ಟೈಮ್ ಲೈನ್ : ವಿದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ
ಬೆಂಗಳೂರು, ಅ.28: ವಿದೇಶದಲ್ಲಿರುವ ಅನೇಕ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಭಾರತೀಯರು ತೆರಿಗೆ ವಂಚಿಸಿ ಅಕ್ರಮವಾಗಿ ಹಣ ಸಂಗ್ರಹಿಸಿರುವ ಪ್ರಕರಣಕ್ಕೆ ಸೋಮವಾರ ಮಹತ್ವದ ತಿರುವು ಸಿಕ್ಕಿತ್ತು. ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದೇ ಮೊದಲ ಬಾರಿಗೆ ತೆರಿಗೆ ವಂಚಕ ಖಾತೆದಾರರ ಹೆಸರುಗಳನ್ನು ಬಹಿರಂಗಗೊಳಿಸಿತು.
ಕಪ್ಪು ಹಣ ವಾಪಸ್ ಪ್ರಕರಣದ ತನಿಖೆಯಲ್ಲಿ ಕಾಂಗ್ರೆಸ್ಸಿನ ನಾಲ್ವರು ನಾಯಕರ ಹೆಸರು ಇದೆ ಎಂಬುದು ಈಗ ಸ್ಪಷ್ಟವಾಗಿದೆ. ಈ ಪೈಕಿ ಮನಮೋಹನ್ ಸಿಂಗ್ ಅವರ ಅಧಿಕಾರ ಅವಧಿಯಲ್ಲಿ ಸಚಿವರಾಗಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಕಾಂಗ್ರೆಸ್ ನಾಯಕರ ಹೆಸರು ಇದೆ ಎಂಬ ಸುದ್ದಿಯಿದೆ. [ಕಪ್ಪು ಹಣ ಖಾತೆದಾರರ ಹೆಸರು ಬಹಿರಂಗ]
ಆದರೆ, ಸದ್ಯಕ್ಕೆ ಎನ್ ಡಿಎ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಟಿಂಬ್ಲೋ ಕಂಪನಿಯ ರಾಧಾ ಸೇರಿದಂತೆ ನಾಲ್ವರು, ಡಾಬರ್ ನ ಪ್ರದೀಪ್ ಬರ್ಮನ್ ಹಾಗೂ ಷೇರು ಮಾರುಕಟ್ಟೆ ತಜ್ಞ ಪಂಕಜ್ ಚಿಮನ್ ಲಾಲ್ ಲೋಧಿಯಾ ಹೆಸರು ಸೇರಿ ಒಟ್ಟು 7 ಜನರಿದ್ದಾರೆ.
2009ರಲ್ಲಿ ವಿದೇಶದ ಬ್ಯಾಂಕುಗಳಿಂದ ಕಪ್ಪು ಹಣ ವಾಪಸ್ ತರುವ ವಿಚಾರದಲ್ಲಿ ಕೋರ್ಚ್ ವಿಚಾರಣೆಗೆ ಚಾಲನೆ ಸಿಕ್ಕಿತು. ಆದರೆ, ಕಪ್ಪು ಹಣದ ಬಗ್ಗೆ ಮೊಟ್ಟ ಮೊದಲ ಬಾರಿಗೆ ಸುದ್ದಿ ಲೀಕ್ ಆಗಿದ್ದು ಸ್ವಿಸ್ ಮ್ಯಾಗಜೀನ್ ನಿಂದ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿನಿಂದ ಈ ಕಪ್ಪು ಹಣ ಹೊಂದಿರುವ ಭಾರಿ ಕುಳಗಳ ಚರಿತ್ರೆ ಶುರುವಾಗುತ್ತದೆ. ಈ ಪ್ರಕರಣದ ಟೈಮ್ ಲೈನ್ ಇಂತಿದೆ:

ನವೆಂಬರ್ 1991: ಸ್ವಿಸ್ ಮ್ಯಾಗಜೀನ್ ಸ್ಕವೆಜರ್ ಇಲೆಸ್ಟ್ರೇಟ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರು ಸೇರಿದಂತೆ 14 ಜನ ರಾಜಕಾರಣಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಸ್ವಿಸ್ ಬ್ಯಾಂಕ್ ನಲ್ಲಿ 2.2 ಬಿಲಿಯನ್ ಡಾಲರ್ ಮೊತ್ತದ ಹಣವನ್ನು ರಾಜೀವ್ ಗಾಂಧಿ ಇರಿಸಿದ್ದರು ಎಂದು ವರದಿ ಮಾಡಲಾಗಿತ್ತು.
2009: ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ, ಕಪ್ಪು ಹಣ ವಾಪಸ್ ತರುವ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ಪ್ರಶ್ನಿಸಿದರು.[ಮೊದಲ ಮೂವರು ಉದ್ಯಮಿಗಳ ವಿವರ]
ಫೆಬ್ರವರಿ 2011 : 'Indian Black Money Abroad in Secret Banks and Tax Havens' ಹೆಸರಿನಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕಿರು ಹೊತ್ತಿಗೆ ಪ್ರಕಟಿಸಿತ್ತು. ಇದರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅಕೆ ಪತಿ ರಾಜೀವ್ ಗಾಂಧಿ ಹೆಸರು ಉಲ್ಲೇಖಿಸಲಾಗಿತ್ತು.
ಜೂನ್ 2011 : ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿದೇಶದಲ್ಲಿರುವ ಕಪ್ಪು ಹಣದ ಅಂದಾಜು ಲೆಕ್ಕಾಚಾರ (89.16 ಬಿಲಿಯನ್ ಡಾಲರ್) ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು. ಅದರೆ, ಕಪ್ಪು ಹಣ ವಾಪಸ್ ತರುವ ಬಗ್ಗೆ ಮೊದಲ ಬಾರಿಗೆ ಹೇಳಿಕೆ ನೀಡಿದ್ದರು.
* ಆಗಿನ ಸಿಬಿಡಿಟಿ ಚೇರ್ಮನ್ ಎಂ.ಸಿ ಜೋಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಕಪ್ಪುಹಣ ನಿಯಂತ್ರಣದ ಬಗ್ಗೆ ನಿಗಾ ಇರಿಸುವಂತೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸೂಚಿಸಿದ್ದರು.
ನವೆಂಬರ್ 2011: ಕಪ್ಪು ಹಣ ವಿರುದ್ಧ ಜಾಗತಿಕ ಸಮರ ಸಾರಿರುವುದಾಗಿ ಜಿ20 ಶೃಂಗಸಭೆಯಲ್ಲಿ ಭಾರತ ಹೇಳಿಕೆ ನೀಡಿತು. ತೆರಿಗೆ ವಂಚನೆ ಪ್ರಕರಣದಲ್ಲಿ ಪರಸ್ಪರ ಸಹಕಾರಕ್ಕೆ ಅನುಗುಣವಾದ ಒಪ್ಪಂದಕ್ಕೆ ಸಹಿ ಹಾಕಲಾಯಿತು.[ಜೇಟ್ಲಿ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ಸಿಗರು]
* ಲಿಸ್ಟೆನ್ ಸ್ಟೈನ್ ನ ಬ್ಯಾಂಕುಗಳಲ್ಲಿರುವ ಭಾರತೀಯ ಮೂಲದ ಖಾತೆದಾರರ ವಿವರಗಳನ್ನು ಬಹಿರಂಗಪಡಿಸಲು ಏಕೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು.
* ಎಚ್ ಎಸ್ ಬಿಸಿ ಜಿನಿವಾದಿಂದ ಸುಮಾರು 600ಕ್ಕೂ ಅಧಿಕ ಭಾರತೀಯ ಖಾತೆದಾರರ ವಿವರಗಳನ್ನು ಫ್ರಾನ್ಸ್ ಪಡೆದುಕೊಂಡಿತು ನಂತರ ಇದೇ ದಾಖಲೆಯನ್ನು ಭಾರತಕ್ಕೆ ಕಳಿಸಿತು.

ನವೆಂಬರ್ 2013: ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರು ವಿದೇಶದಿಂದ ಕಪ್ಪು ಹಣ ವಾಪಸ್ ತರಲು ಬಲಿಷ್ಠವಾದ ಕಾನೂನು ರೂಪಿಸುವ ಅಗತ್ಯವಿದೆ ಎಂದರು. ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆ ಪ್ರಚಾರದಲ್ಲೂ ಇದೇ ಮಾತನ್ನು ಮೋದಿ ಪುನರುಚ್ಚರಿಸಿದರು.
ಫೆಬ್ರವರಿ 2014: ಕಪ್ಪು ಹಣ ಕುರಿತಂತೆ ಮಾಹಿತಿ ಇದ್ದರೂ ತಮ್ಮ ಅಧಿಕಾರ ಅವಧಿಯಲ್ಲಿ ಕಪ್ಪು ಹಣ ವಾಪಸ್ ತರಲು ವಿವಿಧ ಮಿತ್ರ ಪಕ್ಷಗಳ ಒಮ್ಮತವಿರಲಿಲ್ಲ. ಈ ಬಗ್ಗೆ ವಿವಿಧ ಪಕ್ಷಗಳ ಮುಖಂಡರ ಜೊತೆ ಚರ್ಚಿಸುವುದು ಅನಿವಾರ್ಯವಾಗಿತ್ತು ಎಂದು ಮನಮೋಹನ್ ಸಿಂಗ್ ಹೇಳಿದರು.
ಏಪ್ರಿಲ್ 2014: ಲಿಸ್ಟೆಸ್ಟೈನ್ ಬ್ಯಾಂಕುಗಳಲ್ಲಿರುವ 26 ಖಾತೆದಾರರ ವಿವರಗಳನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಯುಪಿಎ ಸರ್ಕಾರ.
* ಆಮ್ ಅದ್ಮಿ ಪಕ್ಷ ಕಪ್ಪು ಹಣವನ್ನು ವಾಪಸ್ ತರುವುದಾಗಿ ಜನರಿಗೆ ಭರವಸೆ ನೀಡಿತು. [ಸ್ವಿಸ್ ಖಾತೆಗಳ ರಹಸ್ಯ ಸಿಕ್ಕಿದ್ದು ಹೇಗೆ?]
ಮೇ 2014: ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮೇ ತಿಂಗಳಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(SIT) ರಚಿಸಿತು. ನಿವೃತ್ತ ನ್ಯಾ. ಎಂ.ಬಿ ಶಾ ಸಮಿತಿ ಮುಖ್ಯಸ್ಥರಾಗಿದ್ದಾರೆ.
ಜುಲೈ 2014 : ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಕಪ್ಪು ಹಣ ವಾಪಸ್ ವಿಷಯ ಪ್ರಸ್ತಾಪಿಸಿ ಸ್ವಿಸ್ ಬ್ಯಾಂಕುಗಳ ಜೊತೆ ಮಾತುಕತೆ ಆರಂಭವಾಗಿದೆ ಎಂದರು.
* ಕೇಂದ್ರ ಬಜೆಟ್ ಮಂಡನೆಯಲ್ಲೂ ಕಪ್ಪು ಹಣ ವಾಪಸ್ ತರುವ ಬಗ್ಗೆ ವಿಶೇಷ ಉಲ್ಲೇಖ ಕಂಡು ಬಂದಿತ್ತು. [ಕಪ್ಪು ಹಣ ಕೇಸ್: HSBC ಬ್ಯಾಂಕಿಗೆ ಕುತ್ತು]
ಅಕ್ಟೋಬರ್ 2014: ತೆರಿಗೆ ವಂಚಕರ ಹೆಸರು ಬಹಿರಂಗ ಪಡಿಸಲು ಸರ್ಕಾರ ಹಿಂದೇಟು ಹಾಕುತ್ತಿಲ್ಲ. ಅದರೆ, ಎರಡು ದೇಶಗಳ ನಡುವಿನ ತೆರಿಗೆ ಸಂಬಂಧಿಸಿದ ಕಾನೂನಿಗೆ ಬೆಲೆ ಕೊಟ್ಟು ಹೆಸರನ್ನು ಗೌಪ್ಯವಾಗಿಡಲು ಸರ್ಕಾರ ನಿರ್ಧರಿಸಿತ್ತು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದರು.
* ಅ.27, 2014ರಂದು ಉದ್ಯಮಿಗಳಾದ ಪ್ರದೀಪ್ ಬರ್ಮನ್, ಪಂಕಜ್ ಲೋಧಿಯಾ, ಟಿಂಬ್ಲೋ ಪ್ರೈ ಲಿ. ನ ರಾಧಾ ಸತೀಶ್, ಚೇತನ್ ಎಸ್, ರೋಹನ್ ಎಸ್, ಅಣ್ಣಾ ಸಿ, ಮಲ್ಲಿಕಾ ಆರ್ ಅವರನ್ನು ಕಪ್ಪು ಹಣ ಹೊಂದಿರುವ ಖಾತೆದಾರರು ಎಂದು ಹೆಸರಿಸಿ ಎನ್ ಡಿಎ ಸರ್ಕಾರ ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications