ಪರಮಾಣು ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಉಡಾವಣೆ ಯಶಸ್ವಿ
ಬೆಂಗಳೂರು, ಜ. 31: ಡಿಆರ್ಡಿಓ ಮಹತ್ವಾಕಾಂಕ್ಷಿಯ ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಜಿಗಿಯುವ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಬಿಎಂ) ಅಗ್ನಿ-5 ಕ್ಷಿಪಣಿ ಪರೀಕ್ಷೆಯು ಶನಿವಾರ ಬೆಳಗ್ಗೆ ಯಶಸ್ವಿಯಾಗಿದೆ. ಇದು ಅಗ್ನಿ-5ರ ಮೂರನೇ ಪರೀಕ್ಷೆಯಾಗಿದ್ದು, ಇದೇ ಪ್ರಥಮ ಬಾರಿಗೆ ಕ್ಯಾನಿಸ್ಟರ್ ಮೂಲಕ ಉಡಾವಣೆ ಮಾಡಲಾಗಿದೆ.
ಈ ಕುರಿತು ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಜೇಶನ್ (ಡಿಆರ್ಡಿಓ) ಮೂಲಗಳು ಒನ್ಇಂಡಿಯಾ ಕನ್ನಡಕ್ಕೆ ಖಚಿತ ಮಾಹಿತಿ ನೀಡಿವೆ. ಓಡಿಶಾದ ವ್ಹೀಲರ್ ದ್ವೀಪದಿಂದ ಬೆಳಗ್ಗೆ 8.09 ಗಂಟೆಗೆ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದ್ದು, ಕ್ಷಿಪಣಿಯು ಎಲ್ಲ ನಿರೀಕ್ಷೆಯನ್ನೂ ಮುಟ್ಟಿದೆ. [ಅಗ್ನಿ 5 ಮೂರನೇ ಉಡಾವಣೆಗೆ ಡಿಆರ್ ಡಿಓ ಸಜ್ಜು]
ಭಾವನಾತ್ಮಕ ಬೀಳ್ಕೊಡುಗೆ : ಒನ್ಇಂಡಿಯಾ ಕನ್ನಡ ಈ ಮೊದಲು ವರದಿ ಮಾಡಿದ್ದಂತೆ ಅಗ್ನಿ-5 ಕ್ಷಿಪಣಿಯ ಯಶಸ್ವಿ ಉಡಾವಣೆ ಹಿನ್ನೆಲೆಯಲ್ಲಿ ಡಿಆರ್ಡಿಓದಿಂದ ಹೊರನಡೆಯುತ್ತಿರುವ ಡಾ. ಅವಿನಾಶ್ ಚಂದರ್ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ನೀಡಿದಂತಾಗಿದೆ. ಜ. 31ರ ದಿನಾಂತ್ಯಕ್ಕೆ ಅವಿನಾಶ್ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ.

"ಯೋಜನೆಯ ಎಲ್ಲ ನಿರೀಕ್ಷೆಗಳೂ ಈಡೇರಿವೆ. ಈ ಮೂಲಕ ಕನಸು ನನಸಾಗಿದೆ. ನಮ್ಮ ಪ್ರಕಾರ ಇದು ಶೇ. 200ರಷ್ಟು ಯಶಸ್ಸು ಗಳಿಸಿದೆ. ಇದಕ್ಕಿಂತ ಉತ್ತಮ ಪರಿಣಾಮವನ್ನು ನಾವು ನಿರೀಕ್ಷಿಸುವುದು ಸಾಧ್ಯವಿಲ್ಲ" ಎಂದು ಡಿಆರ್ಡಿಓ ಪ್ರಧಾನ ನಿರ್ದೇಶಕರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. [ಡಾ. ಅವಿನಾಶ್ ವಜಾ ಎಷ್ಟು ಸರಿ?]
"ಶನಿವಾರ ನಡೆದದ್ದು ಅಗ್ನಿ-5ರ ಮೂರನೇ ಉಡಾವಣೆ (ಅಗ್ನಿ5-03 ಮಿಶನ್)ಯಾಗಿದ್ದು, ಇದನ್ನು ರಸ್ತೆಯ ಮೊಬೈಲ್ ಉಡಾವಣಾ ವಾಹನದ ಮೂಲಕ ಪರೀಕ್ಷಿಸಲಾಗಿದೆ. ಇನ್ನೂ ಎರಡು ಉಡಾವಣೆ ಮಾಡುವ ನಿರೀಕ್ಷೆ ಹೊಂದಿದ್ದೇವೆ" ಎಂದು ಡಿಆರ್ಡಿಓ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಇದರ ವ್ಯಾಪ್ತಿ 5,000 ಕಿ.ಮೀ.ಗಿಂತ ಹೆಚ್ಚು : 'ಅಗ್ನಿ-5' ಇದೊಂದು ಮೂರು ಹಂತಗಳ, ದೃಢವಾಗಿ ಮುನ್ನುಗ್ಗುವ, ರೋಡ್ ಮೊಬೈಲ್ ವಾಹನದಿಂದ ಉಡಾವಣೆಗೊಳ್ಳಬಲ್ಲಂತಹ ಪರಮಾಣು ಸಾಮರ್ಥ್ಯದ ಅತ್ಯಂತ 'ದೂರ ಪ್ರದೇಶದ ವ್ಯಾಪ್ತಿ ಹೊಂದಿರುವ ಖಂಡಾಂತರ ಕ್ಷಿಪಣಿ (ಎಲ್ಆರ್ಬಿಎಂ)'ಯಾಗಿದೆ. 5,000 ಕಿ.ಮೀ. ವ್ಯಾಪ್ತಿಗಿಂತ ಹೆಚ್ಚು ದೂರದವರೆಗೆ ಒನ್ ಟನ್ ಭಾರದ ವಸ್ತುಗಳನ್ನು ಒಯ್ಯುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ. [ಮೋದಿ ಸಲಹೆಗೆ ಏನೆನ್ನುತ್ತೆ ಡಿಆರ್ ಡಿಓ]
ಈ ಕ್ಷಿಪಣಿಯ ಎಲ್ಲ ಮೂರು ಹಂತಗಳನ್ನು ಫ್ಲೆಕ್ಸ್ ನೋಜಲ್ ಪದ್ಧತಿ ಮೂಲಕ ನಿಯಂತ್ರಿಸಲಾಗಿದೆ. 'ಇನ್ನೋವೇಟಿವ್ ಇನರ್ಶಿಯಲ್ ಎನರ್ಜಿ ಮ್ಯಾನೇಜ್ಮೆಂಟ್ ಎಕ್ಸ್ಪ್ಲಿಸಿಟ್ ಗೈಡೆನ್ಸ್'ನಿಂದ ಮಾರ್ಗದರ್ಶನ ಸಿಕ್ಕಿದೆ.
ಅಗ್ನಿ-5ರ ಮೊದಲ ಎರಡು ಪ್ರಯೋಗಗಳನ್ನು 'ಹಾಟ್ ಲಾಂಚ್ ಕಾನ್ಫಿಗರೇಶನ್'ನಲ್ಲಿ ಉಡಾವಣೆ ಮಾಡಲಾಗಿತ್ತು. ಮೊದಲ ಪ್ರಯೋಗ (ಎ5-01) 2012ರ ಏಪ್ರಿಲ್ 19ರಂದು ಹಾಗೂ ಎರಡನೇ ಪ್ರಯೋಗ (ಎ5-02) 2013ರ ಸೆಪ್ಟೆಂಬರ್ 15ರಂದು ನಡೆದಿದೆ. [ಅಗ್ನಿ 5 ವ್ಯಾಪ್ತಿಯಲ್ಲಿ ಇಡೀ ಚೀನಾ]
ಮಾಧ್ಯಮಕ್ಕೆ ಪ್ರವೇಶವಿರಲಿಲ್ಲ : ಕ್ಷಿಪಣಿ ಉಡಾವಣೆ ಮಾಡುವ ಸ್ಥಳಕ್ಕೆ ಪತ್ರಿಕಾ ಪ್ರತಿನಿಧಿಗಳನ್ನು ಆಹ್ವಾನಿಸಿರಲಿಲ್ಲ. "ಡಾ. ಅವಿನಾಶ್ ಅವರು ಯಾವುದೇ ವ್ಯಾಕುಲತೆ ಎದುರಿಸಲು ಸಿದ್ಧರಿರಲಿಲ್ಲ. ಕೇವಲ ಕ್ಷಿಪಣಿ ಉಡಾವಣೆ ಮೇಲೆ ಮಾತ್ರ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದರು. ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ಹೇಳಿಕೆಯನ್ನು ಕ್ಷಿಪಣಿ ಉಡಾವಣೆ ಮಾಡಿದ ನಂತರ ಅಥವಾ ಡಿಆರ್ಡಿಓದಿಂದ ನಿವೃತ್ತಿ ಪಡೆದ ನಂತರವೇ ನೀಡಲು ನಿರ್ಧರಿಸಿದ್ದರು" ಎಂದು ಡಾ. ಅವಿನಾಶ್ ಅವರ ಹತ್ತಿರದ ವ್ಯಕ್ತಿಯೋರ್ವರು ತಿಳಿಸಿದ್ದಾರೆ.
(ಲೇಖಕರು ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಪತ್ರಕರ್ತರು. ಅವರು ಒನ್ಇಂಡಿಯಾದ ಸಲಹಾ ಸಂಪಾದಕ (ರಕ್ಷಣೆ)ರಾಗಿದ್ದಾರೆ. ಅವರು ಟ್ವೀಟ್ಟರ್ ಐಡಿ @writetake)
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications