ರೈಲ್ವೆ ಇಲಾಖೆಯಿಂದ ಪ್ರಮುಖ ನಿರ್ಧಾರ: ವಿವಿಧ ವಿಭಾಗಗಳ ವಿಲೀನ
ನವದೆಹಲಿ, ಡಿಸೆಂಬರ್ 24: ವಿವಿಧ ಇಲಾಖೆಗಳ ನಡುವಿನ ಗುದ್ದಾಟ ಮತ್ತು ಅಸಹಕಾರದ ಸಮಸ್ಯೆಗಳನ್ನು ಗಮನಿಸಿರುವ ಭಾರತೀಯ ರೈಲ್ವೆ ತನ್ನ ಎಲ್ಲ ವಿಭಾಗಗಳನ್ನೂ ಒಂದೇ ಸೂರಿನಡಿ ವಿಲೀನಗೊಳಿಸುವ ಮತ್ತು ಸುಧಾರಣೆ ಮಾಡುವ ನಿರ್ಧಾರವನ್ನು ಕೊನೆಗೂ ತೆಗೆದುಕೊಂಡಿದೆ. ವಿಭಾಗಗಳ ಈ ವಿಲೀನ ಪ್ರಕ್ರಿಯೆಯಿಂದ ಆರೋಗ್ಯ ಮತ್ತು ಭದ್ರತಾ ವಿಭಾಗಗಳನ್ನು ಹೊರತಾಗಿಸಿದೆ.
ಭಾರತೀಯ ರೈಲ್ವೆಯು ಈ ನಿರ್ಧಾರದಿಂದ 'ಭಾರತೀಯ ರೈಲ್ವೆ ಸೇವೆ' ಎಂಬ ಏಕೈಕ ವಿಭಾಗವನ್ನು ಹೊಂದಲಿದೆ. ಇದುವರೆಗೂ ಎಂಜಿನಿಯರಿಂಗ್, ಸಂಚಾರ, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಸೇರಿದಂತೆ ಎಂಟು ವಿವಿಧ ಸೇವಾ ವಿಭಾಗಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ.
ಈ ಹೊಸ ವಿಲೀನ ನಿರ್ಧಾರದೊಳಗೆ ರೈಲ್ವೆ ರಕ್ಷಣಾ ದಳ ಮತ್ತು ವೈದ್ಯಕೀಯ ಸೇವಾ ಇಲಾಖೆಗಳಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಈ ನಿರ್ಧಾರವನ್ನು ಕೇಂದ್ರ ಸಂಪುಟದ ಅನುಮೋದನೆಗೆ ಕಳುಹಿಸಲಾಗಿದೆ.

ರೈಲ್ವೆ ಬಜೆಟ್ಅನ್ನು ಕೇಂದ್ರ ಬಜೆಟ್ ಜತೆ ವಿಲೀನಗೊಳಿಸಿದ ಬಳಿಕ, ವಿವಿಧ ವಿಭಾಗಗಳ ವಿಲೀನವು ರೈಲ್ವೆ ಇಲಾಖೆಯಲ್ಲಿನ ಬ್ರಿಟಿಷರ ಕಾಲದ ಪದ್ಧತಿಯಿಂದ ಬಹು ದೊಡ್ಡ ಬದಾವಣೆಯ ಪ್ರಕ್ರಿಯೆಯಾಗಿದೆ.
ಇದರ ಜತೆಗೆ ರೈಲ್ವೆ ಮಂಡಳಿಯಲ್ಲಿಯೂ ಬದಲಾವಣೆ ತರಲಾಗುತ್ತಿದೆ. ರೈಲ್ವೆ ಮಂಡಳಿಯು ಪ್ರಸ್ತುತ ಸಂಚಾರ, ರೋಲಿಂಗ್ ಸ್ಟಾಕ್, ಟ್ರ್ಯಾಕ್ಷನ್ ಮತ್ತು ಎಂಜಿನಿಯರ್ ಮುಂತಾದವುಗಳಿಗಾಗಿ ಒಟ್ಟು ಎಂಟು ಸದಸ್ಯರನ್ನು ಹೊಂದಿತ್ತು. ಈ ಸದಸ್ಯರ ಸಂಖ್ಯೆಯನ್ನು ಐದಕ್ಕೆ ಇಳಿಸಲಾಗಿದೆ. ಇನ್ನು ಮುಂದೆ ಕಾರ್ಯಾಚರಣೆ, ಬಿಜಿನೆಸ್ ಅಭಿವೃದ್ಧಿ, ಮಾನ ಸಂಪನ್ಮೂಲ, ಮೂಲಸೌಕರ್ಯ ಮತ್ತು ಹಣಕಾಸು ಸದಸ್ಯರನ್ನು ಮಾತ್ರ ಮಂಡಳಿ ಹೊಂದಿರಲಿದೆ.
ರೈಲ್ವೆ ಮಂಡಳಿಯ ಅಧ್ಯಕ್ಷ ಸ್ಥಾನವು ಮುಂದುವರಿಯಲಿದ್ದರೂ, ಇಲಾಖೆಯಿಂದ ಹೊರಗಿರುವ ನಾಗರಿಕ ಸೇವೆ ಅಥವಾ ಮಾರುಕಟ್ಟೆಯ ಪರಿಣತರು ಈ ಸ್ಥಾನದಲ್ಲಿ ಕೂರುವ ಸಾಧ್ಯತೆ ಇದೆ. ಆದರೆ ವಿವಿಧ ವಿಭಾಗಗಳನ್ನು ಒಂದೇ ವೇದಿಕೆಯಡಿ ವಿಲೀನಗೊಳಿಸುವುದರಿಂದ ಇಲಾಖೆಯ ಪರಿಣಾಮಕಾರಿ ಕಾರ್ಯನಿರ್ವಹಣೆಯ ಅವಕಾಶದ ಬಗ್ಗೆ ಅನೇಕರು ಪ್ರಶ್ನೆ ಎತ್ತಿದ್ದಾರೆ.
ಎರಡು ವಿಭಿನ್ನ ರೀತಿಯ ವಿಭಾಗಗಳನ್ನು ಹೇಗೆ ವಿಲೀನಗೊಳಿಸಲು ಸಾಧ್ಯ? ಇದರಿಂದ ಉದ್ಯೋಗಿಗಳ ಭವಿಷ್ಯಕ್ಕೆ ಸಂಚಕಾರ ಎದುರಾಗಲಿದೆಯೇ? ಎಂಜಿನಿಯರಿಂಗ್, ಮೆಕ್ಯಾನಿಕಲ್, ವಿದ್ಯನ್ಮಾನ ಘಟಕಗಳಲ್ಲಿನ ಸಂಚಾರ, ಅಕೌಂಟ್ಸ್, ಸಿಬ್ಬಂದಿ ಸೇವೆಗಳಿಗೆ ಅನನುಕೂಲವಾಗುವ ಸಾಧ್ಯತೆ ಹೆಚ್ಚು ಎಂಬ ಕಳವಳಗಳು ವ್ಯಕ್ತವಾಗಿವೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications