ಎವರೆಸ್ಟ್ ಹತ್ತಿದ್ದ ಚಂದಾ, ಕಾಂಚನಜುಂಗಾದಲ್ಲಿ ನಾಪತ್ತೆ
ಡಾರ್ಜಲಿಂಗ್, ಮೇ.22: ವಿಶ್ವದ ಅತಿ ಎತ್ತರದ ಪರ್ವತ ಎವರೆಸ್ಟ್ ಆರೋಹಣ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಚಂದಾ ಗಯೇನ್ ಅವರು ಕಾಂಚನಜುಂಗಾ ಪರ್ವತಾರೋಹಣ ವೇಳೆ ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ.
ಮೌಂಟ್ ಎವರೆಸ್ಟ್ ಏರಿದ ಎರಡನೇ ಮಹಿಳೆ ಎಂಬ ಸಾಹಸಕ್ಕೆ ಪಾತ್ರವಾಗಿದ್ದ ಚಂದಾ ಅವರು ಕಾಂಚನಜುಂಗಾ ಪರ್ವತಾರೋಹಣ ವೇಳೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಪ್ರಕಟಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೇಪಾಳ ಸರ್ಕಾರಕ್ಕೂ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿ ನೆರವು ಕೋರಿದ್ದಾರೆ.

ಚಂದಾ ಅವರ ಹುಡುಕಾಟಕ್ಕೆ ವಿಶೇಷ ಪಡೆ ಬಳಸಿಕೊಳ್ಳಲಾಗುತ್ತಿದ್ದು, ರಕ್ಷಣಾ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ ಎಂದು ವಸತಿ ಸಚಿವ ಅರುಪ್ ಬಿಸ್ವಾಸ್ ಅವರು ಕೋಲ್ಕತ್ತಾದಲ್ಲಿ ಹೇಳಿದ್ದಾರೆ. ಗಯೇನ್ ಅವರು ಇಬ್ಬರು ಶೆರ್ಪಾಗಳ ಜತೆ ಕಾಂಚನಜುಂಗಾ ಪರ್ವತ ಹತ್ತಲು ಆರಂಭಿಸಿದ್ದರು. ಸಮುದ್ರಮಟ್ಟದಿಂದ ಸುಮಾರು 28,169 ಅಡಿ ಎತ್ತರದಲ್ಲಿರುವ ಕಾಂಚನಜುಂಗಾದಲ್ಲಿ ಐದು ಶ್ರೇಣಿಗಳಿದ್ದು ಭಾರತದ ಸಿಕ್ಕಿಂ ಹಾಗೂ ನೇಪಾಳದ ಟಾಪಲ್ ಜುಂಗ್ ಜಿಲ್ಲೆಗಳಿಗೆ ಸೇರುತ್ತದೆ. ಮೌಂಟ್ ಎವೆರೆಸ್ಟ್ ಎತ್ತರವನ್ನು ಅಳೆಯುವುದಕ್ಕೂ ಮೊದಲು ಕಾಂಚನಜುಂಗಾವನ್ನೇ ವಿಶ್ವದ ಅತಿ ಎತ್ತರ ಪರ್ವತ ಎಂದು ಪರಿಗಣಿಸಲಾಗುತ್ತಿತ್ತ್ತು.
2013ರ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಿಂದ ಮೌಂಟ್ ಎವರೆಸ್ಟ್ ಏರಿದ ಎರಡನೇ ಮಹಿಳೆ ಎಂಬ ಗೌರವಕ್ಕೆ ಚಂದಾ ಗಯೇನ್ ಅವರು ಪಾತ್ರವಾಗಿದ್ದರು. ಇದಕ್ಕೂ ಮುನ್ನ 1993 ಮೇ 22 ರಂದು ದಾರ್ಜಲಿಂಗ್ ಮೂಲದ ಕುಂಗಾ ಭೂತಿಯಾ ಅವರು ಮೊದಲ ಬಾರಿಗೆ ವಿಶ್ವದ ಅತಿ ಎತ್ತರದ ಪರ್ವತ ಶ್ರೇಣಿಯ ಮೇಲೆ ಕಾಲೂರಿ ದಾಖಲೆ ಬರೆದಿದ್ದರು.
ಕಾಂಚನಜುಂಗಾ ಪರ್ವತಾರೋಹಣ ವಿಷಯಕ್ಕೆ ಬಂದರೆ , 1955ರಲ್ಲಿ, ಜೋ ಬ್ರೌನ್ ಮತ್ತು ಜಾರ್ಜ್ ಬ್ಯಾಂಡ್ರು ಮೇ 25ರಂದು ಮೊಟ್ಟಮೊದಲ ಬಾರಿಗೆ ಪಾದಾರ್ಪಣೆ ಮಾಡಿದರು. 1998ರಲ್ಲಿ ಜಿನೆಟ್ಟೆ ಹ್ಯಾರಿಸನ್ ಶಿಖರವನ್ನು ತಲುಪಿದ ಪ್ರಥಮ ಮಹಿಳೆಯಾಗಿದ್ದಾರೆ. ನಂತರ ಸ್ಪೇನ್, ನಾರ್ವೆ, ಪೊಲೆಂಡ್ ನ ಮಹಿಳೆಯರು ಪರ್ವತದ ಸಮೀಟ್ ಪೂರ್ಣಗೊಳಿಸಿದ್ದಾರೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications