Operation Sindoor: ಕರಾಚಿ ಮೇಲೆ ದಾಳಿ ಮಾಡಲು ಸಜ್ಜಾಗಿದ್ದ ಭಾರತೀಯ ನೌಕಾಪಡೆ
ಭಾರತ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ಮಾಡಲು ಆರಂಭಿಸಿದಾಗ ಭಾರತೀಯ ನೌಕಾಪಡೆಯು ಸಂಪೂರ್ಣವಾಗಿ ಸನ್ನದ್ಧವಾಗಿತ್ತು ಮತ್ತು ಕರಾಚಿ ಸೇರಿದಂತೆ ಸಮುದ್ರ ಮತ್ತು ಭೂಮಿಯ ಮೇಲಿನ ಹಲವು ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡಲು ಸಂಪೂರ್ಣವಾಗಿ ಸಮರ್ಥವಾಗಿತ್ತು ಎಂದು ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಭಾನುವಾರ ಮಾಹಿತಿ ನೀಡಿದ್ದಾರೆ.
ನಮ್ಮ ಪಡೆಗಳು ಅರೇಬಿಯನ್ ಸಮುದ್ರದಲ್ಲಿ ಸರಿಯಾದ ಸ್ಥಳದಲ್ಲಿ ನಿಯೋಜಿಸಲ್ಪಟ್ಟಿದ್ದವು, ನಾವು ಆಯ್ಕೆ ಮಾಡಿದ ಸಮಯದಲ್ಲಿ ಕರಾಚಿ ಸೇರಿದಂತೆ ಸಮುದ್ರ ಮತ್ತು ಭೂಮಿಯಲ್ಲಿನ ಆಯ್ದ ಕಡೆಗಳಲ್ಲಿ ದಾಳಿ ಮಾಡಲು ಸಂಪೂರ್ಣವಾಗಿ ಸಜ್ಜಾಗಿದ್ದವು ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಆಪರೇಷನ್ ಸಿಂಧೂರ್ ಕುರಿತು ಮೂರು ಪಡೆಗಳ ಜಂಟಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಏಪ್ರಿಲ್ 22 ರಂದು 26 ನಾಗರಿಕರ ಜೀವವನ್ನು ಬಲಿತೆಗೆದುಕೊಂಡ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಒಳಗೆ ಭಯೋತ್ಪಾದಕ ಅಡಗುತಾಣಗಳ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. ಸೇನೆ ಮತ್ತು ವಾಯುಪಡೆಯು ವಾಯು ಮತ್ತು ನೆಲದಿಂದ ದಾಳಿ ಮಾಡಿದ್ದು ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ನಾಶಪಡಿಸಿದೆ.
ನೌಕಾಪಡೆಯನ್ನು ಕೂಡ ದಾಳಿಗೆ ಸಜ್ಜಾಗಿರಿಸಲಾಗಿತ್ತು, ಭಾರತೀಯ ನೌಕಾಪಡೆಯು ಈ ಅವಧಿಯ ಉದ್ದಕ್ಕೂ ಸರಾಗವಾದ ಕಡಲ ಕ್ಷೇತ್ರದಲ್ಲಿ ಜಾಗೃತವಾಗಿತ್ತು. ಪಾಕಿಸ್ತಾನಿ ಘಟಕಗಳ ಸ್ಥಳಗಳು ಮತ್ತು ಚಲನೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ರವಾನಿಸಿತ್ತು ಎಂದು ಅವರು ಹೇಳಿದರು.
ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಅವರು ಪಾಕಿಸ್ತಾನದ ಆಕ್ರಮಣಕ್ಕೆ ಭಾರತದ ಪ್ರತಿಕ್ರಿಯೆಯನ್ನು ನೀಡಲಾಗಿದೆ, ಜವಾಬ್ದಾರಿಯುತವಾಗಿ ದಾಲಿ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಪಹಲ್ಗಾಮ್ ದಾಳಿಯ ನಂತರ, ಸರ್ಕಾರವು ಅಪರಾಧಿಗಳಿಗೆ ಊಹಿಸಲಾಗದ ಶಿಕ್ಷೆಯ ಪ್ರತಿಜ್ಞೆ ಮಾಡಿದ ನಂತರ, ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ ಲೈವ್-ಫೈರಿಂಗ್ ಕವಾಯತುಗಳು, ಉಡಾವಣಾ ಪರೀಕ್ಷೆಗಳು ಮತ್ತು ಯುದ್ಧ ಕಾರ್ಯಾಚರಣೆಯ ಕವಾಯತುಗಳನ್ನು ನಡೆಸಿತು.
ಭಯೋತ್ಪಾದಕ ದಾಳಿಯ 96 ಗಂಟೆಗಳ ಒಳಗೆ, ಅರೇಬಿಯನ್ ಸಮುದ್ರದಲ್ಲಿ ಬಹು ಶಸ್ತ್ರಾಸ್ತ್ರ ಗುಂಡಿನ ದಾಳಿಯ ಸಮಯದಲ್ಲಿ ನೌಕಾಪಡೆಯು ಸಮುದ್ರದಲ್ಲಿ ತಂತ್ರಗಳು ಮತ್ತು ಕಾರ್ಯವಿಧಾನಗಳನ್ನು ಪರೀಕ್ಷಿಸಿತು ಮತ್ತು ಪರಿಷ್ಕರಿಸಿತು, ಆಯ್ದ ಗುರಿಗಳ ಮೇಲೆ ನಿಖರವಾಗಿ ವಿವಿಧ ಶಸ್ತ್ರಾಸ್ತ್ರಗಳನ್ನು ತಲುಪಿಸಲು ಸಿಬ್ಬಂದಿ, ಶಸ್ತ್ರಾಸ್ತ್ರ, ಉಪಕರಣಗಳು ಮತ್ತು ವೇದಿಕೆಯ ಸಿದ್ಧತೆಯನ್ನು ಮರುಮೌಲ್ಯಮಾಪನ ಮಾಡಿತು ನೌಕಾಪಡೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಯಿತು, ಭಾರತವು ಪ್ರತೀಕಾರದ ಕ್ರಮಗಳನ್ನು ತೆಗೆದುಕೊಂಡಿತು. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು, ರಾಜತಾಂತ್ರಿಕ ಸಂಬಂಧಗಳನ್ನು ಮುರಿಯುವುದು, ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸುವುದು, ಪಾಕಿಸ್ತಾನಿ ವಿಮಾನಗಳಿಗೆ ಭಾರತೀಯ ವಾಯುಪ್ರದೇಶವನ್ನು ಮುಚ್ಚುವುದು, ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದು, ಆಪರೇಷನ್ ಸಿಂಧೂರದ ಮೂಲಕ ಮಿಲಿಟರಿ ಪ್ರತೀಕಾರದ ಜೊತೆಗೆ ಪಾಕಿಸ್ತಾನವನ್ನು ಆರ್ಥಿಕವಾಗಿ ಮತ್ತು ಜಾಗತಿಕವಾಗಿ ಕುಗ್ಗಿಸಿದೆ.












Click it and Unblock the Notifications