ಈ ನೀಲಿಗಣ್ಣಿನ ಹುಡುಗ ಪಾಕಿಸ್ತಾನದ 'ನ್ಯೂ ಕ್ಲಿಯರ್ ವೆಪನ್'!
ನವದೆಹಲಿ, ಅಕ್ಟೋಬರ್ 18: ಇಸ್ಲಾಮಾಬಾದ್ ನ ಟೀ ಮಾರುವ ಹುಡುಗನೊಬ್ಬ ಭಾರೀ ಸುದ್ದಿ ಮಾಡುತ್ತಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವನನ್ನು ಪಾಕ್ ನ 'ನ್ಯೂಕ್ಲಿಯರ್ ವೆಪನ್'' ಎನ್ನುತ್ತಿದ್ದು, ಭಾರತೀಯ ಹೆಣ್ಣುಮಕ್ಕಳ ಹೃದಯಗಳ ಮೇಲೆ 'ಸರ್ಜಿಕಲ್ ಸ್ಟ್ರೈಕ್' ನಡೆಸುತ್ತಿದ್ದಾನೆ ಎಂದು ತಮಾಷೆ ಮಾಡಲಾಗುತ್ತಿದೆ.
ಈ ಫೋಟೋವನ್ನು ತೆಗೆದವರು ಜವೇರಿಯಾ ಅಥವಾ ಜಿಯಾ, ಅಲಿ ಅದನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗೆ ವೈರಲ್ ಆಗಿದೆ. ಅಲಿ ಪ್ರಕಾರ ಆತ ಸಿಕ್ಕಿದ್ದು ಇಸ್ಲಾಮಾಬಾದ್ ನ ಇತ್ವಾರ್ ಬಜಾರ್ ನಲ್ಲಿ ಫೋಟೋಗಾಗಿ ಅಡ್ಡಾಡುತ್ತಿದ್ದಾಗ.[ಹೊಸ ದಾರಿ ಹುಡುಕಲು ಬಿಟ್ಟ ಉಗ್ರರಿಗೀಗ ಹಳೆ ಮಾರ್ಗವೇ ಸರಿ!]

'ಈ ಫೋಟೋ ತೆಗೆದದ್ದು ತಿಂಗಳುಗಳ ಹಿಂದೆ. ಆದರೆ ಇನ್ ಸ್ಟಾ ಗ್ರಾಂನಲ್ಲಿ ಹಾಕಿದ್ದು ಈಚೆಗೆ. ಅದನ್ನು ಯಾರೋ ಸೋಷಿಯಲ್ ಮೀಡಿಯಾಗೆ ಹಾಕಿದ ನಂತರ ವೈರಲ್ ಆಗಿದೆ' ಎನ್ನುತ್ತಾರೆ ಜಿಯಾ. ಈ ಫೋಟೋ ಪಾಕಿಸ್ತಾನದಲ್ಲಿ ಹ್ಯಾಷ್ ಟ್ಯಾಗ್ #Chaiwala ಎಂದು ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.
ಈ ಫೋಟೋ ಇಷ್ಟು ಬೇಡಿಕೆ ಪಡೆಯುತ್ತದೆ ಎಂದು ನೀವು ಅಂದುಕೊಂಡಿದ್ದಿರಾ ಎಂದು ಜವೇರಿಯಾ ಅವರನ್ನು ಕೇಳಿದರೆ, ನಾನು ಖಂಡಿತಾ ಅಂದುಕೊಂಡಿರಲಿಲ್ಲ. ಬೇಕಾದಷ್ಟು ಫೋಟೋ ಷೇರ್ ಮಾಡ್ತಿರ್ತೀನಿ. ಆದರೆ ಈ ಹುಡುಗನ ಫೋಟೋ ಮಹಿಳೆಯರಿಗೆ ಬಹಳ ಇಷ್ಟ ಆಗಿದೆ ಅಂದುಕೊಳ್ತೀನಿ ಎಂದಿದ್ದಾರೆ.[ಪಾಕ್ ಮಹಾನ್ ತ್ಯಾಗಮಯಿ ಅಂತಿದೆ ಚೀನಾ, ಒಪ್ತೀರಾ?]
ಒಬ್ಬರಂತೂ ಪಾಕಿಸ್ತಾನದ ಟೀವಾಲಾ ಭಾರತದ ಕರಣ್ ಜೋಹರ್ ಗಿಂತ ವಾಸಿ ಎಂದು ಟ್ವೀಟ್ ಮಾಡಿದ್ದಾರೆ. ಈ ಚಾಯ್ ವಾಲಾಗೋಸ್ಕರವಾದರೂ ಶಾಂತಿ ನೆಲೆಸಬೇಕು ಎಂದು ಭಾರತೀಯರೊಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರಂತೂ ಈತ ಭಾರತೀಯನೂ ಅಲ್ಲ, ಪಾಕಿಸ್ತಾನಿಯೂ ಅಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನ ಉಗ್ರಗಾಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳೋಕೆ ಆಗ್ತಿಲ್ಲ. ಇಂಥ ಸಮಯದಲ್ಲಿ ಆ ದೇಶದ ರಾಯಭಾರಿಯಾಗಿ ಈ ಚಾಯ್ ವಾಲಾನ ಮಾಡಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗುವುದನ್ನು ತಪ್ಪಿಸಿಕೊಳ್ಳಲಿ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.[ಪಾಕ್ ಉಗ್ರರ ಬೆದರಿಕೆ - ಅರ್ನಬ್ ಗೋಸ್ವಾಮಿಗೆ ಬಿಗಿ ಭದ್ರತೆ]
ಆತನಿಗಾಗಿ ನಾನಿನ್ನೂ ಹುಡುಕುತ್ತಲೇ ಇದ್ದೀನಿ. ಕೆಲವು ತಿಂಗಳ ಹಿಂದೆ ಅವನನ್ನು ನೋಡಿದ್ದು ಭಾನುವಾರದ ಮಾರುಕಟ್ಟೆಯಲ್ಲಿ. ಅವನನ್ನು ಮತ್ತೊಮ್ಮೆ ನೋಡಲು ಭಾನುವಾರದ ಮಾರುಕಟ್ಟೆಗೋಸ್ಕರ ಕಾಯ್ತೀನಿ' ಎಂದಿದ್ದಾರೆ ಜವೇರಿಯಾ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications