Wayanad: 31 ಗಂಟೆ, 140 ಜನ, 190 ಫೀಟ್ ಉದ್ದದ ಬ್ರಿಡ್ಜ್: ಎರಡು ಗ್ರಾಮಗಳ ನಡುವೆ ಸಂಪರ್ಕ ಕೊಂಡಿ
ವಾಯನಾಡ್: ಕೇರಳದ ವಾಯನಾಡ್ನಲ್ಲಿ ಭೂ ಕಸಿತ ಸಂಭವಿಸಿದ್ದು ಜನರ ಜೀವನದ ಜೊತೆ ಚೆಲ್ಲಾಟವಾಡಿದೆ. ರಕ್ಷಣಾ ಕಾರ್ಯಕ್ಕೆ ಸೇನೆ ಸಹ ಕೈ ಜೋಡಿಸಿದೆ. ಇದೇ ವೇಳೆ ಭಾರತೀಯ ಸೇನಾ ತಂಡ ಕೇವಲ 31 ಗಂಟೆಗಳಲ್ಲಿ ನಿರ್ಮಿಸಿದ ಬ್ರಿಡ್ಜ್ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸೈನಿಕರು ನಿರ್ಮಿಸಿದ ಬ್ರಿಡ್ಜ್ ಭೂಕುಸಿತದಿಂದ ಭಾರೀ ಅನಾಹುತಕ್ಕೆ ಈಡಾದ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳಿಗೆ ಜೀವ ಸೇತುವೆ ಆಗಿದೆ. ಈ ಸೇತುವೆಯನ್ನು ಸೈನಿಕರ ತಂಡ ಕೇಲವ 31 ಗಂಟೆಗಳಲ್ಲಿ ನಿರ್ಮಿಸಿ ಸಾಧನೆ ಗೈದಿದೆ. 190 ಫೀಟ್ ಉದ್ದದ ಬೈಲಿ ಬ್ರಿಡ್ಜ್ ಈಗ ಎಲ್ಲರ ಗಮನ ಸೆಳೆದಿದೆ.

ಬ್ರಿಡ್ಜ್ ನಿರ್ಮಿಸಿದ್ದು ಹೇಗೆ?
ಮಂಗಳವಾರ ವಯನಾಡಿನಲ್ಲಿ ಭೂ ಕುಸಿತವಾಗುತ್ತಿದ್ದಂತೆ ಅಲರ್ಟ್ ಆದ ಸೇನಾ ತಂಡ, ಎರಡು ಗ್ರಾಮಗಳ ಜೋಡಣೆಗೆ ಒಂದು ಸೇತುವೆ ನಿರ್ಮಿಸುವ ಬ್ಲ್ಯೂ ಪ್ರಿಂಟ್ ಅದಾಗಲೇ ನಿರ್ಮಿಸಿ ಆಗಿತ್ತು. ಅದಕ್ಕಾಗಿ ಬೆಂಗಳೂರಿನಿಂದ 10 ಅಡಿ ಉದ್ದದ ಪ್ಯಾನಲ್ಗಳನ್ನು 20 ಟ್ರಕ್ಗಳಲ್ಲಿ ಬೆಂಗಳೂರಿನಿಂದ ಚೂರಲ್ಮಲಾಗೆ ಸಾಗಿಸಲಾಯಿತು. ಈ ಬ್ರಿಡ್ಜ್ ನಿರ್ಮಿಸಲು ಒಟ್ಟಾರೆಯಾಗಿ 19 ಸ್ಟೀಲ್ ಪ್ಯಾನಲ್ಗಳ ಸಹಾಯದಿಂದ 190 ಅಡಿ ಬ್ರಿಡ್ಜ್ ನಿರ್ಮಿಸಲಾಯಿತು.
ಈ ಬ್ರಿಡ್ಜ್ ನಿರ್ಮಾಣ ಕಾರ್ಯಕ್ಕೆ ಮಂದ್ರಾಸ್ನಿಂದ ನುರಿತ ಇಂಜಿನಿಯರ್ಗಳ ತಂಡ ಸೇನೆಯೊಂದಿಗೆ ಕೈ ಜೋಡಿಸಿತು. ಇಂಜಿನಿಯರ್ಗಳು ಜುಲೈ 31 ಬೆಳಗ್ಗೆ 9 ಗಂಟೆಗೆ ಸ್ಥಳಕ್ಕೆ ಬಂದಿಳಿಯಿತು. 140 ಅಧಿಕಾರಿಗಳ ತಂಡದಿಂದ ಬ್ರಿಡ್ಜ್ ನಿರ್ಮಾಣ ಕಾರ್ಯ ಆರಂಭವಾಯಿತು. ಈ ಸೇತುವೆ ಮೇಲೆ ಒಂದು ಟ್ರಕ್ ಓಡಾಡುವ ಸ್ಥಳವನ್ನು ನಿರ್ಮಿಸಲಾಯಿತು. ಈ ಬ್ರಿಡ್ಜ್ ಸುಮಾರು 24 ಟನ್ಗಳ ಭಾರವನ್ನು ಸಹಿಬಲ್ಲದಾಗಿದೆ.

ಸೈನಿಕರ ತಂಡದ ಶ್ರಮದಿಂದ ಆಗಸ್ಟ್ 1, ಸಂಜೆ 6 ಗಂಟೆಗೆ ಈ ಬ್ರಿಡ್ಜ್ ನಿರ್ಮಾಣ ಕಾರ್ಯ ಪೂರ್ಣ ಗೊಂಡಿತು. ಎಲ್ಲೆಡೆ ಹರ್ಷೋದ್ಘಾರ.. ಮೊದಲು ಸೇನಾ ವಾಹನ ಚಲಾಯಿಸಿತು. ನಂತರ ಆಂಬ್ಯುಲೆನ್ಸ್ ಹೋಗಲು ಅನುವು ಮಾಡಿಕೊಡಲಾಯಿತು. ಸೈನಿಕರ ಈ ಮಹತ್ತರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡಿಗರ ನರಳಾಟ
ಕೇರಳದ ಭೂ ಕುಸಿತದಲ್ಲಿ ಕರ್ನಾಟಕದ 40 ರಿಂದ 45 ಕುಟುಂಬಗಳು ಸಿಲುಕಿಕೊಂಡಿವೆ. ಈ ಕುಟುಂಬಗಳು ಸದ್ಯ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ರಾಜ್ಯದ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಅನೇಕ ಕುಟುಂಬಗಳು ತಮ್ಮ ಆತ್ಮೀಯರನ್ನು ಕಳೆದುಕೊಂಡಿವೆ. ತಮ್ಮವರನ್ನು ಗುರುತಿಸಲು ಅಲದಾಟ ನಡೆಸುತ್ತಿದ್ದಾರೆ.

ದಿನಗೂಲಿ ಕೆಲಸಗಾರರು
ಕರ್ನಾಟಕದಿಂದ ಹಲವು ಜನ ಜೀವನೋಪಾಯಕ್ಕಾಗಿ ವಾಯನಾಡಿಗೆ ತೆರಳಿದ್ದರು. ಅಲ್ಲಿ ದಿನಗೂಲಿ ಕೆಲಸವನ್ನು ಮಾಡುತ್ತಿದ್ದರು. ಟೀ ಎಸ್ಟೆಟ್ಗಳಲ್ಲಿ ರಾಜ್ಯದ ಜನರು ಹೆಚ್ಚಾಗಿ ಕಂಡು ಬರುತ್ತಿದ್ದರು. ಈ ಘಟನೆಯಲ್ಲಿ ನಾಪತ್ತೆಯಾದ 15 ಜನರಲ್ಲಿ ಮೂರು ಮಂಡ್ಯ ಹಾಗೂ ನಾಲ್ವರು ಚಾಮರಾಜನಗರದವರು ಮೃತ ಪಟ್ಟಿರುವುದು ಧೃಡಪಟ್ಟಿದೆ. ನಾಪತ್ತೆಯಾದವರ ಶೋಧ ಕಾರ್ಯ ಭರದಿಂದ ನಡೆಯುತ್ತಿದೆ.
ಮೂರ್ನಾಲ್ಕು ದಿನಗಳಿಂದ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಬದುಕಿಳಿದವರನ್ನು ರಕ್ಷಿಸುವ ಕೆಲಸಕ್ಕೆ ಚುರುಕು ಮುಟ್ಟಿದೆ. ಇನ್ನು ಭೂಕುಸಿತದ ಸ್ಥಳದಲ್ಲಿ ಸ್ಥಾಪಿಸಲಾ ಗಂಜಿ ಕೇಂದ್ರಗಳಲ್ಲಿ ನೋವಿನ ಆಕ್ರಂದನ ಮುಗಿಲು ಮುಟ್ಟಿದೆ.
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications