗಳೂರು, ಜನವರಿ 10: ದೇಶದ ಬಾಹ್ಯಾಕಾಶ ಇತಿಹಾಸದ ಐತಿಹಾಸಿಕ ಸನ್ನಿವೇಶಕ್ಕ ಇಸ್ರೋ ಸಜ್ಜಾಗಿದೆ. ಇದೇ ಜನವರಿ 12ರಂದು ಇಸ್ರೋ ತನ್ನ 100ನೇ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಇದರ ಜತೆಗೆ ಇತರ 30 ಉಪಗ್ರಹಗಳನ್ನೂ ಅದು ಕಕ್ಷೆಗೆ ಸೇರಿಸಲಿದೆ.
ಕಳೆದ ಆಗಸ್ಟ್ ನಲ್ಲಿ ಇಸ್ರೋದ ಮಾರ್ಗದರ್ಶಿ ಉಪಗ್ರಹ IRNSS-1H ಉಡಾವಣೆ ವಿಫಲಗೊಂಡಿತ್ತು. ಉಡಾವಣಾ ವಾಹಕದ ವೈಫಲ್ಯದಿಂದ ಉಪಗ್ರಹ ಸಮುದ್ರ ಸೇರಿತ್ತು. ಹೀಗಾಗಿ ಈ ಉಡಾವಣೆಯನ್ನು 'ಮತ್ತೆ ಹಳಿಗೆ ಮರಳುವ ಪ್ರಕ್ರಿಯೆ' ಎಂದು ಇಸ್ರೋ ವ್ಯಾಖ್ಯಾನಿಸಿದೆ.
'ಪಿಎಸ್ಎಲ್ ವಿ - ಸಿ40' ಉಡಾವಣಾ ವಾಹಕ ಹವಾಮಾನ ಸಂಬಂಧಿ ಮಾಹಿತಿ ನೀಡುವ ಕಾರ್ಟೋಸ್ಟಾಟ್-2 ಉಪಗ್ರಹ ಸಹಿತ 31 ಉಪಗ್ರಹಗಳನ್ನು ಹೊತ್ತು ನಭಕ್ಕೆ ಹಾರಲಿದೆ ಎಂದು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕ ಎಂ. ಅಣ್ಣಾದೊರೈ ಹೇಳಿದ್ದಾರೆ. ಕಾರ್ಟೋಸ್ಟಾಟ್ 710 ಕೆಜಿ ತೂಕವಿದೆ. ಉಳಿದ ಉಪಗ್ರಹಗಳು ಒಟ್ಟಾಗಿ 613 ಕೆಜಿ ಭಾರವಿದೆ.

ಒಟ್ಟು 31 ಉಪಗ್ರಹಗಳಲ್ಲಿ ಮೂರು ಭಾರತದ್ದಾದರೆ, ಉಳಿದ 28 ವಿದೇಶಿ ಉಪಗ್ರಹಗಳಾಗಿವೆ. ಭಾರತದ ಮೂರು ಉಪಗ್ರಹಗಳಲ್ಲಿ ಒಂದು ಮೈಕ್ರೋ, ಮತ್ತೊಂದು ನ್ಯಾನೋ ಉಪಗ್ರಹವೂ ಸೇರಿದೆ. ಇನ್ನು ಕೆನಡಾ, ಫಿನ್ಲಂಡ್, ಫ್ರಾನ್ಸ್, ದಕ್ಷಿಣ ಕೊರಿಯಾ, ಬ್ರಿಟನ್ ಮತ್ತು ಅಮೆರಿಕಾಗೆ ಸೇರಿದ ಮೂರು ಮೈಕ್ರೋ ಮತ್ತು 25 ನ್ಯಾನೋ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಲಿದೆ. ಮೂರು ಉಗ್ರಹಗಳ ಉಡಾವಣೆಯೊಂದಿಗೆ ಒಟ್ಟಾರೆ ಭಾರತದ 100 ಉಪಗ್ರಹಗಳನ್ನು ಉಡಾಯಿಸಿದ ದಾಖಲೆಯನ್ನು ಇಸ್ರೋ ಬರೆಯಲಿದೆ.
ಜನವರಿ 12 ಶುಕ್ರವಾರ ಬೆಳಿಗ್ಗೆ 9.28ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಉಪಗ್ರಹ ಉಡಾವಣೆಯಾಗಲಿದೆ. ಇನ್ನು ಚಂದ್ರಯಾನ 2 ಅಂತಿಮ ಹಂತದಲ್ಲಿದ್ದು ಇದೇ ವರ್ಷದಲ್ಲಿ ಉಡಾವಣೆಯಾಗಲಿದೆ ಎಂದು ಅಣ್ಣಾದೊರೈ ಹೇಳಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications