ಧೂಮಪಾನಿಗಳ ಸಂಖ್ಯೆ: ಚೀನಾದ ಹಿಂದೆಯೇ ಇದೆ ಭಾರತ!
ನವದೆಹಲಿ, ಮೇ 31: ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವ ರಭಸದಲ್ಲಿರುವ ಭಾರತ, ಧೂಮಪಾನಿಗಳ ಸಂಖ್ಯೆಯ ವಿಚಾರದಲ್ಲಿಯೂ ಚೀನಾವನ್ನು ಹಿಂಬಾಲಿಸುತ್ತಿದೆ.
15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಜಗತ್ತಿನ 1.1 ಬಿಲಿಯನ್ ಧೂಮಪಾನಿಗಳಲ್ಲಿ ಭಾರತೀಯರ ಧೂಮಪಾನಿಗಳ ಸಂಖ್ಯೆ 106 ಮಿಲಿಯನ್ನಷ್ಟಿದೆ. ಚೀನಾದ ನಂತರದ ಸ್ಥಾನವನ್ನು ಭಾರತ ಗಳಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.
ಮೂರನೇ ಸ್ಥಾನದಲ್ಲಿರುವ ಇಂಡೋನೇಷ್ಯಾದಲ್ಲಿ 74 ಮಿಲಿಯನ್ ಧೂಮಪಾನಿಗಳಿದ್ದಾರೆ. ವಿಶ್ವದ 367 ಮಿಲಿಯನ್ ಹೊಗೆರಹಿತ ತಂಬಾಕು ಬಳಕೆದಾರರ ಪೈಕಿ 200 ಮಿಲಿಯನ್ನಷ್ಟು ಮಂದಿ ಭಾರತದಲ್ಲಿಯೇ ಇದ್ದಾರೆ ಎಂದು ಈ ವರದಿ ಅಂದಾಜಿಸಿದೆ.

15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಕನಿಷ್ಠ 367 ಮಿಲಿಯನ್ ಜನರು ಸಿಗರೇಟು, ಬೀಡಿ ಮುಂತಾದವುಗಳಲ್ಲದೆ ತಂಬಾಕನ್ನು ಬಳಕೆ ಮಾಡುತ್ತಿದ್ದಾರೆ. ತಂಬಾಕು ಬಳಕೆದಾರರಲ್ಲಿ ಪುರುಷರ ಸಂಖ್ಯೆ (237 ಮಿಲಿಯನ್) ಮಹಿಳೆಯರ (129 ಮಿಲಿಯನ್) ಸಂಖ್ಯೆಗಿಂತ ಹೆಚ್ಚಿದೆ ಎಂದು ಡಬ್ಲ್ಯೂಎಚ್ಒ ಅಂದಾಜಿಸಿದೆ.
ಹೊಗೆರಹಿತ ತಂಬಾಕು ಬಳಕೆ ಎಲ್ಲ ಪ್ರದೇಶಗಳಲ್ಲಿ ಇದ್ದರೂ, ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ (301 ಮಿಲಿಯನ್) ಬಳಕೆದಾರರಿದ್ದು, ಇದು ಜಗತ್ತಿನ ಎಲ್ಲ ಬಳಕೆದಾರರ ಶೇ 82ರಷ್ಟಾಗಿದೆ.
15 ಮತ್ತು ಅದಕ್ಕಿಂತ ಮೇಲಿನ ವಯಸ್ಸಿನ ಜನರಲ್ಲಿನ ತಂಬಾಕು ಬಳಕೆಯನ್ನು ಶೇ 30ರಷ್ಟು ತಗ್ಗಿಸುವ ಮೂಲಕ ತಂಬಾಕು ಕಾರಣದಿಮದ ಸಂಭವಿಸುವ ಕಾಯಿಲೆಗಳು ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶ ತೀವ್ರ ಹಿನ್ನಡೆ ಅನುಭವಿಸಿದೆ. ಈಗಿನ ಸನ್ನಿವೇಶವೇ ಮುಂದುವರಿದರೆ 2025ರ ವೇಳೆಗೆ ಶೇ 22ರಷ್ಟು ಸಾಧನೆ ಮಾತ್ರ ಸಾಧ್ಯ ಎನ್ನಲಾಗಿದೆ.
2000ನೇ ಇಸವಿಯಿಂದಲೂ ತಂಬಾಕು ಬಳಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ತಂಬಾಕು ಸಂಬಂಧಿ ಕಾಯಿಲೆಗಳಿಂದ ಜನರನ್ನು ರಕ್ಷಿಸುವ ಜಾಗತಿಕ ಗುರಿಯನ್ನು ತಲುಪುವಲ್ಲಿ ವಿಫಲವಾಗಿದ್ದೇವೆ.
ಪ್ರತಿ ವರ್ಷ ಜಗತ್ತಿನಲ್ಲಿ 7 ಮಿಲಿಯನ್ ಜನರು ತಂಬಾಕಿಗೆ ಬಲಿಯಾಗುತ್ತಿದ್ದಾರೆ. 2000ರಲ್ಲಿ ತಂಬಾಕು ಬಳಸುವವರ ಸಂಖ್ಯೆ ಶೇ 27 ರಷ್ಟಿದ್ದರೆ 2016ರಲ್ಲಿ ಶೇ 20ರಷ್ಟಿತ್ತು ಎಂದು ಡಬ್ಲ್ಯೂಎಚ್ಒದ ಹೊಸ ಜಾಗತಿಕ ವರದಿ ತಿಳಿಸಿದೆ.
ತಂಬಾಕು ಬಳಕೆ ಮತ್ತು ಪರೋಕ್ಷವಾಗಿ ಧೂಮಪಾನಿಗಳಾಗುವವರು ಹೃದಯಾಘಾತ, ಪಾರ್ಶ್ವವಾಯುವಿನಂತಹ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇವರ ಪ್ರಮಾಣ ವರ್ಷಕ್ಕೆ 3 ಮಿಲಿಯನ್ನಷ್ಟಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications