ಭಾರತದ ಬಹು ತರಂಗಾಂತರ ಉಪಗ್ರಹ 'AstroSat'ನಿಂದ ಅಪರೂಪದ ಆವಿಷ್ಕಾರ
ನವದೆಹಲಿ,ಆಗಸ್ಟ್ 25: ಭಾರತದ ಬಹುತರಂಗಾಂತರ ಉಪಗ್ರಹ ಆಸ್ಟ್ರೋಸ್ಯಾಟ್ 'AstroSat' ಅಪರೂಪದ ಆವಿಷ್ಕಾರವನ್ನು ಮಾಡಿದೆ.
ಇದು ಭೂಮಿಯಿಂದ 9.3 ಶತಕೋಟಿ ದೂರದಲ್ಲಿರುವ ನಕ್ಷತ್ರಪುಂಜದಿಂದ ನೇರಳಾತೀತ ಬೆಳಕನ್ನು ಪತ್ತೆ ಮಾಡಿದೆ.
ಐಯುಸಿಎಎ ಸಹಾಯಕ ಪ್ರಾಧ್ಯಾಪಕ ಡಾ.ಕನಕ್ ಸಹಾ ಮಾತನಾಡಿ, ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರವನ್ನು ಪ್ರಕಾಶ್ ವರ್ಷ ಎಂದು ಕರೆಯಲಾಗುತ್ತದೆ.
ಇದು ಸುಮಾರು 95 ಟ್ರಿಲಿಯನ್ ಕಿಲೋಮೀಟರ್ಗೆ ಸಮಾನವಾಗಿರುತ್ತದೆ ಎಂದಿದ್ದಾರೆ. ತೀವ್ರವಾದ ನೇರಳಾತೀತ ಕಿರಣಗಳನ್ನು ಹುಡುಕುವ ಜಾಗತಿಕ ತಂಡದ ನೇತೃತ್ವ ಡಾ. ಕನಕ್ ಸಹಾ ವಹಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಅವರ ತಂಡ ನಡೆಸಿರುವ ಈ ಸಂಶೋಧನೆಯನ್ನು ಆಗಸ್ಟ್ 24 ರ 'ನೇಚರ್ ಆಸ್ಟ್ರೋನಮಿ' ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ.

ಈ ತಂಡದಲ್ಲಿ ಯಾವ್ಯಾವ ದೇಶಗಳಿವೆ?
ಈ ತಂಡದಲ್ಲಿ ಭಾರತ, ಫ್ರಾನ್ಸ್,ಸ್ವಿಡ್ಜರ್ಲೆಂಡ್, ಅಮೆರಿಕ, ಜಪಾನ್ ಮತ್ತು ನೆದರ್ಲೆಂಡ್ ವಿಜ್ಞಾನಿಗಳು ಶಾಮೀಲಾಗಿದ್ದಾರೆ. ಈ ನೇರಳಾತೀತ ಕಿರಣಗಳು 2016 ರ ಅಕ್ಟೋಬರ್ ತಿಂಗಳಲ್ಲಿ ಸತತ 28 ದಿನಗಳವರೆಗೆ ಗೋಚರಿಸಿದ್ದವು. ಆದರೆ ಅವುಗಳನ್ನು ವಿಶ್ಲೇಷಿಸಲು ವಿಜ್ಞಾನಿಗಳಿಗೆ ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಕಾಲಾವಕಾಶ ಬೇಕಾಯಿತು.

ಬಾಹ್ಯಾಕಾಶದ ಕತ್ತಲೆಯ ಆಳದಲ್ಲಿ ಬೆಳಕಿನ ಕಿರಣಗಳು
ಈ ಕುರಿತು ಹೇಳಿಕೆ ನೀಡಿರುವ IUCAA ನಿರ್ದೇಶಕ ಡಾ. ಸೋಮಕ್ ರಾಯ್ ಚೌಧರಿ, ದೂರದ ಬಾಹ್ಯಾಕಾಶದ ಕತ್ತಲೆಯ ಆಳದಲ್ಲಿ ಇಂದಿಗೂ ಕೂಡ ಬೆಳಕಿನ ಕಿರಣಗಳು ತೆಲಾಡುತ್ತಿವೆ. ಅವುಗಳ ಹುಡುಕಾಟಕ್ಕೆ ನಮಗೆ ಕಾಲಾವಕಾಶ ಬೇಕು. ಆದರೆ, ಈ ಎಲ್ಲ ಮಾಹಿತಿಗಳ ಆಧಾರದ ಮೇಲೆ ಭೊಮಿ ಹಾಗೂ ಬಾಹ್ಯಾಕಾಶದ ಉಗಮದ ಆರಂಭ, ಅವುಗಳ ವಯಸ್ಸು ಹಾಗೂ ಅವುಗಳ ಸಂಭವನೀಯ ಅಂತ್ಯದ ದಿನಾಂಕಗಳನ್ನು ಪತ್ತೆಹಚ್ಚಬಹುದು ಎಂದು ಹೇಳಿದ್ದಾರೆ.

ಹೊಸ ನಕ್ಷತ್ರಗಳ ಸೃಷ್ಟಿ
ಕೆಲವು ಸಣ್ಣ-ಪುಟ್ಟ ಗ್ಯಾಲಕ್ಸಿಗಳು ಕ್ಷೀರಪಥದ ನಕ್ಷತ್ರಪುಂಜಕ್ಕಿಂತ 10-100 ಪಟ್ಟು ವೇಗದಲ್ಲಿ ಹೊಸ ನಕ್ಷತ್ರಗಳನ್ನು ಸೃಷ್ಟಿಸುತ್ತವೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಬ್ರಹ್ಮಾಂಡದ ಶತಕೋಟಿ ಗ್ಯಾಲಕ್ಸಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕ-ಚಿಕ್ಕ ಗೆಲಕ್ಸಿಗಳಿವೆ ಎಂದು ಎಂದು ಅವರು ವಿವರಿಸಿದ್ದಾರೆ, ಇದರ ದ್ರವ್ಯರಾಶಿ ಕ್ಷೀರಪಥದ ಗೆಲಕ್ಸಿಗಳಿಗಿಂತ 100 ಪಟ್ಟು ಕಡಿಮೆಯಾಗಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

ಗ್ಯಾಲೆಕ್ಸಿಗಳ ವಿಚಿತ್ರ ವರ್ತನೆ
ಎರಡು ಭಾರತೀಯ ದೂರದರ್ಶಕಗಳ ಮೂಲಕ ನಡೆಸಲಾಗಿರುವ ಈ ಅಧ್ಯಯನದಲ್ಲಿ ವಿಜ್ಞಾನಿಗಳು ಈ ಗ್ಯಾಲಕ್ಸಿಗಳ ವಿಚಿತ್ರ ವರ್ತನೆಯು ಅವುಗಳಲ್ಲಿ ಅಸ್ತವ್ಯಸ್ತಗೊಂಡ ಹೈಡ್ರೋಜನ್ ವಿತರಣೆ ಮತ್ತು ಗ್ಯಾಲಕ್ಸಿಗಳ ನಡುವಿನ ಘರ್ಷಣೆಯಿಂದಾಗಿ ಕಂಡುಬಂದಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಯಾವುದೇ ನಕ್ಷತ್ರದ ರಚನೆಗೆ ಹೈಡ್ರೋಜನ್ ಅತ್ಯಗತ್ಯ ಅಂಶವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಗ್ಯಾಲಕ್ಸಿಗಳಿಗೆ ಹೆಚ್ಚಿನ ಸಂಖ್ಯೆಯ ನಕ್ಷತ್ರಗಳನ್ನು ರೂಪಿಸಲು ಹೆಚ್ಚಿನ ಸಾಂಧ್ರತೆಯ ಹೈಡ್ರೋಜನ್ ಆವಶ್ಯಕವಾಗಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications