8 ಗಂಟೆಗೆ ಕಚೇರಿ ಬಿಡಿ: ಇನ್ಫಿ ಟೆಕ್ಕಿಗಳಿಗೆ ತಾಕೀತು

ಕಂಪನಿಯ ಟೆಕ್ಕಿಗಳೇ ದಯವಿಟ್ಟು ರಾತ್ರಿಪಾಳಿಯಲ್ಲೂ ಕೆಲಸ ಮಾಡುವ ಚಾಳಿ ಬಿಡಿ. ದಿನದ ಕೆಲಸ ಮುಗಿಯುತ್ತಿದ್ದಂತೆ ರಾತ್ರಿ ವೇಳೆಗೇ ಶೀಘ್ರವೇ ಕಚೇರಿ ಬಿಟ್ಟು, ಬೇಗನೇ ಮನೆ ಸೇರಿಕೊಳ್ಳಿ ಎಂದು ಇನ್ಫೋಸಿಸ್ ಕಂಪನಿಯು ಪುಣೆಯಲ್ಲಿರುವ ತನ್ನ ಉದ್ಯೋಗಿಗಳಿಗೆ ತಾಕೀತು ಮಾಡಿದೆ. ಇದು ಬೇರೆ ನಗರಗಳಲ್ಲೂ ಇರುವ ಕಂಪನಿಯ ಕ್ಯಾಂಪಸ್ಸುಗಳಿಗೆ ಅನ್ವಯವಾಗುತ್ತದಾ/ ವಿಸ್ತರಣೆಯಾಗುತ್ತದಾ? ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಸದ್ಯಕ್ಕೆ ನಿರಾಶಾದಾಯಕ ಸ್ಥಿತಿ ತಲುಪಿರುವ ಇನ್ಫೋಸಿಸ್ ಟೆಕ್ನಾಲಜೀಸ್ ಕಂಪನಿ ಚುಕ್ಕಾಣಿಯನ್ನು ಮತ್ತೆ ತಮ್ಮ ಅಧೀನಕ್ಕೆ ತೆಗೆದುಕೊಂಡಿರುವ 'ಇನ್ಫಿ ದೊಡ್ಡಣ್ಣ' ಎನ್ ಆರ್ ನಾರಾಯಣ ಮೂರ್ತಿ ಅವರು ತಮ್ಮ ಉದ್ಯೋಗಳಿಗೆ ಈ ಹಿಂದೆ ಆತ್ಮೀಯ/ ಅರ್ಥಗರ್ಭಿತ ಪತ್ರ ಬರೆದು ಇಂತಹುದೇ ಶಿಷ್ಟಾಚಾರಗಳನ್ನು ಪಾಲಿಸಲು ಸೂಚಿಸಿದ್ದರು ಎನ್ನಲಾಗಿತ್ತು. ಆದರೆ ಅದು ಯಾರೋ ಕಿಡಿಗೇಡಿಗಳು ಕುಯುಕ್ತಿಯಿಂದ ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ್ದ ಪತ್ರವಾಗಿತ್ತು. (ಇನ್ಫಿ ಮೂರ್ತಿ ಉದ್ಯೋಗಿಗಳಿಗೆ ಬರೆದ ಪತ್ರದಲ್ಲೇನಿದೆ?)
ಆದರೆ ಇದೀಗ ಕಂಪನಿಯು ನಿಜವಾಗಿಯೂ ಇಂತಹುದೇ ಪತ್ರವನ್ನು ಪುಣೆ ಇನ್ಫೋಸಿಸ್ ಕ್ಯಾಂಪಸ್ಸಿನಲ್ಲಿ ಕಾರ್ಯನಿರತ ಟೆಕ್ಕಿಗಳಿಗೆ ಬರೆದಿದೆ. ಇನ್ಫೋಸಿಸ್ ತನ್ನ ಮಾನವ ಸಂಪನ್ಮೂಲ ನೀತಿಯಲ್ಲಿ late-stay policyಗೆ ತುಸು ಬದಲಾವಣೆ ತಂದಿದ್ದು, ರಾತ್ರಿಯೆಲ್ಲಾ ಕಚೇರಿಯಲ್ಲೇ ಉಳಿಯುವ ಮನಸು ಮಾಡಬೇಡಿ ಎಂದಿದೆ.
ಕಂಪನಿಯು ಈ ವಿಷಯವನ್ನು ಮೊನ್ನೆ ತನ್ನ ಉದ್ಯೋಗಿಗಳಿಗೆ ಇ-ಮೇಲ್ ಮೂಲಕ ತಿಳಿಸಿದೆ. ಕಂಪನಿಯ ಪೂನಾ ಕ್ಯಾಂಪಸ್ಸಿನಲ್ಲಿ ಲಭ್ಯವಿರುವ ಮನರಂಜನಾ ಸೌಲಭ್ಯಗಳನ್ನು ಇನ್ಮುಂದೆ ರಾತ್ರಿ 7.45ಕ್ಕೆಲ್ಲಾ ಬಂದ್ ಮಾಡಲಾಗುತ್ತದೆ. ಅಂದರೆ indoor/ outdoor games, gym ಮತ್ತು locker facilities ಸಹ ಬಂದ್ ಮಾಡಲಾಗುತ್ತದೆ. weekend timingsಗಳಲ್ಲೂ ಸಹ ಇಂತಹುದೇ ಮಾರ್ಪಾಡುಗಳಿರುತ್ತವೆ ಎಂದು ಕಂಪನಿ ಮೂಲಗಳು ಹೇಳಿವೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications