ಇಂಟರ್ನೆಟ್ಟಿಗೆ ಸೆನ್ಸಾರ್, ಇದು ಸರಿಯಾದ ಕ್ರಮವೇ?
ಉಗ್ರಗಾಮಿ ಚಟುವಟಿಕೆಗಳನ್ನ ನಿಯಂತ್ರಿಸುವ ಉದ್ದೇಶದಿಂದ ಸುಮಾರು 32ಕ್ಕೂ ಹೆಚ್ಚು ವೆಬ್ ತಾಣಗಳನ್ನು ಸರ್ಕಾರ ನಿಷೇಧಿಸಿರುವ ಸುದ್ದಿ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೊಳಲ್ಪಟ್ಟಿದೆ.
ವೆಬ್ ತಾಣಗಳು,ಪುಟಗಳ ಮೇಲೆ ನಿರ್ಬಂಧ, ನಿಷೇಧ ಹೇರುವುದು ಎಷ್ಟು ಸರಿ? ಇಂಟರ್ನೆಟ್ಟಿಗೆ ಸೆನ್ಸಾರ್ ಶಿಪ್ ಹಾಕಲು ಸರ್ಕಾರಗಳಿಗೆ ಹೇಗೆ ಅಧಿಕಾರವಿದೆ? ಚೀನಾ ಮಾದರಿಯನ್ನು ಭಾರತ ಅನುಸರಿಸುತ್ತಿದೆಯೆ? ಎಂಬೆಲ್ಲ ಪ್ರಶ್ನೆಗಳಿಗೆ ಸೈಬರ್ ಕಾನೂನು ತಜ್ಞ ಪವನ್ ದುಗ್ಗಾಲ್ ಅವರು ಒನ್ ಇಂಡಿಯಾ ಜೊತೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಶನದ ಸಾರಾಂಶ ಇಲ್ಲಿದೆ...
ಚೀನಾ ಮಾದರಿಯನ್ನು ಭಾರತ ಒಪ್ಪಿಕೊಳ್ಳಬಾರದು:
ಚೀನಾದಲ್ಲಿ ಇಂಟರ್ನೆಟ್ ಸೆನ್ಸಾರ್ ಶಿಪ್ ಅತ್ಯಂತ ಕಠಿಣವಾಗಿದ್ದು, ಗ್ರೇಟ್ ಫೈರ್ ವಾಲ್ ಆಫ್ ಚೀನಾ ಎಂದು ನೆಟಿಜನ್ಸ್ ಗೇಲಿ ಮಾಡುತ್ತಾರೆ. ಭಾರತ ಈ ರೀತಿ ಮಾದರಿ ಅಳವಡಿಸಿಕೊಳ್ಳಬಾರದು ಹಾಗೂ ಅಳವಡಿಸಿಕೊಳ್ಳುವುದು ಸಾಧ್ಯವಿಲ್ಲ. ನಮ್ಮ ಸಂವಿಧಾನದಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ದೇಶದ ಸುರಕ್ಷತೆ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ.
ಸೆನ್ಸಾರ್ ಶಿಪ್ ಅಧಿಕವಾಗಿ ನಿರ್ಬಂಧ ನಿಷೇಧ ಹೆಚ್ಚಳವಾದರೆ, ನಾಗರಿಕರ ಮೂಲಭೂತ ಹಕ್ಕುಗಳಿಗೆ ಚ್ಯುತಿ ತಂದಂತೆ ಆಗುತ್ತದೆ. ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲದ್ದಂತಾಗುತ್ತದೆ. ಸಂವಿಧಾನದ ಪರಿಚ್ಛೇದ 19(1)ವನ್ನು ಒಮ್ಮೆ ಪರಿಶೀಲಿಸಬಹುದು.

ನಿರ್ಬಂಧ ಹೇರಲು ಅವಕಾಶವಿದೆ:
ನಾಗರೀಕರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಾರದಂತೆ ಇಂಟರ್ನೆಟ್ ನ ದುರ್ಬಳಕೆ ಮೇಲೆ ನಿರ್ಬಂಧ ಹೇರುವ ಅಧಿಕಾರ ಸರ್ಕಾರಕ್ಕಿದೆ. ಇದಕ್ಕಾಗಿ ಮಾಹಿತಿ ತಂತ್ರಜ್ಞಾನ್ ಕಾಯ್ದೆಯನ್ನು 2000ರಲ್ಲೇ ರೂಪಿಸಲಾಗಿದೆ. ಐಟಿ ಕಾಯ್ದೆ ಸೆಕ್ಷನ್ 69(ಎ) ಪ್ರಕಾರ ದೇಶದ ಐಕ್ಯತೆ, ಸಮಗ್ರತೆ, ಸೌಹಾರ್ದತೆಗೆ ಧಕ್ಕೆ ತರುವ ಲೇಖನ, ಕಾಮೆಂಟ್, ಚಿತ್ರ, ಸಂದೇಶಗಳು ಇಂಟರ್ನೆಟ್ ನಲ್ಲಿ ಹರಿದಾಡುವಂತೆ ಮಾಡುವ ವೆಬ್ ತಾಣಗಳನ್ನು ನಿಷೇಧಿಸಬಹುದಾಗಿದೆ.
32 ವೆಬ್ URL ಏಕೆ ಬ್ಲಾಕ್ ಮಾಡಲಾಯಿತು?
ನಿಜಕ್ಕೂ 32 URL ಗಳನ್ನು ಬ್ಲಾಕ್ ಮಾಡಿದ್ದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಉಗ್ರಗಾಮಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ವೆಬ್ ತಾಣಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ. archive.org ಹಾಗೂ Vimeo ನಂಥ ವೆಬ್ ತಾಣಗಳ ವಿರುದ್ಧ ಕ್ರಮ ಜರುಗಿಸಿರುವುದು ಹುಬ್ಬೇರಿಸಿದೆ.
ನಿಷೇಧಕ್ಕೆ ಒಳಪಟ್ಟಿರುವ ತಾಣಗಳಲ್ಲಿರುವ ಲೇಖನಗಳು, ಚಿತ್ರಗಳು, ವಿಡಿಯೋಗಳ ವಿರುದ್ಧ ಯಾರಾದರು ದೂರು ನೀಡಿರಬಹುದು. ಅದರೆ, ಕೋರ್ಟ್ ಈ ನಡುವೆ ತಂತ್ರಜ್ಞಾನದ ಬಗ್ಗೆ ಅರಿವು ಪಡೆದುಕೊಂಡಿದ್ದು, ವೆಬ್ ತಾಣ ಬ್ಲಾಕ್ ಮಾಡುವುದಕ್ಕಿಂತ ಆಕ್ಷೇಪಾರ್ಹ ವೆಬ್ ಪುಟವನ್ನು ಮಾತ್ರ ಬ್ಲಾಕ್ ಮಾಡಲು ಹೇಳುವಷ್ಟರ ಮಟ್ಟಿಗೆ ಸುಧಾರಣೆಗೊಂಡಿದೆ.
ಬ್ಲಾಕ್ ಮಾಡುವುದು ಹಳೆ ವಿಧಾನ:
ಇಂಟರ್ನೆಟ್ ನಲ್ಲಿ ಬ್ಲಾಕ್ ಮಾಡಿದ ಬಳಿಕವೂ ವೆಬ್ ಪುಟಗಳು ಚಾಲನೆಗೊಳಿಸುವ ಸರಳ ತಂತ್ರ ಅನೇಕರಿಗೆ ತಿಳಿದಿದೆ. ನಿರ್ಬಂಧ ಹೇರಿಕೆ, ನಿಷೇಧ ಎಲ್ಲವೂ ಕಳೆದ ಶತಮಾನದ ಪದಗಳಾಗಿವೆ. ವೆಬ್ ಮಾಲೀಕರಿಗೆ ನೋಟಿಸ್ ನೀಡದೆ ಬ್ಲಾಕ್ ಮಾಡುವುದು ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಬ್ಲಾಕ್ ಮಾಡುವುದರಿಂದ ಇಂಟರ್ನೆಟ್ ಟ್ರಾಫಿಕ್ ಹೆಚ್ಚಾಗುವುದೇ ವಿನಹ ಕಡಿಮೆಯಾಗುವುದಿಲ್ಲ.
ಪರಿಣಾಮಕಾರಿ ಕ್ರಮ ಅಗತ್ಯ
ಪರಿಣಾಮಕಾರಿ ಕ್ರಮ ಅಗತ್ಯವಾಗಿದ್ದು, ಸೈಬರ್ ಕ್ರೈಂ ನಿಯಂತ್ರಣಕ್ಕಾಗಿ ತಜ್ಞರ ಬಳಕೆ ಮಾಡಿಕೊಳ್ಳಬೇಕು. ಪೋರ್ನೋಗ್ರಾಫಿ ವಿರುದ್ಧ ಹೋರಾಟದಂತೆ ಉಗ್ರರ ಚಟುವಟಿಕೆ ಹತ್ತಿಕ್ಕಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಐಎಸ್ ಪಿಗಳಿಗೆ ಮಾರ್ಗಸೂಚಿ ನೀಡಬೇಕು. ಆಕ್ಷೇಪಾರ್ಹ ಪುಟಗಳನ್ನು ಮಾತ್ರ ಬ್ಲಾಕ್ ಮಾಡುವ ಸಾಧಕಗಳನ್ನು ನೀಡಬೇಕು. ಇಂಟರ್ನೆಟ್ ಸೆನ್ಸಾರ್ ಶಿಪ್ ಹಾಗೂ ನಿಷೇಧ ಹೇರಿಕೆ ಎಲ್ಲವೂ ಅನರ್ಥಕ್ಕೆ ದಾರಿ ಮಾಡುತ್ತದೆಯೇ ಹೊರತೂ ನಿಯಂತ್ರಣಕ್ಕೆ ದಾರಿ ತೋರಿಸುವುದಿಲ್ಲ.
ಮಧ್ಯವರ್ತಿ ತಜ್ಞರ ನೆರವು ಪಡೆಯಬಹುದು
ಐಟಿ ಕಾಯ್ದೆ 2000ರ ಸೆಕ್ಷನ್ 79ರ ಅನ್ವಯ ಸುಮಾರು 2000 ಖಾಸಗಿ ಐಟಿ ತಜ್ಞರನ್ನು ಮಧ್ಯವರ್ತಿಯಾಗಿ ಬಳಸಲು ಆಸ್ಪದ ನೀಡಲಾಗಿದೆ. ಹೀಗಾಗಿ ಐಎಸ್ ಪಿಗಳು ಹಾಗೂ ವೆಬ್ ತಾಣದ ಮಾಲೀಕರ ನಡುವೆ ಈ ತಜ್ಞರು ಸೂಕ್ತವಾಗಿ ವ್ಯವಹರಿಸಿ ಸಮಸ್ಯೆ ಬಗೆಹರಿಸಬಹುದು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications