ಐತಿಹಾಸಿಕ ಮೈಲುಗಲ್ಲು, ಇಸ್ರೋದಿಂದ 100ನೇ ಉಪಗ್ರಹ ಉಡಾವಣೆ
ಬೆಂಗಳೂರು, ಜನವರಿ 10: ದೇಶದ ಬಾಹ್ಯಾಕಾಶ ಇತಿಹಾಸದ ಐತಿಹಾಸಿಕ ಸನ್ನಿವೇಶಕ್ಕ ಇಸ್ರೋ ಸಜ್ಜಾಗಿದೆ. ಇದೇ ಜನವರಿ 12ರಂದು ಇಸ್ರೋ ತನ್ನ 100ನೇ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಇದರ ಜತೆಗೆ ಇತರ 30 ಉಪಗ್ರಹಗಳನ್ನೂ ಅದು ಕಕ್ಷೆಗೆ ಸೇರಿಸಲಿದೆ.
ಕಳೆದ ಆಗಸ್ಟ್ ನಲ್ಲಿ ಇಸ್ರೋದ ಮಾರ್ಗದರ್ಶಿ ಉಪಗ್ರಹ IRNSS-1H ಉಡಾವಣೆ ವಿಫಲಗೊಂಡಿತ್ತು. ಉಡಾವಣಾ ವಾಹಕದ ವೈಫಲ್ಯದಿಂದ ಉಪಗ್ರಹ ಸಮುದ್ರ ಸೇರಿತ್ತು. ಹೀಗಾಗಿ ಈ ಉಡಾವಣೆಯನ್ನು 'ಮತ್ತೆ ಹಳಿಗೆ ಮರಳುವ ಪ್ರಕ್ರಿಯೆ' ಎಂದು ಇಸ್ರೋ ವ್ಯಾಖ್ಯಾನಿಸಿದೆ.
'ಪಿಎಸ್ಎಲ್ ವಿ - ಸಿ40' ಉಡಾವಣಾ ವಾಹಕ ಹವಾಮಾನ ಸಂಬಂಧಿ ಮಾಹಿತಿ ನೀಡುವ ಕಾರ್ಟೋಸ್ಟಾಟ್-2 ಉಪಗ್ರಹ ಸಹಿತ 31 ಉಪಗ್ರಹಗಳನ್ನು ಹೊತ್ತು ನಭಕ್ಕೆ ಹಾರಲಿದೆ ಎಂದು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕ ಎಂ. ಅಣ್ಣಾದೊರೈ ಹೇಳಿದ್ದಾರೆ. ಕಾರ್ಟೋಸ್ಟಾಟ್ 710 ಕೆಜಿ ತೂಕವಿದೆ. ಉಳಿದ ಉಪಗ್ರಹಗಳು ಒಟ್ಟಾಗಿ 613 ಕೆಜಿ ಭಾರವಿದೆ.

ಒಟ್ಟು 31 ಉಪಗ್ರಹಗಳಲ್ಲಿ ಮೂರು ಭಾರತದ್ದಾದರೆ, ಉಳಿದ 28 ವಿದೇಶಿ ಉಪಗ್ರಹಗಳಾಗಿವೆ. ಭಾರತದ ಮೂರು ಉಪಗ್ರಹಗಳಲ್ಲಿ ಒಂದು ಮೈಕ್ರೋ, ಮತ್ತೊಂದು ನ್ಯಾನೋ ಉಪಗ್ರಹವೂ ಸೇರಿದೆ. ಇನ್ನು ಕೆನಡಾ, ಫಿನ್ಲಂಡ್, ಫ್ರಾನ್ಸ್, ದಕ್ಷಿಣ ಕೊರಿಯಾ, ಬ್ರಿಟನ್ ಮತ್ತು ಅಮೆರಿಕಾಗೆ ಸೇರಿದ ಮೂರು ಮೈಕ್ರೋ ಮತ್ತು 25 ನ್ಯಾನೋ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಲಿದೆ. ಮೂರು ಉಗ್ರಹಗಳ ಉಡಾವಣೆಯೊಂದಿಗೆ ಒಟ್ಟಾರೆ ಭಾರತದ 100 ಉಪಗ್ರಹಗಳನ್ನು ಉಡಾಯಿಸಿದ ದಾಖಲೆಯನ್ನು ಇಸ್ರೋ ಬರೆಯಲಿದೆ.
ಜನವರಿ 12 ಶುಕ್ರವಾರ ಬೆಳಿಗ್ಗೆ 9.28ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಉಪಗ್ರಹ ಉಡಾವಣೆಯಾಗಲಿದೆ. ಇನ್ನು ಚಂದ್ರಯಾನ 2 ಅಂತಿಮ ಹಂತದಲ್ಲಿದ್ದು ಇದೇ ವರ್ಷದಲ್ಲಿ ಉಡಾವಣೆಯಾಗಲಿದೆ ಎಂದು ಅಣ್ಣಾದೊರೈ ಹೇಳಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications