ರೈಲ್ವೆ ಇಲಾಖೆಯಿಂದ ಪ್ರಮುಖ ನಿರ್ಧಾರ: ವಿವಿಧ ವಿಭಾಗಗಳ ವಿಲೀನ
ನವದೆಹಲಿ, ಡಿಸೆಂಬರ್ 24: ವಿವಿಧ ಇಲಾಖೆಗಳ ನಡುವಿನ ಗುದ್ದಾಟ ಮತ್ತು ಅಸಹಕಾರದ ಸಮಸ್ಯೆಗಳನ್ನು ಗಮನಿಸಿರುವ ಭಾರತೀಯ ರೈಲ್ವೆ ತನ್ನ ಎಲ್ಲ ವಿಭಾಗಗಳನ್ನೂ ಒಂದೇ ಸೂರಿನಡಿ ವಿಲೀನಗೊಳಿಸುವ ಮತ್ತು ಸುಧಾರಣೆ ಮಾಡುವ ನಿರ್ಧಾರವನ್ನು ಕೊನೆಗೂ ತೆಗೆದುಕೊಂಡಿದೆ. ವಿಭಾಗಗಳ ಈ ವಿಲೀನ ಪ್ರಕ್ರಿಯೆಯಿಂದ ಆರೋಗ್ಯ ಮತ್ತು ಭದ್ರತಾ ವಿಭಾಗಗಳನ್ನು ಹೊರತಾಗಿಸಿದೆ.
ಭಾರತೀಯ ರೈಲ್ವೆಯು ಈ ನಿರ್ಧಾರದಿಂದ 'ಭಾರತೀಯ ರೈಲ್ವೆ ಸೇವೆ' ಎಂಬ ಏಕೈಕ ವಿಭಾಗವನ್ನು ಹೊಂದಲಿದೆ. ಇದುವರೆಗೂ ಎಂಜಿನಿಯರಿಂಗ್, ಸಂಚಾರ, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಸೇರಿದಂತೆ ಎಂಟು ವಿವಿಧ ಸೇವಾ ವಿಭಾಗಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ.
ಈ ಹೊಸ ವಿಲೀನ ನಿರ್ಧಾರದೊಳಗೆ ರೈಲ್ವೆ ರಕ್ಷಣಾ ದಳ ಮತ್ತು ವೈದ್ಯಕೀಯ ಸೇವಾ ಇಲಾಖೆಗಳಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಈ ನಿರ್ಧಾರವನ್ನು ಕೇಂದ್ರ ಸಂಪುಟದ ಅನುಮೋದನೆಗೆ ಕಳುಹಿಸಲಾಗಿದೆ.

ರೈಲ್ವೆ ಬಜೆಟ್ಅನ್ನು ಕೇಂದ್ರ ಬಜೆಟ್ ಜತೆ ವಿಲೀನಗೊಳಿಸಿದ ಬಳಿಕ, ವಿವಿಧ ವಿಭಾಗಗಳ ವಿಲೀನವು ರೈಲ್ವೆ ಇಲಾಖೆಯಲ್ಲಿನ ಬ್ರಿಟಿಷರ ಕಾಲದ ಪದ್ಧತಿಯಿಂದ ಬಹು ದೊಡ್ಡ ಬದಾವಣೆಯ ಪ್ರಕ್ರಿಯೆಯಾಗಿದೆ.
ಇದರ ಜತೆಗೆ ರೈಲ್ವೆ ಮಂಡಳಿಯಲ್ಲಿಯೂ ಬದಲಾವಣೆ ತರಲಾಗುತ್ತಿದೆ. ರೈಲ್ವೆ ಮಂಡಳಿಯು ಪ್ರಸ್ತುತ ಸಂಚಾರ, ರೋಲಿಂಗ್ ಸ್ಟಾಕ್, ಟ್ರ್ಯಾಕ್ಷನ್ ಮತ್ತು ಎಂಜಿನಿಯರ್ ಮುಂತಾದವುಗಳಿಗಾಗಿ ಒಟ್ಟು ಎಂಟು ಸದಸ್ಯರನ್ನು ಹೊಂದಿತ್ತು. ಈ ಸದಸ್ಯರ ಸಂಖ್ಯೆಯನ್ನು ಐದಕ್ಕೆ ಇಳಿಸಲಾಗಿದೆ. ಇನ್ನು ಮುಂದೆ ಕಾರ್ಯಾಚರಣೆ, ಬಿಜಿನೆಸ್ ಅಭಿವೃದ್ಧಿ, ಮಾನ ಸಂಪನ್ಮೂಲ, ಮೂಲಸೌಕರ್ಯ ಮತ್ತು ಹಣಕಾಸು ಸದಸ್ಯರನ್ನು ಮಾತ್ರ ಮಂಡಳಿ ಹೊಂದಿರಲಿದೆ.
ರೈಲ್ವೆ ಮಂಡಳಿಯ ಅಧ್ಯಕ್ಷ ಸ್ಥಾನವು ಮುಂದುವರಿಯಲಿದ್ದರೂ, ಇಲಾಖೆಯಿಂದ ಹೊರಗಿರುವ ನಾಗರಿಕ ಸೇವೆ ಅಥವಾ ಮಾರುಕಟ್ಟೆಯ ಪರಿಣತರು ಈ ಸ್ಥಾನದಲ್ಲಿ ಕೂರುವ ಸಾಧ್ಯತೆ ಇದೆ. ಆದರೆ ವಿವಿಧ ವಿಭಾಗಗಳನ್ನು ಒಂದೇ ವೇದಿಕೆಯಡಿ ವಿಲೀನಗೊಳಿಸುವುದರಿಂದ ಇಲಾಖೆಯ ಪರಿಣಾಮಕಾರಿ ಕಾರ್ಯನಿರ್ವಹಣೆಯ ಅವಕಾಶದ ಬಗ್ಗೆ ಅನೇಕರು ಪ್ರಶ್ನೆ ಎತ್ತಿದ್ದಾರೆ.
ಎರಡು ವಿಭಿನ್ನ ರೀತಿಯ ವಿಭಾಗಗಳನ್ನು ಹೇಗೆ ವಿಲೀನಗೊಳಿಸಲು ಸಾಧ್ಯ? ಇದರಿಂದ ಉದ್ಯೋಗಿಗಳ ಭವಿಷ್ಯಕ್ಕೆ ಸಂಚಕಾರ ಎದುರಾಗಲಿದೆಯೇ? ಎಂಜಿನಿಯರಿಂಗ್, ಮೆಕ್ಯಾನಿಕಲ್, ವಿದ್ಯನ್ಮಾನ ಘಟಕಗಳಲ್ಲಿನ ಸಂಚಾರ, ಅಕೌಂಟ್ಸ್, ಸಿಬ್ಬಂದಿ ಸೇವೆಗಳಿಗೆ ಅನನುಕೂಲವಾಗುವ ಸಾಧ್ಯತೆ ಹೆಚ್ಚು ಎಂಬ ಕಳವಳಗಳು ವ್ಯಕ್ತವಾಗಿವೆ.
-
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
New Railway Line: 6000 ಕಿಮೀ ರೈಲ್ವೆ ಜಾಲ ವಿಸ್ತರಣೆ, 100 ಯೋಜನೆಗಳ ಜಾರಿಗೆ ₹1.53 ಲಕ್ಷ ಕೋಟಿ ಹೂಡಿಕೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ












Click it and Unblock the Notifications