ಸುರಕ್ಷತೆ ಮತ್ತು ಕಿರಿಕಿರಿರಹಿತ ಪ್ರಯಾಣವೇ ರೈಲ್ವೆ ಇಲಾಖೆಯ ಗುರಿ
ನವದೆಹಲಿ, ಅಕ್ಟೋಬರ್ 24 : ಭಾರತದ ರೈಲಿನಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಕಿರಿಕಿರಿ ರಹಿತವಾದ ಪ್ರಯಾಣವನ್ನು ಕಲ್ಪಿಸುವುದೇ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಮೂಲ ಉದ್ದೇಶವಾಗಿದೆ.
ಈ ಪ್ರಯತ್ನದ ಫಲಶ್ರುತಿಯಾಗಿ, 2014ರಿಂದೀಚೆಗೆ ಹಲವಾರು ರೈಲು ಅಪಘಾತಗಳು ಸಂಭವಿಸಿದ್ದರೂ, 2017-18ರಲ್ಲಿ ಅಪಘಾತಗಳ ಸಂಖ್ಯೆ 73ಕ್ಕೆ ಇಳಿದಿದೆ. 2013-14ರಲ್ಲಿ 118 ರೈಲು ಅಪಘಾತಗಳು ಸಂಭವಿಸಿದ್ದರೆ, 2017-18ರಲ್ಲಿ ಕೇವಲ 73 ರೈಲು ಅಪಘಾತಗಳು ಸಂಭವಿಸಿವೆ.
ಇದರ ಜೊತೆಗೆ, ಹಳೆಯ ಹಳಿಗಳನ್ನು ನಿರ್ವಹಿಸುವ ಮತ್ತು ಬದಲಾಯಿಸುವ ಕ್ರಿಯೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 2013-14ರಿಂದೀಚೆಗೆ ಶೇ.50ರಷ್ಟು ಹಳೆಯ ಹಳಿಗಳನ್ನು ಬದಲಾಯಿಸಲಾಗಿದೆ. 2013-14ರಲ್ಲಿ 2,926 ಕಿ.ಮೀ.ನಷ್ಟು ಹಳಿಗಳನ್ನು ಬದಲಾಯಿಸಲಾಗಿದ್ದರೆ, 2017-18ರಲ್ಲಿ 4,405 ಕಿ.ಮೀ.ನಷ್ಟು ಹಳೆಯ ಹಳಿಗಳು ಬದಲಾಗಿ ಹೊಸ ಹಳಿಗಳು ಬಂದಿವೆ.

ಸಿಗ್ನಲ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿದ್ದರಿಂದ ದೇಶದ ರಾಜಧಾನಿ ದೇಹಲಿ ಮತ್ತು ಹೌರಾ ನಡುವೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ಮತ್ತು ಪಟ್ನಾ ಮತ್ತು ದೆಹಲಿ-ಅಮೃತಸರ ನಡುವೆ ಸಂಚರಿಸುವ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಸೇರಿದಂತೆ 14 ಪ್ರಮುಖ ರೈಲುಗಳ ಸಂಚಾರ ಸಮಯವನ್ನು ಕಡಿಮೆಗೊಳಿಸಲಾಗಿದೆ.
ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದ್ದರಿಂದ ಮತ್ತು ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದರಿಂದ 2016ರಲ್ಲಿ 350 ಮೇಲ್/ಎಕ್ಸ್ ಪ್ರೆಸ್, 74 ಸೂಪರ್ ಫಾಸ್ಟ್ ರೈಲು, ರಾಜಧಾನಿ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ಗಳು ತಮ್ಮ ಗಮ್ಯವನ್ನು ತಲುಪಬೇಕಾದ ಅವಧಿಗಿಂತ 5ರಿಂದ 25 ನಿಮಿಷಗಳೊಳಗೆ ತಲುಪುತ್ತಿವೆ.
ಪ್ರಸ್ತುತ ವರ್ಷ, ರೈಲ್ವೆ ಇಲಾಖೆ 'ಟ್ರೈನ್ಸ್ ಅಟ್ ಎ ಗ್ಲಾನ್ಸ್ (ಟಿಎಜಿ)' ಎಂಬ ಅಖಿಲ ಭಾರತ ಸಮಗ್ರ ರೈಲ್ವೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು 2018ರ ಆಗಸ್ಟ್ 15ರಿಂದ ಜಾರಿಗೆ ಬಂದಿದೆ. ಇದರ ಜೊತೆಗೆ, ಎಲ್ಲ 17 ಪ್ರಾಂತೀಯ ರೈಲ್ವೆ ಕೇಂದ್ರಗಳು ಪ್ರತ್ಯೇಕವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿವೆ.
2017-18ರಲ್ಲಿ ಒಟ್ಟು 90 ಹೊಸ ಸೇವೆಗಳನ್ನು ಆರಂಭಿಸಲಾಗಿದೆ. ಆಗಸ್ಟ್ 15ರಿಂದ 35 ಹೊಸ ಸೇವೆಗಳನ್ನು ಜಾರಿಗೆ ತರಲಾಗಿದೆ ಮತ್ತು 28 ಸೇವೆಗಳನ್ನು ವಿಸ್ತರಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲತೆಗಳಾಗಿವೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications