India and China: ಹುತಾತ್ಮರ ಸಮಾಧಿಯ ಮೇಲೆ ಖಿ ಖಿ ಖಿ ಖಿ ಡಿಪ್ಲೊಮಸಿ: ಮೋದಿ ವಿರುದ್ಧ ನಟ ಕಿಶೋರ್ ವಾಗ್ದಾಳಿ!
India and China: ಹುತಾತ್ಮರ ಸಮಾಧಿಯ ಮೇಲೆ ಖಿ ಖಿ ಖಿ ಖಿ ಡಿಪ್ಲೊಮಸಿ ಮೋದಿ ವಿರುದ್ಧ ನಟ ಕಿಶೋರ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಈಚೆಗೆ ವಿವಿಧ ವಿಚಾರಗಳ ಬಗ್ಗೆ ಆರ್ಎಸ್ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಟ ಕಿಶೋರ್ ಅವರು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಸಾರ್ವಜನಿಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಇದರ ಬೆನ್ನಲ್ಲೇ ಅವರು ಮತ್ತೊಂದು ಬರಹವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ನಟ ಕಿಶೋರ್ ಅವರ ಬರಹ ಈ ರೀತಿ ಇದೆ. ಹುತಾತ್ಮರ ಸಮಾಧಿಯ ಮೇಲೆ ಮಾಡಿದ ಖಿ ಖಿ ಖಿ ಖಿ ಡಿಪ್ಲೊಮಸಿ ರಾಜಕೀಯದಿಂದ ಸಿಕ್ಕ ಲಾಭ ... ಭಾರತದ ಅಖಂಡತೆಯನ್ನೇ ಕೆಣಕುವ ಹೊಸ ವರ್ಲ್ಡ್ ಆರ್ಡರ್. ಆತಂಕವಾದವನ್ನು ಮುಗಿಸಿಬಿಡುತ್ತೇವೆಂದು ನಗದು ಅಮಾನ್ಯೀಕರಣ ಮಾಡಿ ದೇಶದ ಆರ್ಥಿಕತೆಯ, ದೇಶದ ಅಸಂಖ್ಯ ಜನರ ಉದ್ದಿಮೆಗಳ ಬೆನ್ನುಮುರಿದ ಅಯೋಗ್ಯರು, ಅಮೆರಿಕಕ್ಕೆ ಉತ್ತರ ಕೊಡುತ್ತೇವೆಂದು ಹೇಳಿ ಪೆಹೆಲ್ಗಾಮ್ ನಲ್ಲಿ ಅಮಾಯಕರನ್ನು ಕೊಂದ ಆತಂಕವಾದಿಗಳ ಜೊತೆ ಸೇರಿ ನಮ್ಮ ಅನೇಕ ವೀರ ಸೈನಿಕರನ್ನೂ, ಲೆಕ್ಕ ಹೇಳದ ಜನರ ಹಣದಲ್ಲಿ ಕೊಂಡ ರಫೇಲ್ ಗಳನ್ನೂ ಹೊಡೆದುರುಳಿಸಿದ ವಂಚಕ ಚೀನಾದೊಂದಿಗೆ ಹಲ್ಲು ಕಿಸಿದು ಫೋಟೋ ಪ್ರಚಾರ ಡಿಪ್ಲೊಮಸಿ ಮಾಡಿದ್ದರಿಂದ ದೇಶಕ್ಕಾದ ಪ್ರಯೋಜನ ಇದೇನು ಎಂದು ಪ್ರಶ್ನೆ ಮಾಡಿದ್ದಾರೆ.

ಪುಲ್ವಾಮಾ ಗಲ್ವಾನ್ ಪೆಹೆಲ್ಗಾಮ್ ದೆಹಲಿ ಯಾವುದೇ ದಾಳಿಯ ಜವಾಬ್ದಾರಿ ಹೊರದೇ ಬರೀ ಅಂಬಾನಿ ಅಡಾನಿಗಳಿಗೆ ದಲ್ಲಾಳಿಯ ಕೆಲಸ ಮಾಡಿ ಇಡೀ ವಿದೇಶ ನೀತಿಯನ್ನು ಫೋಟೋ ಪ್ರಚಾರ ಡಿಪ್ಲೊಮಸಿಗಿಳಿಸಿ ಇಂದು ಇಡೀ ಪ್ರಪಂಚದಲ್ಲಿ ಮಿತ್ರ ದೇಶಗಳೇ ಇಲ್ಲದ ಮಟ್ಟಕ್ಕೆ ಬಂದು ಕೂತಿದೆಯಷ್ಟೆ. ಬಂಪರ್ ಜಿಡಿಪಿ, ನಾಲ್ಕನೇ ದೊಡ್ಡ ಎಕಾನಮಿ ಎಂಬ ಬಡಾಯಿಯ ಹಿಂದೆ ಎಂದೂ ಇಲ್ಲದ ಮಟ್ಟಿಗೆ ಬಿದ್ದಿರುವ ರೂಪಾಯಿ, ದೇಶದಲ್ಲಿನ ಬಡತನದಂತೆ ದುನಿಯಾ ಮೆ ಡಂಕಾದ ಬಡಾಯಿಯ ಹಿಂದೆ ಜಿಯೊ ಪೊಲಿಟಿಕ್ಸ್ ನಲ್ಲಿ ರಿಪೇರಿ ಮಾಡಲಾಗದ ಒಂಟಿತನದಲ್ಲಿ ನಿಂತಿದೆ ನಮ್ಮ ವಿಶ್ವಗುರು ಭಾರತ ಎಂದಿದ್ದಾರೆ.
ಅದು ಸಾಲದೆಂದು ಆತಂಕವಾದಿ ಪಾಕೀಸ್ತಾನದ ಹೆಸರಲ್ಲಿ ಓಟು ಕೇಳುವ ಜನ ಅವರೊಂದಿಗೇ ಕ್ರಿಕೆಟ್ ಅಡಿ ಇವರ ಜೇಬಿಗೆ ಹಣ ಇಳಿಸೋ ಯೋಜನೆ ಬೇರೆ. ಇದೇ ಹುತಾತ್ಮರ ರಕ್ತಕ್ಕೆ ನಾವು ಕಟ್ಟಿದ ಬೆಲೆಗೆ ಸಿಕ್ಕ ಪ್ರತಿಫಲವೇ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video












Click it and Unblock the Notifications