ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್, ಇರಾನ್ ವಾರ್ನಿಂಗ್
ಪಾಕಿಸ್ತಾನದೊಂದಿಗೆ ನೇರ ಗಡಿ ಹಂಚಿಕೊಂಡಿರುವ ಇರಾನಿನ 10 ಜನ ಸೈನಿಕರನ್ನು ಇತ್ತೀಚೆಗೆ ಪಾಕಿಸ್ತಾನದಲ್ಲಿ ನೆಲೆ ನಿಂತಿರುವ ಉಗ್ರ ಸಂಘಟನೆ ಜೈಷ್ ಅಲ್ ಅದ್ಲ್ ಕೊಂದು ಹಾಕಿತ್ತು.
ತೆಹ್ರಾನ್, ಮೇ 8: ಭಾರತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬೆನ್ನಿಗೆ ಇದೀಗ ಇರಾನ್ ಕೂಡಾ ಅದೇ ರೀತಿಯ ಬೆದರಿಕೆ ಹಾಕಿದೆ.
7 ತಿಂಗಳ ಹಿಂದೆ ಭಾರತ ಪಿಒಕೆ ಪ್ರದೇಶದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಇದೀಗ ಿರಾನ್, "ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಉಗ್ರರಿಗೆ ಪಾಕಿಸ್ತಾನ ಸರಕಾರ ಅಂಕುಶ ಹಾಕಬೇಕು. ಒಂದೊಮ್ಮೆ ಅಂಕುಶ ಹಾಕದಿದ್ದಲ್ಲಿ, ಇದೇ ಪರಿಸ್ಥಿತಿ ಮುಂದುವರಿದರೆ ಗಡಿ ದಾಟಿ ದಾಳಿ ನಡೆಸಲಾಗುವುದು. ಉಗ್ರರು ಎಲ್ಲೇ ಅಡಗಿದರೂ ಬಿಡುವುದಿಲ್ಲ," ಎಂದು ಇರಾನ್ ಸೇನಾ ಮುಖ್ಯಸ್ಥ ಮೊಹಮ್ಮದ್ ಬಘೇರಿ ಗುಡುಗಿದ್ದಾರೆ.[ಪಾಕ್ ಬಂಕರ್ ದ್ವಂಸ: ಟ್ವಿಟ್ಟರ್ ನಲ್ಲಿ ಹರ್ಷದ ಹೊಳೆ]

ಪಾಕಿಸ್ತಾನದೊಂದಿಗೆ ನೇರ ಗಡಿ ಹಂಚಿಕೊಂಡಿರುವ ಇರಾನಿನ 10 ಜನ ಸೈನಿಕರನ್ನು ಇತ್ತೀಚೆಗೆ ಪಾಕಿಸ್ತಾನದಲ್ಲಿ ನೆಲೆ ನಿಂತಿರುವ ಉಗ್ರ ಸಂಘಟನೆ ಜೈಷ್ ಅಲ್ ಅದ್ಲ್ ಕೊಂದು ಹಾಕಿತ್ತು.
ಲಾಂಗ್ ರೇಜ್ ಗನ್ ಸಹಾಯದಿಂದ ಪಾಕಿಸ್ತಾನ ಗಡಿಯೊಳಗೆಯೇ ನಿಂತು ಉಗ್ರ ಸಂಘಟನೆ ಈ ಕೃತ್ಯ ಮಾಡಿತ್ತು. ಇದರಿಂದ ಆಕ್ರೋಶಿತಗೊಂಡಿರುವ ಇರಾನ್ ಬಹಿರಂಗ ಎಚ್ಚರಿಕೆ ನೀಡಿದೆ.












Click it and Unblock the Notifications