ಅತಿ ತೂಕದ ಜಿಸ್ಯಾಟ್-11 ಉಪಗ್ರಹದ ಪ್ರಯೋಜನಗಳೇನು ಗೊತ್ತೇ?
ಬೆಂಗಳೂರು, ಡಿಸೆಂಬರ್ 5: ಉಪಗ್ರಹ ಕ್ಷೇತ್ರದಲ್ಲಿ ಭಾರತೀಯ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವದ ಸಾಧನೆ ಮಾಡಿದೆ.
ಒಂದೇ ತಿಂಗಳ ಅವಧಿಯಲ್ಲಿ ತಮ್ಮ ಮೂರನೇ ಉಪಗ್ರಹ ಯೋಜನೆಯನ್ನು ಉಡಾವಣೆ ಮಾಡಿದೆ. ಭಾರತೀಯ ವಿಜ್ಞಾನ ವಲಯದಲ್ಲಿ ಬಹುದೊಡ್ಡ ಸಾಧನೆಯೇ ಹೌದು.
ಇಂದು (ಡಿ. 5) ಉಡಾವಣೆಗೊಂಡ ಜಿಸ್ಯಾಟ್-11 ಇಸ್ರೋ ನಿರ್ಮಿಸಿದ ಅತ್ಯಂತ ತೂಕದ ಉಪಗ್ರಹ. ಭಾರತದ ಅತಿ ದೊಡ್ಡ ಭೂಸ್ಥಾಯಿ ಸಂವಹನ ಉಪಗ್ರಹ ಕೂಡ.
ದೇಶದ ಮೂಲೆ ಮೂಲೆಗೂ ಅಂತರ್ಜಾಲ ಸೌಲಭ್ಯ ಕಲ್ಪಿಸುವ ಉದ್ದೇಶದ ಈ ಉಪಗ್ರಹವನ್ನು ಫ್ರಾನ್ಸ್ನ ಜಿಯಾನಾದ ಕೌರೌ ಎಂಬಲ್ಲಿನ ಏರಿಯನ್ ಲಾಂಚ್ ಕಾಂಪ್ಲೆಕ್ಸ್ನಲ್ಲಿ ಬುಧವಾರ ಬೆಳಗಿನ ಜಾವ ಉಡಾವಣೆ ಮಾಡಲಾಯಿತು.
ದೇಶದ ಸಂವಹನ ಕ್ಷೇತ್ರಕ್ಕೆ ಸಾಕಷ್ಟು ನೆರವಾಗಬಲ್ಲ, ಇಸ್ರೋದ ಈ ಜಿಸ್ಯಾಟ್-11 ಉಪಗ್ರಹದ ಪ್ರಯೋಜನಗಳೇನು? ಮುಂದೆ ಓದಿ...

ಭಾರತಕ್ಕೆ ಅಗತ್ಯವಾಗಿದ್ದ ಯೋಜನೆ
ಇಸ್ರೋ ದೇಶದೊಳಗಿನ ಶಕ್ತಿಯುತ ಸಂವಹನ ಮೂಲಸೌಕರ್ಯವನ್ನು ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಜಿಸ್ಯಾಟ್-11 ಕೂಡ ಇದೇ ರೀತಿಯ ಕಾಣಿಕೆ ನೀಡುವುದನ್ನು ಮುಂದುವರಿಸಲಿದೆ.
ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಅಂದಾಜು 450 ಮಿಲಿಯನ್ ತಲುಪಿದೆ. ದೇಶದ ಭೌಗೋಳಿಕ ಸಂರಚನೆ ಮತ್ತು ವಾತಾವರಣದ ಗುಣಗಳಿಗೆ ಅನುಗುಣವಾಗಿ ಈ ಉಪಗ್ರಹ ಅತಿ ಅಗತ್ಯವಾಗಿತ್ತು ಎನ್ನುತ್ತದೆ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಇಂಡಿಯಾ ರೂಪಿಸಿರುವ ವಿಡಿಯೋ. ಭಾರತದ ಪ್ರತಿ ಮೂಲೆಗೂ ಬ್ರಾಡ್ ಬ್ಯಾಂಡ್ ಸಂಪರ್ಕ ಒದಗಿಸುವುದು ಮುಖ್ಯವಾಗಿತ್ತು.
| Array |
ಕುಗ್ರಾಮಗಳಿಗೂ ಬ್ರಾಡ್ ಬ್ಯಾಂಡ್
ಇಂದಿನ ಯುಗದಲ್ಲಿ ಉಪಗ್ರಹ ಆಧಾರಿತ ಬ್ರಾಂಡ್ ಬ್ಯಾಂಡ್ ಸಂಪರ್ಕಗಳು ಧ್ವನಿ, ಡಾಟಾ ಮತ್ತು ವಿಡಿಯೋ ಪ್ರಸಾರದ ಸೌಲಭ್ಯಗಳನ್ನು ಒಳಗೊಂಡಿದ್ದು, ಭಾರಿ ಪರಿಣಾಮ ಬೀರುತ್ತಿವೆ ಮತ್ತು ಇಡೀ ವ್ಯವಸ್ಥೆಯನ್ನೇ ಬದಲಿಸುವಂತಿವೆ. ಗ್ರಾಮೀಣ ಪ್ರದೇಶಗಳು, ಸಂಪರ್ಕವೇ ಇಲ್ಲದ ಗ್ರಾಮ ಪಂಚಾಯಿತಿಗಳಿಗೆ ಭಾರತ್ ನೆಟ್ ಪ್ರಾಜೆಕ್ಟ್ ಯೋಜನೆ ಅಡಿಯಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸುವ ಬಹುತೇಕ ಗುರಿಗಳನ್ನು ಈ ಉಪಗ್ರಹದಿಂದ ಈಡೇರಿಸಲು ಸಾಧ್ಯ. ಈ ಯೋಜನೆಯು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವೂ ಆಗಿದೆ ಎಂದು ಇದ್ರೋ ಅಧ್ಯಕ್ಷ ಡಾ.ಕೆ. ಶಿವನ್ ತಿಳಿಸಿದ್ದಾರೆ.
|
ಸ್ಮಾರ್ಟ್ ಸಿಟಿಗಳ ಬೆಸುಗೆ
ಜಿಸ್ಯಾಟ್-11 ಯೋಜನೆಯು 15 ವರ್ಷಗಳ ಜೀವಿತಾವಧಿ ಹೊಂದಿದೆ. ಈ ರೀತಿಯ ಬೃಹತ್ ಸಂವಹನ ಉಪಗ್ರಹಗಳು ಸ್ಮಾರ್ಟ್ ಸಿಟಿಗಳನ್ನು ಬೆಸೆಯುವಲ್ಲಿ ನೆರವಾಗಲಿವೆ. ಮನೆಗಳು, ಉದ್ಯಮಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಬ್ರಾಡ್ ಬ್ಯಾಂಡ್ ಒದಗಿಸುವ ಜೊತೆಯಲ್ಲಿ ದೂರಸಂಪರ್ಕ ಮತ್ತು ಬಹು ಮಾಧ್ಯಮ ಸೌಲಭ್ಯಗಳನ್ನು ಕೂಡ ನೀಡಲಿದೆ. ವಿಶೇಷವೆಂದರೆ ಈ ಉಪಗ್ರಹವು ವಿಮಾನದ ಒಳಗೂ ಸಂಪರ್ಕ ಹೊಂದಲು ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ದೇಶದಾದ್ಯಂತ ಅಧಿಕ ವೇಗದ ಡಾಟಾ ಸೇವೆಯಲ್ಲಿ ಕಲ್ಪಿಸಲಿದೆ.
| Array |
ಸೆಕೆಂಡಿಗೆ 16 ಜಿಬಿ ಡಾಟಾ
5870 ಕೆಜಿ ತೂಕವಿರುವ ಜಿಸ್ಯಾಟ್ 11, ದೇಶದ ಪ್ರತಿ ಮೂಲೆಗೂ ಸೆಕೆಂಡಿಗೆ 16 ಜಿಬಿ ಡಾಟಾ ಸಂಪರ್ಕ ಸೇವೆ ನೀಡುವಷ್ಟು ಸಾಮರ್ಥ್ಯ ಹೊಂದಿದೆ. 500 ಕೋಟಿ ವೆಚ್ಚದಲ್ಲಿ ಈ ಯೋಜನೆ ಸಿದ್ಧವಾಗಿದ್ದು, ಕುಗ್ರಾಮಗಳಿಗೂ ಅಂತರ್ಜಾಲದ ಸೌಲಭ್ಯ ಎಟಕುವಂತೆ ಮಾಡಲಿದೆ. ಇದರಿಂದ ಭಾರತವನ್ನು ಡಿಜಿಟಲೀಕರಣ ಮಾಡುವ ಯೋಜನೆ ಪ್ರಬಲಗೊಳ್ಳಲಿದೆ. ಕೋಟ್ಯಂತರ ಇಂಟರ್ನೆಟ್ ಬಳಕೆದಾರರಿಗೆ ಪ್ರಯೋಜನವಾಗಲಿದೆ.
-
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ












Click it and Unblock the Notifications