ಯೋಗ ಗುರು ರಾಮ್ ದೇವ್ ಮೋಜಿನ ರೈಡ್ ನೋಡಿ
ನವದೆಹಲಿ, ಫೆ. 09: ಯೋಗ ಗುರು ಬಾಬಾ ರಾಮದೇವ್ ಅವರು ತಮ್ಮ ಯೋಗ ಕಲಿಕೆ ಜ್ಞಾನವನ್ನು ಎಲ್ಲರಿಗೂ ಹಂಚುವುದರ ಜೊತೆಗೆ 'ಪತಂಜಲಿ' ಬ್ರ್ಯಾಂಡ್ ಕೂಡಾ ಬೆಳೆಸುತ್ತಿದ್ದಾರೆ. ಇತ್ತೀಚೆಗೆ ಪೋರ್ಟ್ ಬ್ಲೇರ್ ಗೆ ಬಂದಿದ್ದ ರಾಮ್ ದೇವ್, ಮೋಜಿನ ರೈಡ್ ಹೋಗಿ ಎಲ್ಲರನ್ನು ದಂಗಾಗುವಂತೆ ಮಾಡಿದರು.
ಪೋರ್ಟ್ ಬ್ಲೇರ್ ನಲ್ಲಿ ಯೋಗ ಶಿಬಿರ ಉದ್ಘಾಟನೆಗಾಗಿ ಬಂದಿದ್ದ ರಾಮದೇವ್ ಅವರು ವಾಟರ್ ಸ್ಕೂಟರ್ ಏರಿ ಚಲಿಸಲು ಆರಂಭಿಸುತ್ತಿದ್ದಂತೆ ಎಲ್ಲರೂ ಅಚ್ಚರಿಯಿಂದ ಕಾಣತೊಡಗಿದರು. ಜೆಟ್ ಸ್ಕೀ ರೈಡ್ ನಡೆಸಿದ ಬಾಬಾ ಕಂಡು ಮೂಕವಿಸ್ಮಿತರಾದ ಜನ ನೋಡುತ್ತಿದ್ದರು.[ನೆಸ್ಲೆ ನಂತರ ಅಡಿಡಾಸ್ ಜತೆ ರಾಮ್ ದೇವ್ ಪೈಪೋಟಿ?]

ಭಾರತೀಯ ಕರಾವಳಿ ಪಡೆ (ಐಸಿಜಿ) ಅಧಿಕಾರಿಗಳಿಗೆ ಯೋಗ ಕಲಿಸಲು ಬಂದಿದ್ದ ಬಾಬಾ ರಾಮದೇವ್ ಅವರು ಅಲ್ಲಿನ ಕ್ರೀಡಾ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಡಗಿನ ಡೆಕ್ ನಲ್ಲಿ ಅಧಿಕಾರಿಗಳಿಗೆ ಒತ್ತಡ ರಹಿತ ಕಾರ್ಯ ನಿರ್ವಹಣೆ ಬಗ್ಗೆ ರಾಮದೇವ್ ಬೋಧನೆ ಮಾಡಿದ್ದಾರೆ.
भारतीय तटरक्षक बल को जहाज के डेक पर तनावमुक्ति के लिए पोर्ट ब्लेयर में योग सिखाते हुए
Posted by Baba Ramdev on7 February 2016
ಪತಂಜಲಿ ಬ್ರ್ಯಾಂಡ್ ಬಗ್ಗೆ : ಪತಂಜಲಿ ಬ್ರ್ಯಾಂಡ್ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಲು ಕೆಲವು ಬಹುರಾಷ್ಟ್ರೀಯ ಕಂಪನಿಗಳು ಸಂಚು ಮಾಡುತ್ತಿವೆ. ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಪತಂಜಲಿ ಉತ್ಪನ್ನಗಳನ್ನು ಬಳಸಿ ನೋಡಿ, ನಂತರ ಪ್ರತಿಕ್ರಿಯೆ ನೀಡಿ ಎಂದಿದ್ದಾರೆ.[ಫ್ಯೂಚುರಾ ಗ್ರೂಪ್ ಜೊತೆ ಬಾಬಾ ರಾಮ್ ದೇವ್ ಡೀಲ್]
ಎಫ್ಎಂ ಸಿಜಿ ವಲಯದಲ್ಲಿ ಪತಂಜಲಿ ಬ್ರ್ಯಾಂಡ್ ಉನ್ನತಿಗೆ ಬರುತ್ತಿರುವುದು ಎಂಎನ್ ಸಿಗಳಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಅನೇಕ ರೀತಿ ಸಂಚು ರೂಪಿಸುತ್ತಿದ್ದಾರೆ. ಪತಂಜಲಿ ಉತ್ಪನ್ನಗಳ ಮಾರಾಟಗಾರರಿಗೆ ಬೆದರಿಕೆಗಳು ಬಂದಿದೆ ಎಂದರು.
नैसर्गिक सुदंरता के लिए प्रसिद्ध पोर्टब्लेयर में जेट स्की राइड करते हुए .यहां का लुभावना प्राकृतिक सौंदर्य बेमिसाल है।
Posted by Baba Ramdev on7 February 2016
'ಪುತ್ರಜೀವಕ್ ಬೀಜ್' ಬಗ್ಗೆ ವಿವಾದ ಎದ್ದಿರುವುದು ನಿಜ. ಇದರ ಸತ್ಯಾಸತ್ಯತೆ ಬಗ್ಗೆ ಏನು ಹೇಳಲಾರೆ. ಈ ಬಗ್ಗೆ ಉತ್ತರಾಂಚಲ್ ಸರ್ಕಾರ ತನಿಖೆ ನಡೆಸಿ ಯಾವ ಕ್ರಮ ಜರುಗಿಸುತ್ತದೆಯೋ ಅದಕ್ಕೆ ನಾವು ಬದ್ಧ ಎಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications